ಕಠಿನ ಸವಾಲು: ವಿಲಿಯಮ್ಸನ್
Team Udayavani, Oct 22, 2017, 6:30 AM IST
ಮುಂಬಯಿ: ಭಾರತವನ್ನು ಅವರದೇ ನೆಲದಲ್ಲಿ ಎದುರಿಸುವುದು ನಿಜಕ್ಕೂ ಕಠಿನ ಸವಾಲು ಎಂದಿದ್ದಾರೆ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್.
ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.”ಭಾರತ ತಂಡ ತವರಿನಲ್ಲಿ ಅತ್ಯುತ್ತಮ ದಾಖಲೆ ಹೊಂದಿದೆ. ತವರಿನಲ್ಲಿ ಭಾರತ ವಿಶ್ವದಲ್ಲೇ ಅತ್ಯಂತ ಬಲಿಷ್ಠ ತಂಡ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ನೀಡುವುದು ಅನಿವಾರ್ಯ. ಕಳೆದ ಸಲ ನಮ್ಮ ಆಟ ಶ್ರೇಷ್ಠವಲ್ಲದಿದ್ದರೂ ಉತ್ತಮ ಮಟ್ಟದಲ್ಲೇ ಇತ್ತು. ಈ ಬಾರಿ ಅದಕ್ಕಿಂತಲೂ ಮಿಗಿಲಾದ ಪ್ರದರ್ಶನ ನೀಡುವುದು ಮುಖ್ಯ’ ಎಂದು ವಿಲಿಯಮ್ಸನ್ ಹೇಳಿದರು.
ಕಳೆದ ವರ್ಷ ಭಾರತಕ್ಕೆ ಬಂದಾಗ ನ್ಯೂಜಿಲ್ಯಾಂಡ್ ಏಕದಿನ ಸರಣಿಯನ್ನು 3-2 ಅಂತರದಿಂದ ಕಳೆದುಕೊಂಡಿತ್ತು. ವಿಶಾಖಪಟ್ಟಣದ ಸರಣಿ ನಿರ್ಣಾಯಕ ಪಂದ್ಯವನ್ನು ಕಿವೀಸ್ 190 ರನ್ನುಗಳಿಂದ ಸೋತದ್ದನ್ನು ವಿಲಿಯಮ್ಸನ್ ನೆನಪಿಸಿಕೊಂಡರು. ಇಂಥ ಫಲಿತಾಂಶ ಮರುಕಳಿಸಬಾರದು ಎಂದರು.
“ಗಪ್ಟಿಲ್-ಮುನ್ರೊ ನಮ್ಮ ಆರಂಭಿಕರು. ಇಬ್ಬರೂ ಬೀಸು ಹೊಡೆತದ ಬ್ಯಾಟ್ಸ್ಮನ್ಗಳು. ಲ್ಯಾಥಂ ಮಧ್ಯಮ ಕ್ರಮಾಂಕದಲ್ಲಿ ಬರಲಿದ್ದಾರೆ’ ಎಂದೂ ಕಿವೀಸ್ ಕಪ್ತಾನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?