ಒಲಿಂಪಿಕ್ಸ್ಗೂ ಕಬಡ್ಡಿ ಸೇರ್ಪಡೆಯಾಗಲಿ: ಸುಕೇಶ್
Team Udayavani, Dec 23, 2019, 6:30 AM IST
“ದೇಶಿ ಕ್ರೀಡೆ ಕಬಡ್ಡಿ ಒಲಿಂಪಿಕ್ಸ್ಗೆ ಸೇರ್ಪಡೆ ಯಾಗಬೇಕು. 2024ರಲ್ಲಿ ಪ್ಯಾರಿಸ್ನಲ್ಲಿ ನಡೆಯ ಲಿರುವ ಒಲಿಂಪಿಕ್ಸ್ನಲ್ಲಿ ಕಬಡ್ಡಿಗೆ ಅವಕಾಶ ಲಭಿಸಿದರೆ ದೇಶವನ್ನು ಪ್ರತಿನಿಧಿಸಬೇಕು ಎಂಬ ಆಸೆಯಿದೆ’ ಎಂದು ಪ್ರೊ ಕಬಡ್ಡಿ ಲೀಗ್ನ ಬೆಂಗಾಲ್ ತಂಡದ ಸ್ಟಾರ್ ಆಟಗಾರ ಸುಕೇಶ್ ಹೆಗ್ಡೆ “ಉದಯವಾಣಿ’ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಅಖೀಲ ಭಾರತ ಅಂತರ್ ವಿವಿ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ “ಪ್ರಜ್ಞ ಗೌರವ’ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನಡೆದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಕಬಡ್ಡಿ ಆಸಕ್ತಿ ಹುಟ್ಟಿದ್ದು ಹೇಗೆ?
ನಾನು ಕಾರ್ಕಳದ ಅಜೆಕಾರಿನಲ್ಲಿ ಹುಟ್ಟಿ ಬೆಳೆದದ್ದು. ಬಾಲ್ಯದಿಂದಲೇ ಕಬಡ್ಡಿ ಬಗ್ಗೆ ಆಸಕ್ತಿ ಇತ್ತು. ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುವ ಸಂದರ್ಭ ಅನೇಕ ಪಂದ್ಯಗಳಲ್ಲಿ ಭಾಗವಹಿಸಿದ್ದೆ. ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿವಿಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದೇನೆ.
ಪ್ರೊ ಕಬಡ್ಡಿ ಬಗ್ಗೆ ಅನಿಸಿಕೆ?
ಪ್ರೊ ಕಬಡ್ಡಿ ಲೀಗ್ ದೇಶಿ ಆಟಕ್ಕೆ ಹೊಸ ಆಯಾಮ ನೀಡಿದೆ. ಹೊಸ ಪ್ರತಿಭೆಗಳಿಗೆ ವೇದಿಕೆ ಆಗುವುದರ ಜತೆಗೆ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ. ತೆಲುಗು ಟೈಟಾನ್ಸ್, ಗುಜರಾತ್, ತಮಿಳ್ ತಲೈವಾಸ್ ಮತ್ತು ಬೆಂಗಾಲ್ ವಾರಿಯರ್ ತಂಡದಲ್ಲಿ ಆಡಿದ್ದೇನೆ. ಅಲ್ಲಿ ಹಿರಿಯ -ಕಿರಿಯ ಆಟಗಾರರ ಸಲಹೆ ಪಡೆದುಕೊಂಡಿದ್ದೇನೆ. ಇದೀಗ ಬೆಂಗಾಲ್ ವಾರಿಯರ್, ಭಾರತ ತಂಡದ ಕಬಡ್ಡಿ ಆಟಗಾರ ಮಣೀಂದರ್ ಸಿಂಗ್ ಅವರೊಂದಿಗೆ ಆಡಲು ಅವಕಾಶ ದೊರಕಿದೆ. ಅವರಿಂದ ಸಲಹೆಗಳನ್ನು ಪಡೆದು ಮುಂದೆ ಭಾರತ ತಂಡವನ್ನು ಪ್ರತಿನಿಧಿಸುವ ಹಂಬಲವಿದೆ.
ಯುವಕರಿಗೆ ಸಂದೇಶವೇನು?
ಭಾರತದ ಮಣ್ಣಿನ ಕ್ರೀಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ವಿದೇಶದಲ್ಲೂ ಪ್ರೊ ಕಬಡ್ಡಿ ಮಾದರಿಯ ಪಂದ್ಯಾಟ ನಡೆಯುವಂತಾಗಬೇಕು. ಇಂದು ಬೆಂಗಳೂರಿನಲ್ಲಿ ಅನೇಕ ಕಬಡ್ಡಿ ಕ್ಲಬ್ಗಳು ಹುಟ್ಟಿಕೊಂಡಿವೆ. ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಬಡ್ಡಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಒಲಿಂಪಿಕ್ಸ್ ನಲ್ಲಿ ಕಬಡ್ಡಿ ಸೇರ್ಪಡೆ ಆಗಬೇಕೆಂಬುವುದು ನನ್ನ ಆಶಯ.
ಅಭಿಮಾನಿಗಳ ಪ್ರೋತ್ಸಾಹ ಹೇಗಿದೆ?
ಮಂಗಳೂರು, ಕಾರ್ಕಳದಲ್ಲಿ ಬೆಳೆದಿದ್ದರಿಂದ ಇಲ್ಲಿನ ಪರಿಸರದ ಬಗ್ಗೆ ಪರಿಚಯವಿದೆ. ಇಲ್ಲಿನ ಮೀನು ಊಟ ತುಂಬ ಇಷ್ಟ. ಜನ ಗುರುತಿಸಿ ಆಟೋಗ್ರಾಫ್, ಸೆಲ್ಫಿ ಪಡೆಯುತ್ತಿದ್ದಾರೆ. ಕಬಡ್ಡಿ ಕ್ರೀಡಾಪಟುಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ಖುಷಿ ಅನಿಸುತ್ತಿದೆ.
ಇಷ್ಟಪಡುವ ಇತರ ಕ್ರೀಡೆ ಹಾಗೂ ಕ್ರೀಡಾಪಟು ಯಾರು?
ವಾಲಿಬಾಲ್ ಇಷ್ಟದ ಆಟ. ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ ಇಷ್ಟ.
– ಕಾರ್ತಿಕ್ ಚಿತ್ರಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