ಕಿದಂಬಿ ಶ್ರೀಕಾಂತ್ಗೆ ಪದ್ಮಶ್ರೀ: ಮಾಜಿ ಕ್ರೀಡಾ ಸಚಿವ ಶಿಫಾರಸು
Team Udayavani, Nov 2, 2017, 7:43 AM IST
ಹೊಸದಿಲ್ಲಿ: 2017ರ ಋತು ವಿನಲ್ಲಿ ಅತ್ಯದ್ಭುತ ನಿರ್ವಹಣೆ ನೀಡಿ ಈಗಾಗಲೇ ನಾಲ್ಕು ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿ ಗೆದ್ದಿರುವ ಭಾರತೀಯ ಬ್ಯಾಡ್ಮಿಂಟನ್ ರಂಗದ ಹೊಸ ಸೂಪರ್ತಾರೆ ಕಿದಂಬಿ ಶ್ರೀಕಾಂತ್ ಅವರನ್ನು ಮಾಜಿ ಕ್ರೀಡಾ ಸಚಿವ ವಿಜಯ್ ಗೋಯಲ್ ಬುಧವಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ.
ಕಳೆದ ವಾರ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಶ್ರೀಕಾಂತ್ ಕ್ಯಾಲೆಂಡರ್ ವರ್ಷ ವೊಂದರಲ್ಲಿ ನಾಲ್ಕು ಸೂಪರ್ ಸೀರೀಸ್ ಕೂಟದ ಪ್ರಶಸ್ತಿ ಗೆದ್ದ ಭಾರತದ ಮೊದಲ ಮತ್ತು ವಿಶ್ವದ ನಾಲ್ಕನೇ ಶಟ್ಲರ್ ಎಂಬ ಗೌರವಕ್ಕೆ ಪಾತ್ರರಾದರು.
ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಶ್ರೀಕಾಂತ್ ಅವರ ಹೆಸರನ್ನು ಶಿಫಾರಸು ಮಾಡುವಂತೆ ಸದ್ಯ ಸಂಸದೀಯ ವ್ಯವಹಾರಗಳ ಸಚಿವ ಗೋಯಲ್ ಅವರು ಗೃಹ ಸಚಿವ ರಾಜ್ನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ ಪದ್ಮ ಪ್ರಶಸ್ತಿಗೆ ಹೆಸರು ನೀಡಲು ಸೆ. 15 ಕೊನೆಯ ದಿನವಾಗಿದೆ.
ಪುರುಷರ ಸಿಂಗಲ್ಸ್ನಲ್ಲಿ ಚೀನದ ದಂತಕಥೆ ಲಿನ್ ಡ್ಯಾನ್, ಅವರ ಜತೆಗಾರ ಚೆನ್ ಲಾಂಗ್ ಮತ್ತು ಮಲೇಶ್ಯದ ತಾರೆ ಲೀ ಚಾಂಗ್ ವೆಯಿ ಅವರು ಒಂದು ಋತುವಿನಲ್ಲಿ ನಾಲ್ಕು ಸೂಪರ್ ಸೀರೀಸ್ ಕೂಟದ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು.
ಈ ವರ್ಷ 24ರ ಹರೆಯದ ಶ್ರೀಕಾಂತ್ ಐದು ಕೂಟಗಳಲ್ಲಿ ಫೈನಲಿಗೇರಿದ್ದರು. ಸಿಂಗಾಪುರ ಓಪನ್ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಫೈನಲ್ನಲ್ಲಿ ಅವರು ತನ್ನ ದೇಶದವರೇ ಆದ ಬಿ ಸಾಯಿ ಪ್ರಣೀತ್ಗೆ ಶರಣಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