ರನ್‌ ಪರ್ವತ ಏರಿ ಗೆದ್ದ ಕೆಕೆಆರ್‌​​​​​​​


Team Udayavani, May 13, 2018, 12:23 PM IST

PTI5_12_2018_000108B.jpg

ಇಂದೋರ್‌: “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಹೊಡಿಬಡಿ ಆಟದ ಮೂಲಕ ರನ್‌ ಪರ್ವತ ಏರಿದ ಕೋಲ್ಕತಾ ನೈಟ್‌
ರೈಡರ್ 31 ರನ್ನುಗಳಿಂದ ಆತಿಥೇಯ ಕಿಂಗ್ಸ್‌ ಇಲೆವೆನ್‌ಗೆ ಸೋಲುಣಿಸಿದೆ. ಇದರೊಂದಿಗೆ ಪ್ಲೇ-ಆಫ್ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.

ಶನಿವಾರದ ಈ ಮಹತ್ವದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ 6 ವಿಕೆಟಿಗೆ 245 ರನ್‌ ಸೂರೆಗೈದರೆ, ದಿಟ್ಟ ರೀತಿಯಲ್ಲೇ ಜವಾಬು ನೀಡಿದ ಪಂಜಾಬ್‌ 8ಕ್ಕೆ 214ರ ತನಕ ಬಂದು ಶರಣಾಯಿತು. 75
ರನ್ನಿನ ಜತೆಗೆ ಒಂದು ವಿಕೆಟ್‌ ಉರುಳಿಸಿದ ಸುನೀಲ್‌ ನಾರಾಯಣ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಇದು 12 ಪಂದ್ಯಗಳಲ್ಲಿ ಕೆಕೆಆರ್‌ ಸಾಧಿಸಿದ 6ನೇ ಜಯ. 12 ಅಂಕಗಳೊಂದಿಗೆ ದಿನೇಶ್‌ ಪಡೆ 4ನೇ ಸ್ಥಾನಕ್ಕೆ
ನೆಗೆದಿದೆ. ಸೋಲಿನ ಹೊರತಾಗಿಯೂ ಪಂಜಾಬ್‌ 3ನೇ ಸ್ಥಾನದಲ್ಲೇ ನೆಲೆಸಿದೆ. ಈ ಫ‌ಲಿತಾಂಶ ದೊಂದಿಗೆ ಮುಂಬೈ
ಇಂಡಿಯನ್ಸ್‌ 5ನೇ ಸ್ಥಾನಕ್ಕೆ ಕುಸಿಯಿತು.

ಕೋಲ್ಕತಾದಿಂದ ರನ್‌ ಪರ್ವತ: ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೆಕೆಆರ್‌ ಪರ ಕ್ರೀಸ್‌ ಇಳಿದವರೆಲ್ಲ ಮುನ್ನುಗ್ಗಿ ಬಾರಿಸ 
ತೊಡಗಿದರು. ಒಟ್ಟು 15 ಸಿಕ್ಸರ್‌, 24 ಬೌಂಡರಿ ಸಿಡಿ ಯಲ್ಪಟ್ಟಿತು. ಕೆಕೆಆರ್‌ ರನ್‌ ಪರ್ವತವನ್ನೇರಿ ಕುಳಿತಿತು.
ಇದು ಐಪಿಎಲ್‌ ಇತಿಹಾಸದಲ್ಲಿ ದಾಖಲಾದ 4ನೇ ಸರ್ವಾಧಿಕ ಗಳಿಕೆ. 2013ರ ಬೆಂಗಳೂರು ಪಂದ್ಯದಲ್ಲಿ ಪುಣೆ ವಾರಿಯರ್ ವಿರುದ್ಧ ಆರ್‌ಸಿಬಿ 5ಕ್ಕೆ 263 ರನ್‌ ಪೇರಿಸಿದ್ದು ದಾಖಲೆ. ಇದು ಕೆಕೆಆರ್‌ದ ಸರ್ವಾಧಿಕ ಗಳಿಕೆಯೂ ಹೌದು. ಪ್ರಥಮ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲಿ 3ಕ್ಕೆ 222 ರನ್‌ ಗಳಿಸಿದ್ದು ಕೋಲ್ಕತಾದ ಈವರೆಗಿನ ಅತೀ ಹೆಚ್ಚಿನ ಮೊತ್ತವಾಗಿತ್ತು.

