ರಣಜಿ: ಕರ್ನಾಟಕ ಸ್ಪಿನ್‌ ದಾಳಕ್ಕೆ ಉರುಳಿದ ಅಸ್ಸಾಂ


Team Udayavani, Oct 15, 2017, 7:05 AM IST

vinya-kar.jpg

ಮೈಸೂರು: ಮೊದಲ ದಿನವೇ ಅಸ್ಸಾಂಗೆ ಸ್ಪಿನ್‌ ರುಚಿ ತೋರಿಸಿದ ಕರ್ನಾಟಕ, 2017-18ನೇ ಸಾಲಿನ ರಣಜಿ ಋತುವನ್ನು ಬಹಳ ಸಂಭ್ರಮದಿಂದಲೇ ಆರಂಭಿಸಿದೆ. ಅಸ್ಸಾಂ ತಂಡದ ಮೊದಲ ಇನಿಂಗ್ಸ್‌ 145 ರನ್ನಿಗೆ ಮುಗಿದಿದ್ದು, ಜವಾಬಿತ್ತ ಕರ್ನಾಟಕ ವಿಕೆಟ್‌ ಮೊದಲ ದಿನದ ಆಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 77ರನ್‌ ಮಾಡಿದೆ.

ಮೈಸೂರಿನಲ್ಲಿ ಶನಿವಾರ ಮೊದಲ್ಗೊಂಡ “ಎ’ ವಿಭಾಗದ ರಣಜಿ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ದುಕೊಂಡ ಕರ್ನಾಟಕ ಇದರಲ್ಲಿ ಭರ್ಜರಿ ಯಶಸ್ಸು ಸಾಧಿಸಿತು. ನಾಯಕ ಆರ್‌.ವಿನಯ್‌ ಕುಮಾರ್‌ ಅಸ್ಸಾಂ ಕುಸಿತಕ್ಕೆ ಮುಹೂರ್ತವಿರಿಸಿದ ಬಳಿಕ ಸ್ಪಿನ್‌ದ್ವಯರಾದ ಕೃಷ್ಣಪ್ಪ ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ಸೇರಿಕೊಂಡು ಪ್ರವಾಸಿಗರ ಮೇಲೆ ಸವಾರಿ ಮಾಡಿದರು. ಇವರ ಆಫ್ಸ್ಪಿನ್‌-ಲೆಗ್‌ಸ್ಪಿನ್‌ ದಾಳಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫ‌ಲಗೊಂಡ ಅಸ್ಸಾಂ 59.1 ಓವರ್‌ಗಳಲ್ಲಿ 145 ರನ್ನುಗಳ ಸಣ್ಣ ಮೊತ್ತಕ್ಕೆ ಲಾಗ ಹಾಕಿತು.

ಗೌತಮ್‌ 20 ರನ್ನಿಗೆ 4 ವಿಕೆಟ್‌ ಹಾರಿಸಿದರೆ, ಶ್ರೇಯಸ್‌ ಗೋಪಾಲ್‌ 43 ರನ್ನಿತ್ತು ಮೂವರನ್ನು ಪೆವಿಲಿಯನ್ನಿಗೆ ಅಟ್ಟಿದರು. ವಿನಯ್‌ ಕುಮಾರ್‌ 2 ವಿಕೆಟ್‌ ಕಿತ್ತರು. ಉಳಿದೊಂದು ವಿಕೆಟ್‌ ಸ್ಟುವರ್ಟ್‌ ಬಿನ್ನಿ ಪಾಲಾಯಿತು. ಮಿಥುನ್‌ ಮತ್ತು ಅರವಿಂದ್‌ಗೆ ವಿಕೆಟ್‌ ಲಭಿಸಲಿಲ್ಲ.

ಕರ್ನಾಟಕ ಎಚ್ಚರಿಕೆಯಿಂದ ಬ್ಯಾಟಿಂಗ್‌ ಆರಂಭಿಸಿದ್ದು, 30 ಓವರ್‌ಗಳ ಆಟದಲ್ಲಿ ಯಾವುದೇ ಹಾನಿಗೊಳಗಾಗದೆ 77 ರನ್‌ ಮಾಡಿದೆ. ಆರ್‌.ಸಮರ್ಥ್ 106 ಎಸೆತಗಳಿಂದ 47 ರನ್‌ ಹಾಗೂ ಮಾಯಾಂಕ್‌ ಅಗರ್ವಾಲ್‌ 78 ಎಸೆತಗಳಿಂದ 26 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇಬ್ಬರ ಬ್ಯಾಟಿನಿಂದಲೂ ತಲಾ 3 ಬೌಂಡರಿಗಳು ಬಂದಿವೆ. ದ್ವಿತೀಯ ದಿನದಾಟದಲ್ಲಿ ಕರ್ನಾಟಕ ಉತ್ತಮ ಮುನ್ನಡೆಯೊಂದಿಗೆ ಅಸ್ಸಾಂ ಮೇಲೆ ಒತ್ತಡ ಹೇರುವ ಯೋಜನೆಯಲ್ಲಿದೆ.

ಗೋಕುಲ್‌ ಏಕಾಂಗಿ ಹೋರಾಟ
ಇದಕ್ಕೂ ಮೊದಲು 1ನೇ ಇನಿಂಗ್ಸ್‌ನಲ್ಲಿ ಅಸ್ಸಾಂ ಪರ ಕರ್ನಾಟಕ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಆಟಗಾರನೆಂದರೆ ನಾಯಕ ಗೋಕುಲ್‌ ಶರ್ಮ ಮಾತ್ರ. ಅವರು ಏಕಾಂಗಿಯಾಗಿ ಹೋರಾಡಿ ಇನಿಂಗ್ಸಿನ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. 114 ಎಸೆತ ಎದುರಿಸಿ, 4 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 55 ರನ್‌ ಹೊಡೆದರು. ಆದರೆ ಆವರಿಗೆ ಇನ್ನೊಂದು ತುದಿಯಿಂದ ಯಾರಿಂದಲೂ ಬೆಂಬಲ ಸಿಗಲಿಲ್ಲ.

