ಕರ್ನಾಟಕ ಭರ್ಜರಿ ಬ್ಯಾಟಿಂಗ್‌


Team Udayavani, Nov 18, 2017, 12:51 PM IST

18-21.jpg

ಕಾನ್ಪುರ: ಉತ್ತರ ಪ್ರದೇಶ ಬೌಲರ್‌ಗಳಿಗೆ ಅವರ ಅಂಗಳದಲ್ಲೇ ಬೆವರಿಳಿಸಿದ ಕರ್ನಾಟಕ, 5ನೇ ಸುತ್ತಿನ ರಣಜಿ ಪಂದ್ಯದಲ್ಲಿ ಪ್ರಚಂಡ ಆರಂಭ ಕಂಡುಕೊಂಡಿದೆ. ಮೊದಲ ದಿನ ಕೇವಲ 3 ವಿಕೆಟಿಗೆ 327 ರನ್‌ ಪೇರಿಸಿ ಭಾರೀ ಮೊತ್ತದ ಮುನ್ಸೂಚನೆ ನೀಡಿದೆ.

“ಎ’ ಗುಂಪಿನ ಅಗ್ರಸ್ಥಾನಿಯಾಗಿರುವ ಕರ್ನಾಟಕ ಕಾನ್ಪುರದ “ಗ್ರೀನ್‌ ಪಾರ್ಕ್‌’ ಅಂಗಳದಲ್ಲಿ ಅದೃಷ್ಟದ ಟಾಸ್‌ ಗೆದ್ದು ಅಮೋಘ ಬ್ಯಾಟಿಂಗಿಗೆ ಮುಂದಾಯಿತು. ಮಾಯಾಂಕ್‌ ಅಗರ್ವಾಲ್‌ (90), ಡಿ. ನಿಶ್ಚಲ್‌ (ಬ್ಯಾಟಿಂಗ್‌ 90), ಕರುಣ್‌ ನಾಯರ್‌ (62) ಮತ್ತು ಮನೀಷ್‌ ಪಾಂಡೆ (63 ಬ್ಯಾಟಿಂಗ್‌) ಅರ್ಧ ಶತಕ ಬಾರಿಸಿ ಯುಪಿ ಬೌಲರ್‌ಗಳ “ಬಿಪಿ ಡೌನ್‌’ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ದಿನವೇ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು 49 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿ ಪರಾಕ್ರಮ ಮೆರೆದಿದ್ದಾರೆ. 8 ಮಂದಿ ದಾಳಿಗಿಳಿದರೂ ಕರ್ನಾಟಕಕ್ಕೆ ಕಡಿವಾಣ ಹಾಕಲು ಆತಿಥೇಯರಿಂದ ಸಾಧ್ಯವಾಗಿಲ್ಲ. ಮಧ್ಯಮ ವೇಗಿಗಳಾದ ಧ್ರುವ ಪ್ರತಾಪ್‌ ಸಿಂಗ್‌ 2, ಆಕಾಶ್‌ದೀಪ್‌ ನಾಥ್‌ ಒಂದು ವಿಕೆಟ್‌ ಉರುಳಿಸಲು ಶಕ್ತರಾದರು.

ಈಗಾಗಲೇ ನಾಕೌಟ್‌ ರೇಸ್‌ನಿಂದ ಹೊರಬಿದ್ದಿರುವ ಸುರೇಶ್‌ ರೈನಾ ಸಾರಥ್ಯದ ಉತ್ತರ ಪ್ರದೇಶ ಪಾಲಿಗೆ ಇದೊಂದು ಪ್ರತಿಷ್ಠೆಯ ಪಂದ್ಯವಾಗಿತ್ತು. ಆದರೆ ವಿನಯ್‌ ಬಳಗದ ಬ್ಯಾಟಿಂಗ್‌ ವೈಭವ ಕಂಡಾಗ ಯುಪಿ ಸ್ಥಿತಿ ಮತ್ತೆ ಬಿಗಡಾಯಿಸುವ ಸಾಧ್ಯತೆಯೇ ಹೆಚ್ಚಿದೆ.

ಕೈತಪ್ಪಿದ ಹ್ಯಾಟ್ರಿಕ್‌ ಸೆಂಚುರಿ
ಕರ್ನಾಟಕದ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚದಿದ್ದುದು ಆರಂಭಕಾರ ಆರ್‌. ಸಮರ್ಥ್ ಮಾತ್ರ. ಅವರು 45 ಎಸೆತಗಳಿಂದ 16 ರನ್‌ ಮಾಡಿ ಔಟಾದರು. ಆದರೆ ಅಗರ್ವಾಲ್‌ ಜತೆ ಮೊದಲ ವಿಕೆಟಿಗೆ 14.3 ಓವರ್‌ಗಳಿಂದ 66 ರನ್‌ ಸೇರಿಸಿ ಉತ್ತಮ ಅಡಿಪಾಯ ನಿರ್ಮಿಸುವಲ್ಲಿ ಸಹಕರಿಸಿದ್ದರು.

