ಕೆಪಿಎಲ್‌: ಗೌತಮ್‌, ಅಮಿತ್‌ಗೆ  7.2 ಲಕ್ಷ


Team Udayavani, Aug 7, 2017, 7:25 AM IST

KPL-2017-07.jpg

ಬೆಂಗಳೂರು ರವಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) 5ನೇ ಆವೃತ್ತಿಯ ಹರಾಜಿನಲ್ಲಿ ಕೆ. ಗೌತಮ್‌ ಮತ್ತು ಅಮಿತ್‌ ವರ್ಮ ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದಾರೆ. ಕೆ. ಗೌತಮ್‌ ಅವರನ್ನು ಬೆಳಗಾವಿ ಪ್ಯಾಂಥರ್ 7.2 ಲಕ್ಷ ರೂ.ಗೆ ಖರೀದಿಸಿದರೆ, ಇಷ್ಟೇ ಮೊತ್ತಕ್ಕೆ ಅಮಿತ್‌ ವರ್ಮ ಅವರನ್ನು ಬಳ್ಳಾರಿ ಟಸ್ಕರ್ ಖರೀದಿಸಿದೆ.

ಕೆಲವು ಆಟಗಾರರಿಗೆ ಅನಿರೀಕ್ಷಿತವಾಗಿ ಹರಾಜಿನ ದೊಡ್ಡ ಮೊತ್ತ ದೊರಕಿದರೆ, ಕೆಲವು ನಿರೀಕ್ಷೆ ಮೂಡಿಸಿದ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜು ಆಗಲು ವಿಫ‌ಲರಾಗಿದ್ದಾರೆ. ಉಳಿದಂತೆ ದೊಡ್ಡ ಮೊತ್ತಕ್ಕೆ ಹರಾಜು ಆದವರೆಂದರೆ, ಮಾಯಾಂಕ್‌ ಅಗರ್ವಾಲ್‌ (ಹುಬ್ಬಳ್ಳಿ ಟೈಗರ್ಗೆ 7 ಲಕ್ಷ ರೂ.), ಆರ್‌. ಸಮರ್ಥ್ (ಬೆಂಗಳೂರು ಬ್ಲಾಸ್ಟರ್ಗೆ 5.9 ಲಕ್ಷ ರೂ.), ಅನಿರುದ್‌ª ಜೋಶಿ (ನಮ್ಮ ಶಿವಮೊಗ್ಗ ತಂಡಕ್ಕೆ 5.8 ಲಕ್ಷ ರೂ.).

ಪಾಂಡೆ, ರಾಹುಲ್‌ಗೆ ಬಗ್ಗೆ ಆಸಕ್ತಿ ಇಲ್ಲ
ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಮನೀಷ್‌ ಪಾಂಡೆ ಮತ್ತು ಕೆ.ಎಲ್‌.ರಾಹುಲ್‌ ಹೆಚ್ಚಿನ ಮೊತ್ತಕ್ಕೆ ಹೋಗುವ ಸಾಧ್ಯತೆ ಇತ್ತು. ಆದರೆ ಪಾಂಡೆ ಮತ್ತು ರಾಹುಲ್‌ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವುದರಿಂದ ಇವರು ಕೆಪಿಎಲ್‌ಗೆ ಲಭ್ಯವಾಗುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಫ್ರಾಂಚೈಸಿಗಳು ಈ ಇಬ್ಬರು ಆಟಗಾರರ ಮೇಲೆ ಹೆಚ್ಚಿನ ಹಣ ಹೂಡಲು ಹೋಗಿಲ್ಲ. ರಾಹುಲ್‌ 50 ಸಾವಿರ ರೂ.ಗೆ ಬಳ್ಳಾರಿ ಟಸ್ಕರ್ಗೆ, ಮನೀಷ್‌ ಪಾಂಡೆ 1.6 ಲಕ್ಷ ರೂ.ಗೆ ಬೆಳಗಾವಿ ಪ್ಯಾಂಥರ್ಗೆ ಹರಾಜಾದರು. 

