ವಿಶ್ವ ನಂ.1 ಶ್ರೇಯಾಂಕಕ್ಕೇರಿ ಇತಿಹಾಸ ನಿರ್ಮಿಸಿದ ಶ್ರೀಕಾಂತ್
Team Udayavani, Apr 13, 2018, 6:35 AM IST
ನವದೆಹಲಿ: ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ ಕೆ.ಶ್ರೀಕಾಂತ್ ಹೊಸದಾಗಿ ಬಿಡುಗಡೆಯಾದ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ವಿಶ್ವ ನಂ.1ನೇ ಸ್ಥಾನಕ್ಕೇರಿದ್ದಾರೆ.
ಈ ಸಾಧನೆ ಮಾಡಿದ 3ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಭಾರತದ ಪರ ಪ್ರಕಾಶ್ ಪಡುಕೋಣೆ ಮತ್ತು ಸೈನಾ ನೆಹ್ವಾಲ್ ಈ ಸಾಧನೆ ಮಾಡಿದ್ದಾರೆ.ಗೋಲ್ಡ್ಕೋಸ್ಟ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಈಗಾಗಲೇ ಬ್ಯಾಡ್ಮಿಂಟನ್ ಗುಂಪು ವಿಭಾಗದಲ್ಲಿ ಚಿನ್ನ ಗೆದ್ದಿರುವ ಶ್ರೀಕಾಂತ್ ವೈಯಕ್ತಿಕ ವಿಭಾಗದಲ್ಲಿಯೂ ಚಿನ್ನದತ್ತ ಸಾಗುತ್ತಿದ್ದಾರೆ. ಈ ನಡುವೆ ಶ್ರೀಕಾಂತ್ಗೆ ಮತ್ತೂಂದು ಸಿಹಿ ಸುದ್ದಿ ಸಿಕ್ಕಿದೆ. ಹೀಗಾಗಿ ಈ ದಿನ ಭಾರತೀಯ ಕ್ರೀಡೆಗೆ ಗೋಲ್ಡನ್ ಡೇ ಆಗಿದೆ.
ಶ್ರೀಕಾಂತ್ ಒಟ್ಟು 76,895 ಅಂಕವನ್ನು ಕಲೆಹಾಕುವ ಮೂಲಕ 2ನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ. ಅಗ್ರ ಸ್ಥಾನದಲ್ಲಿದ್ದ ಡೆನ್ಮಾರ್ಕ್ನ ವಿಕ್ಟರ್ ಅಕ್ಷಲ್ಸೆನ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇತ್ತೀಚೆಗೆ ನಡೆದ ಮಲೇಷ್ಯಾ ಓಪನ್ನಲ್ಲಿ ಸೋತಿರುವ ಕಾರಣ ವಿಕ್ಟರ್ ಒಟ್ಟು 1660 ಅಂಕವನ್ನು ಕಳೆದುಕೊಂಡರು. ಹೀಗಾಗಿ ಶ್ರೀಕಾಂತ್ ಅಗ್ರಸ್ಥಾನಕ್ಕೇರಲು ನೆರವಾಯಿತು.
ಒಂದೇ ವರ್ಷ 4 ಸೂಪರ್ ಸೀರೀಸ್ ಪ್ರಶಸ್ತಿ:
ಶ್ರೀಕಾಂತ್ಗೆ 2017ನೇ ವರ್ಷ ಗೋಲ್ಡನ್ ವರ್ಷ ಅಂದರೆ ತಪ್ಪಾಗದು. ಯಾಕೆಂದರೆ ಒಂದೇ ವರ್ಷದಲ್ಲಿ ನಾಲ್ಕು ಸೂಪರ್ ಸೀರೀಸ್ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇಂತಹವೊಂದು ಸಾಧನೆ ಮಾಡಿದ ಭಾರತೀಯ ಪುರುಷರಲ್ಲಿ ಮೊದಲಿಗ ಮತ್ತು ವಿಶ್ವದಲ್ಲಿ 4ನೇ ಆಟಗಾರ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. 2017ನೇ ವರ್ಷದಲ್ಲಿ ಇಂಡೋನೇಷ್ಯಾ ಓಪನ್, ಆಸ್ಟ್ರೇಲಿಯಾ ಓಪನ್, ಡೆನ್ಮಾರ್ಕ್ ಓಪನ್, ಫ್ರಾನ್ಸ್ ಓಪನ್ನಲ್ಲಿ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದಿದ್ದಾರೆ. ಸಿಗಾಪುರ್ ಓಪನ್ನಲ್ಲಿ ಮಾತ್ರ ರನ್ನರ್ ಅಪ್ ಸ್ಥಾನಕ್ಕೆ ತೃಪ್ತರಾಗಿದ್ದರು.
3ನೇ ಭಾರತೀಯ:
ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ವಿಶ್ವ ನಂ.1 ಶ್ರೇಯಾಂಕಕ್ಕೇರಿದವರಲ್ಲಿ ಶ್ರೀಕಾಂತ್ ಮೂರನೇ ಭಾರತೀಯ ಆಗಿದ್ದಾರೆ. ಇದಕ್ಕೂ ಮುನ್ನ ಪುರುಷರ ಸಿಂಗಲ್ಸ್ನಲ್ಲಿ ಕನ್ನಡಿಗ ಪ್ರಕಾಶ್ ಪಡುಕೋಣೆ 1980ರಲ್ಲಿ ನಂ.1ನೇ ಶ್ರೇಯಾಂಕಕ್ಕೇರಿದ್ದರು. ಆ ನಂತರ 2015ರಲ್ಲಿ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ಸ್ನಲ್ಲಿ ವಿಶ್ವ ನಂ.1ನೇ ಶ್ರೇಯಾಂಕ್ಕಕೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್