ಗೋಪಿಚಂದ್ ವಿರುದ್ಧ ಸ್ವಹಿತಾಸಕ್ತಿ ಆರೋಪ
ಭಾರತ ಬ್ಯಾಡ್ಮಿಂಟನ್ ಕೋಚ್ ವಿರುದ್ಧ ಮಹಿಳಾ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಸಿಡಿಮಿಡಿ
Team Udayavani, Dec 12, 2019, 12:22 AM IST
ನವದೆಹಲಿ: ಭಾರತ ಬ್ಯಾಡ್ಮಿಂಟನ್ ತಂಡದ ಮಾಜಿ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ, ಹೈದರಾಬಾದ್ನಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭಿಸಿದ್ದಾರೆ. ತಮ್ಮ ಅಕಾಡೆಮಿ ಆರಂಭವಾಗಿರುವುದನ್ನು ಘೋಷಿಸಿದ ಅವರು, ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಮುಖ್ಯ ತರಬೇತುದಾರ ಗೋಪಿಚಂದ್ ಮೇಲೆ ತೀವ್ರವಾಗಿ ಹರಿಹಾಯ್ದರು. ಭಾರತ ಬ್ಯಾಡ್ಮಿಂಟನ್ ಮುಖ್ಯ ತರಬೇತುದಾರರಾಗಿರುವ ಗೋಪಿಚಂದ್, ಆಯ್ಕೆಸಮಿತಿಯ ಮುಖ್ಯಸ್ಥರೂ ಹೌದು. ಹಾಗೆಯೇ ಹೈದರಾಬಾದ್ನಲ್ಲಿ ತಮ್ಮದೇ ಅಕಾಡೆಮಿ ಹೊಂದಿದ್ದಾರೆ. ಇದು ಸ್ವಹಿತಾಸಕ್ತಿಯಲ್ಲವೇ? ಇದನ್ನು ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಅಲ್ಲದೇ ಗೋಪಿಚಂದ್ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ, ತೆಲಂಗಾಣ ಸಂಸ್ಥೆಯ ಕಾರ್ಯದರ್ಶಿ, ಖೇಲೋ ಇಂಡಿಯಾದಲ್ಲಿ ಜವಾಬ್ದಾರಿ ಹೊಂದಿದ್ದಾರೆ. ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನಲ್ಲೂ ಹೊಣೆಗಾರಿಕೆಯಿದೆ. ಗೋನ್ಪೋರ್ಟ್ಸ್ನಲ್ಲೂ ಪಾತ್ರವಿದೆ. ಇವೆಲ್ಲ ನನ್ನ ಕಲ್ಪನೆಯಲ್ಲ, ಅಧಿಕೃತವಾಗಿ ದಾಖಲೆಗಳಿವೆ. ಇಷ್ಟೆಲ್ಲ ಹೊಂದಿರುವುದು ಸ್ವಹಿತಾಸಕ್ತಿಯಲ್ಲವೇ ಎಂದು ಜ್ವಾಲಾ ಖಾರವಾಗಿ ಪ್ರಶ್ನಿಸಿದರು. 2016ರ ನಂತರ ಜ್ವಾಲಾ ಬ್ಯಾಡ್ಮಿಂಟನ್ ಆಡಿಲ್ಲ. ಹಾಗಂತ ಅವರು ನಿವೃತ್ತಿಯನ್ನೂ ಘೋಷಿಸಿಲ್ಲ ಎನ್ನುವುದು ಗಮನಾರ್ಹ.
ಭಾರತೀಯ ಬ್ಯಾಡ್ಮಿಂಟನ್ ತಂಡದ ಶಿಬಿರಗಳೆಲ್ಲ ಈಗ ಹೈದರಾಬಾದ್ನಲ್ಲೇ ನಡೆಯುತ್ತಿವೆ. ದೇಶದ ಬೇರೆ ಭಾಗಗಳಲ್ಲಿ ಯಾಕೆ ನಡೆಯುತ್ತಿಲ್ಲ? ಭಾರತ ತಂಡದಲ್ಲಿ ತೆಲುಗುಯೇತರ ವ್ಯಕ್ತಿಗಳು ಎಷ್ಟು ಮಂದಿಯಿದ್ದಾರೆ? ಕಳೆದ 10 ವರ್ಷದಲ್ಲಿ ಭಾರತ ತಂಡದ ಪರ ಆಡಬಲ್ಲ ತೆಲುಗುಯೇತರ ವ್ಯಕ್ತಿಗಳು ತಯಾರಾಗಿಲ್ಲ. ಅನ್ಯರಾಜ್ಯದವರೂ ಈಗ ತೆಲಂಗಾಣದ ಪರ ಆಡುತ್ತಿದ್ದಾರೆ ಎಂದು ಜ್ವಾಲಾ ಹೇಳಿದರು. ಈ ಮೂಲಕ ಪರೋಕ್ಷವಾಗಿ ಇವಕ್ಕೆಲ್ಲ ಗೋಪಿಚಂದ್ ಅವರೇ ನೇರಕಾರಣ ಎಂದು ವಾಗ್ಧಾಳಿ ನಡೆಸಿದರು.
ದ್ವೇಷ ಹಳತು: ಗೋಪಿಚಂದ್ ಮತ್ತು ಜ್ವಾಲಾ ಗುಟ್ಟಾ ನಡುವಿನ ದ್ವೇಷಕ್ಕೆ ಹಳೆಯ ಇತಿಹಾಸವಿದೆ. ತಾನು ಭಾರತ ತಂಡದಲ್ಲಿ ಆಡುವುದು ಗೋಪಿಚಂದ್ಗೆ ಇಷ್ಟವಿಲ್ಲ ಎಂದು ಜ್ವಾಲಾ ಈ ಹಿಂದೆಯೂ ಆರೋಪಿಸಿದ್ದಾರೆ. ಅದೇ ಕಾರಣಕ್ಕೆ ನಾನು ಆಟ ನಿಲ್ಲಿಸಿದೆ ಎಂದೂ ಪರೋಕ್ಷವಾಗಿ ಜ್ವಾಲಾ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