ರಾಷ್ಟ್ರೀಯ ತಂಡದಲ್ಲಿ ಆಡಿದ ಮತ್ತೂಬ್ಬ ಆಟಗಾರ ಕರುಣ್‌ ನಾಯರ್‌ 4 ಲಕ್ಷ ರೂ.ಗೆ ಮೈಸೂರ್‌ ವಾರಿಯರ್ ಪಾಲಾದರು. ನಾಯರ್‌ ಇತ್ತೀಚೆಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫ‌ಲರಾಗಿರುವುದರಿಂದ ಕೆಪಿಎಲ್‌ಗೆ ಆಡುವ ಸಾಧ್ಯತೆ ಇದೆ. ಹೀಗಾಗಿ ಕರುಣ್‌ ನಾಯರ್‌ಗೆ ಪಾಂಡೆ, ರಾಹುಲ್‌ಗಿಂತ ದೊಡ್ಡ ಮೊತ್ತ ಸಿಕ್ಕಿದೆ. ಆದರೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿಲ್ಲವಾದರೂ ಅಭಿಮನ್ಯು ಮಿಥುನ್‌, ಸಿ.ಎಂ. ಗೌತಮ್‌ ಕೂಡ ಕಡಿಮೆ ಮೊತ್ತಕ್ಕೆ ಹರಾಜು ಆಗಿರುವುದು ಅಚ್ಚರಿ ಮೂಡಿಸಿದೆ.

“ಎ’ ಗ್ರೂಪ್‌ನಲ್ಲಿ 33 ಆಟಗಾರರ ಹರಾಜು
“ಎ’ ಗ್ರೂಪ್‌ನಲ್ಲಿ 35 ಆಟಗಾರರು ಹರಾಜಿಗಿದ್ದರು. ಇದರಲ್ಲಿ ಡೇವಿಡ್‌ ಮಥಾಯಿಸ್‌ ಮತ್ತು ಕುಣಾಲ್‌ ಕಪೂರ್‌ ಮಾತ್ರ ಹರಾಜಾಗಲಿಲ್ಲ. ಹರಾಜಿನಲ್ಲಿ ಬೆಂಗಳೂರು ಬ್ಲಾಸ್ಟರ್, ಹುಬ್ಬಳ್ಳಿ ಟೈಗರ್, ನಮ್ಮ ಶಿವಮೊಗ್ಗ, ಬಳ್ಳಾರಿ ಟಸ್ಕರ್, ಬೆಳಗಾವಿ ಪ್ಯಾಂಥರ್, ಬಿಜಾಪುರ್‌ ಬುಲ್ಸ್‌, ಮೈಸೂರು ವಾರಿಯರ್ ಫ್ರಾಂಚೈಸಿಗಳು ಪಾಲ್ಗೊಂಡಿದ್ದವು. 

ಬೆಂಗಳೂರು ಬ್ರಿಗೇಡಿಯರ್, ಪ್ರೊವಿಡೆಂಟ್‌ ಬೆಂಗಳೂರು, ಮಂಗಳೂರು ಯುನೈಟೆಡ್‌, ದಾವಣಗೆರೆ ಡೈಮಂಡ್ಸ್‌, ರಾಕ್‌ಸ್ಟಾರ್ ತಂಡಗಳು ಈ ಬಾರಿ ಆಡುತ್ತಿಲ್ಲ. ಬೆಂಗಳೂರು ಬ್ಲಾಸ್ಟರ್ ಹೊಸದಾಗಿ ಸೇರ್ಪಡೆಯಾಗಿದೆ. ಈ ಬಾರಿ 7 ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. 

ರಾಜಕೀಯ ಒತ್ತಡದ ಕಾರಣ ಮಂಗಳೂರು ಯುನೈಟೆಡ್‌ ತಂಡ ಈ ಬಾರಿ ಭಾಗವಹಿಸುತ್ತಿಲ್ಲ ಎಂದು ಮಾಲಕ ಮೊದಿನ್‌ ಬಾವಾ ರವಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು ಹೇಳಿದರು. ಇದು ಕರಾವಳಿಯ ಕ್ರಿಕೆಟ್‌ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಟಾಪ್ ನ್ಯೂಸ್

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

8-uv-fusion

Smell of First Rain: ಹೊಸಮಳೆಯ ಮೃಣ್ಮಯ ಗಂಧ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.