ಮಹಾರಾಷ್ಟ್ರ ವಿರುದ್ಧ 304, ದಿಲ್ಲಿ ವಿರುದ್ಧ 176 ರನ್‌ ರಾಶಿ ಹಾಕಿದ್ದ ಮಾಯಾಂಕ್‌ ಅಗರ್ವಾಲ್‌ “ಗ್ರೀನ್‌ ಪಾರ್ಕ್‌’ ಅಂಗಳದಲ್ಲೂ ಶತಕದತ್ತ ದೌಡಾಯಿಸಿದರು. “ಹ್ಯಾಟ್ರಿಕ್‌ ಸೆಂಚುರಿ’ ಒಲಿಯಿತೆಂದೇ ಭಾವಿಸಲಾಯಿತು. ಆದರೆ ಈ ನಿರೀಕ್ಷೆ 90 ರನ್ನಿಗೆ ಸೀಮಿತಗೊಂಡಿತು. ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಅಗರ್ವಾಲ್‌ ಕೇವಲ 73 ಎಸೆತ ಎದುರಿಸಿ 16 ಬೌಂಡರಿ ಸಿಡಿಸಿದರು. ಅಗರ್ವಾಲ್‌-ನಿಶ್ಚಲ್‌ ಜತೆಯಾಟದಲ್ಲಿ 2ನೇ ವಿಕೆಟಿಗೆ 55 ರನ್‌ ಒಟ್ಟುಗೂಡಿತು.

ನಿಶ್ಚಲ್‌; ಚೊಚ್ಚಲ ಶತಕ ನಿಶ್ಚಿತ?
ಅಗರ್ವಾಲ್‌ಗೆ ಒಲಿಯದ ಶತಕ ಶನಿವಾರ ವನ್‌ಡೌನ್‌ ಬ್ಯಾಟ್ಸ್‌ಮನ್‌ ಡಿ. ನಿಶ್ಚಲ್‌ ಅವರಿಗೆ ಒಲಿಯುವ ಸಾಧ್ಯತೆ ಇದೆ. ಕೇವಲ 2ನೇ ರಣಜಿ ಪಂದ್ಯವಾಡುತ್ತಿರುವ ನಿಶ್ಚಲ್‌ ತಾಳ್ಮೆಯ ಆಟದ ಮೂಲಕ 90 ರನ್‌ ಮಾಡಿ ಅಜೇಯರಾಗಿ ಉಳಿದಿದ್ದಾರೆ. 221 ಎಸೆತಗಳನ್ನು ಎದುರಿಸಿದ್ದು, 13 ಬೌಂಡರಿ ಹೊಡೆದಿದ್ದಾರೆ. ಇದೇ ಋತುವಿನಲ್ಲಿ ಮಹಾರಾಷ್ಟ್ರ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟಿಗೆ ಅಡಿಯಿರಿಸಿದ ನಿಶ್ಚಲ್‌ 16 ರನ್‌ ಮಾಡಿ ಔಟಾಗಿದ್ದರು. ಕೆ.ಎಲ್‌. ರಾಹುಲ್‌ ಅನುಪಸ್ಥಿತಿಯಲ್ಲಿ ಅವರಿಗೆ ಈ ಅವಕಾಶ ಸಿಕ್ಕಿದೆ.

ಅಗರ್ವಾಲ್‌ ನಿರ್ಗಮನದ ಬಳಿಕ ನಿಶ್ಚಲ್‌ 2 ಉಪಯುಕ್ತ ಜತೆಯಾಟದಲ್ಲಿ ಭಾಗಿಯಾದರು. ನಾಯರ್‌ ಜತೆ 3ನೇ ವಿಕೆಟಿಗೆ 115 ರನ್‌, ಪಾಂಡೆ ಜತೆ ಮುರಿಯದ 4ನೇ ವಿಕೆಟಿಗೆ 91 ರನ್‌ ಪೇರಿಸಿದ್ದಾರೆ. 

ನಾಯರ್‌, ಪಾಂಡೆ ಪರಾಕ್ರಮ
ಮಧ್ಯಮ ಕ್ರಮಾಂಕದ ಕರುಣ್‌ ನಾಯರ್‌ ಮತ್ತು ಮನೀಷ್‌ ಪಾಂಡೆ ಕೂಡ ಬ್ಯಾಟಿಂಗ್‌ ಪರಾಕ್ರಮವನ್ನು ಮುಂದುವರಿಸಿದ್ದು ಕರ್ನಾಟಕದ ಪಾಲಿಗೆ ಭಾರೀ ಲಾಭವಾಗಿ ಪರಿಣಮಿಸಿತು. ನಾಯರ್‌ 123 ಎಸೆತಗಳಿಂದ 62 ರನ್‌ ಮಾಡಿದರೆ (8 ಬೌಂಡರಿ), ಪಾಂಡೆ 79 ಎಸೆತಗಳಿಂದ 63 ರನ್‌ ಗಳಿಸಿ ಆಡುತ್ತಿದ್ದಾರೆ. ಪಾಂಡೆ ಬ್ಯಾಟಿನಿಂದ 9 ಬೌಂಡರಿ ಹಾಗೂ ಸರದಿಯ ಏಕೈಕ ಸಿಕ್ಸರ್‌ ಒಳಗೊಂಡಿದೆ.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.