9ನೇ ಓವರಿನಲ್ಲಿ ಪಲ್ಲವ್‌ ಕುಮಾರ್‌ ದಾಸ್‌ (15) ವಿಕೆಟ್‌ ಪತನದೊಂದಿಗೆ ಅಸ್ಸಾಂ ಕುಸಿತ ಮೊದಲ್ಗೊಂಡಿತು. ಎರಡೇ ಓವರ್‌ ಅಂತರದಲ್ಲಿ ಪ್ರೀತಂ ದೇವನಾಥ್‌ ಅವರನ್ನು ಬಿನ್ನಿ ಶೂನ್ಯಕ್ಕೆ ವಾಪಸ್‌ ಮಾಡಿದರು. ಒಂದಿಷ್ಟು ಹೋರಾಟದ ಸೂಚನೆ ನೀಡಿದ ಓಪನರ್‌ ದಾಸ್‌ 57ರ ಮೊತ್ತದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಗೋಕುಲ್‌ ಶರ್ಮ ಹೊರತುಪಡಿಸಿದರೆ 26 ರನ್‌ ಮಾಡಿದ ರಿಷವ್‌ ಅವರದೇ ಹೆಚ್ಚಿನ ಗಳಿಕೆ.

ಈ ಹಂತದಲ್ಲಿ ಕರ್ನಾಟಕದ ಸ್ಪಿನ್‌ ಆಕ್ರಮಣ ತೀವ್ರಗೊಳ್ಳುತ್ತ ಹೋಯಿತು. 84 ರನ್ನಿಗೆ 7 ವಿಕೆಟ್‌ ಬಿತ್ತು. ಗೋಕುಲ್‌ ಶರ್ಮ ಪ್ರಯತ್ನದಿಂದ ತಂಡದ ಮೊತ್ತ ನೂರೈವತ್ತರ ಗಡಿ ಸಮೀಪಿಸಿತು.

ಸಂಕ್ಷಿಪ್ತ ಸ್ಕೋರ್‌:
ಅಸ್ಸಾಂ 1ನೇ ಇನಿಂಗ್ಸ್‌ 145 (ಗೋಕುಲ್‌ ಶರ್ಮ 55, ರಿಷವ್‌ ದಾಸ್‌ 26, ಕೆ.ಗೌತಮ್‌ 20ಕ್ಕೆ 4, ಶ್ರೇಯಸ್‌ ಗೋಪಾಲ್‌ 43ಕ್ಕೆ 3), ಕರ್ನಾಟಕ ವಿಕೆಟ್‌ ನಷ್ಟವಿಲ್ಲದೆ 77/0 (ಸಮರ್ಥ್ ಬ್ಯಾಟಿಂಗ್‌ 47, ಅಗರ್ವಾಲ್‌ ಬ್ಯಾಟಿಂಗ್‌ 26).

ರಣಜಿ ಇತರೆ ಪಂದ್ಯಗಳ ಸ್ಕೋರ್‌
 -ಚತ್ತೀಸ್‌ಗಢ ವಿರುದ್ಧ ಪಶ್ಚಿಮ ಬಂಗಾಳ 1ನೇ ಇನಿಂಗ್ಸ್‌ (283/2)
 -ರೈಲ್ವೇಸ್‌ ವಿರುದ್ಧ ದೆಹಲಿ 1ನೇ ಇನಿಂಗ್ಸ್‌ (318/6)
 -ಜಮ್ಮು ಕಾಶ್ಮೀರ ವಿರುದ್ಧ ಸೌರಾಷ್ಟ್ರ 1ನೇ ಇನಿಂಗ್ಸ್‌ (428/4)
-ಜಾಖಂಡ್‌ ವಿರುದ್ಧ ರಾಜಸ್ಥಾನ 1ನೇ ಇನಿಂಗ್ಸ್‌ (250/4)
- ಕೇರಳ 1ನೇ ಇನಿಂಗ್ಸ್‌ (208/10), ಗುಜರಾತ್‌ 1ನೇ ಇನಿಂಗ್ಸ್‌ (60/2)
-ಆಂಧ್ರ ವಿರುದ್ಧ ಬರೋಡ 1ನೇ ಇನಿಂಗ್ಸ್‌ (247/7)
-ಮುಂಬೈ ವಿರುದ್ಧ ಮಧ್ಯ ಪ್ರದೇಶ 1ನೇ ಇನಿಂಗ್ಸ್‌ (250/5)
 -ತಮಿಳುನಾಡು ವಿರುದ್ಧ ತ್ರಿಪುರ 1ನೇ ಇನಿಂಗ್ಸ್‌ (244/7)
-ಪಂಜಾಬ್‌ 1ನೇ ಇನಿಂಗ್ಸ್‌ (161/10), ವಿದರ್ಭ 1ನೇ ಇನಿಂಗ್ಸ್‌ (106/1)
-ಗೋವಾ 1ನೇ ಇನಿಂಗ್ಸ್‌ (255/10), ಹಿಮಾಚಲ 1ನೇ ಇನಿಂಗ್ಸ್‌ (2/0)

– ಸಿ.ದಿನೇಶ್‌

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.