ಶ್ರೀಶಾಂತ್ ಪ್ರಕರಣ: ಬಿಸಿಸಿಐಗೆ ಕೇರಳ ಹೈಕೋರ್ಟ್ ನೋಟಿಸ್
Team Udayavani, Mar 4, 2017, 3:50 AM IST
ನವದೆಹಲಿ: ಭಾರತದ ವೇಗದ ಬೌಲರ್ ಶ್ರೀಶಾಂತ್ಗೆ ಸ್ಕಾಟ್ಲೆಂಡ್ ಲೀಗ್ನಲ್ಲಿ ಆಡಲು ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡದ ಹಿನ್ನೆಲೆಯಲ್ಲಿ ಕೇರಳ ಉಚ್ಚ ನ್ಯಾಯಾಲಯ ಬಿಸಿಸಿಐಗೆ ನೋಟಿಸ್ ನೀಡಿದೆ. ಬಿಸಿಸಿಐ ಒಪ್ಪಿಗೆ ನೀಡದ ಕಾರಣ ಶ್ರೀಶಾಂತ್ ನ್ಯಾಯಾಲಯ ಪ್ರವೇಶಿಸಿ ಮನವಿ ಸಲ್ಲಿಸಿದ್ದರು.
ಹಿನ್ನೆಲೆ ಏನು?: ಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಶ್ರೀಶಾಂತ್ ಬಿಸಿಸಿಐನಿಂದ ಆಜೀವ ನಿಷೇಧಕ್ಕೆ ತುತ್ತಾಗಿದ್ದರು. ನಂತರ ದೆಹಲಿಯ ಸ್ಥಳೀಯ ನ್ಯಾಯಾಲಯ ಅವರನ್ನು ನಿರಪರಾಧಿ ಎಂದು ತೀರ್ಪು ನೀಡಿತ್ತು. ಆದರೆ ಬಿಸಿಸಿಐ ಮಾತ್ರ ನಿಷೇಧವನ್ನು ವಾಪಸ್ ಪಡೆದಿರಲಿಲ್ಲ. ಮತ್ತೆ ಕ್ರಿಕೆಟ್ ಆಡುವ ಉತ್ಸಾಹದಲ್ಲಿದ್ದ ಶ್ರೀಶಾಂತ್ಗೆ ಏಪ್ರಿಲ್ನಲ್ಲಿ ನಡೆಯಲಿರುವ ಸ್ಕಾಟ್ಲೆಂಡ್ ಕ್ರಿಕೆಟ್ ಲೀಗ್ನಲ್ಲಿ ಆಡುವಂತೆ ಆಹ್ವಾನ ಬಂದಿತ್ತು. ಹೀಗಾಗಿ ಶ್ರೀಶಾಂತ್ ನಿರಕ್ಷೇಪಣಾ ಪತ್ರಕ್ಕಾಗಿ ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಆದರೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್ ಲೀಗ್ನಲ್ಲಿ ಆಡಲು ಎನ್ಒಸಿ ಕೊಡಿಸುವಂತೆ ಕೇರಳ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಬಿಸಿಸಿಐಗೆ ನೋಟಿಸ್ ನೀಡಿದೆ.