ನಾರಾಯಣ್‌ ಸಿಂಹಪಾಲು: ಕೆಕೆಆರ್‌ನ ಈ ದೊಡ್ಡ ಮೊತ್ತದಲ್ಲಿ ಆರಂಭಕಾರ ಸುನೀಲ್‌ ನಾರಾಯಣ್‌ ಅವರದು ಸಿಂಹಪಾಲು. ಪವರ್‌ ಪ್ಲೇ ವೇಳೆ ತನ್ನ ಎಂದಿನ ಬ್ಯಾಟಿಂಗ್‌ ಖದರ್‌ ತೋರಿದ ಈ ಕೆರಿಬಿಯನ್‌ ಕ್ರಿಕೆಟಿಗ,36 ಎಸೆತಗಳಿಂದ ಸರ್ವಾಧಿಕ 75 ರನ್‌ ಬಾರಿಸಿದರು. ಪಂಜಾಬ್‌ ಎಸೆತಗಳಿಗೆ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳ
ರುಚಿ ತೋರಿಸಿದರು. ಮೊದಲ ವಿಕೆಟಿಗೆ ಕ್ರಿಸ್‌ ಲಿನ್‌ ಜತೆ 5.2 ಓವರ್‌ಗಳಿಂದ 53 ರನ್‌ ಪೇರಿಸಿದರು. ಲಿನ್‌ ಗಳಿಕೆ
27 ರನ್‌ (17 ಎಸೆತ, 2 ಬೌಂಡರಿ, 2 ಸಿಕ್ಸರ್‌). ನಾರಾಯಣ್‌ ಮತ್ತು ರಾಬಿನ್‌ ಉತ್ತಪ್ಪ 2ನೇ ವಿಕೆಟಿಗೆ 6.1 ಓವರ್‌ಗಳಿಂದ 75 ರನ್‌ ರಾಶಿ ಹಾಕಿ ಬೃಹತ್‌ ಮೊತ್ತದ ಸೂಚನೆ ರವಾನಿಸಿದರು. ಉತ್ತಪ್ಪ 17 ಎಸೆತ ಎದುರಿಸಿ 24 ರನ್‌ ಹೊಡೆದರು (2 ಬೌಂಡರಿ, 1 ಸಿಕ್ಸರ್‌).

ನಾರಾಯಣ್‌ ಮತ್ತು ಉತ್ತಪ್ಪ ಒಂದೇ ರನ್‌ ಅಂತರದಲ್ಲಿ ನಿರ್ಗಮಿಸಿದರೂ ಆ್ಯಂಡ್ರೆ ರಸೆಲ್‌ ಮತ್ತು ದಿನೇಶ್‌ ಕಾರ್ತಿಕ್‌ ಇನ್ನಷ್ಟು ಬಿರುಸಾಗುವ ಮೂಲಕ ಪಂಜಾಬ್‌ ಬೌಲರ್‌ಗಳಿಗೆ ಉಳಿಗಾಲ ಇಲ್ಲದಂತೆ ಮಾಡಿದರು.

ರಾಹುಲ್‌ ದಿಟ್ಟ ಆರಂಭ: ದೊಡ್ಡ ಮೊತ್ತ ಎದುರಿಗಿದ್ದರೂ ಎದೆಗುಂದದೇ ಬ್ಯಾಟ್‌ ಬೀಸತೊಡಗಿದ ರಾಹುಲ್‌ ಪಂಜಾ ಬ್‌ಗ ದಿಟ್ಟ ಆರಂಭ ಒದಗಿಸಿದರು. ಇವರು ಗೇಲ್‌ ಜತೆ ಸೇರಿಕೊಂಡು ರನ್‌ ಪೇರಿಸುತ್ತಿದ್ದುನ್ನು ಕಂಡಾಗ ಪಂಜಾಬ್‌ ಅಚ್ಚರಿಯ ಫ‌ಲಿತಾಂಶ ಸಾಧಿಸೀತೆಂಬ ನಿರೀಕ್ಷೆ ಬಲವಾಗಿತ್ತು. ಆದರೆ ಈ ಜೋಡಿ ಬೇರ್ಪಟ್ಟೊಡನೆ ಕೋಲ್ಕತಾ ಬೌಲರ್‌ಗಳು ಮೇಲುಗೈ ಸಾಧಿಸಿದರು.

9ನೇ ಓವರ್‌ ತನಕ ಕ್ರೀಸಿಗೆ ಅಂಟಿಕೊಂಡ ರಾಹುಲ್‌ ಬರೀ 29 ಎಸೆತ ಎದುರಿಸಿ 66 ರನ್‌ ಸಿಡಿಸಿದರು. 7 ಸಿಕ್ಸರ್‌, 2 ಬೌಂಡರಿ ಸಿಡಿಸಿ ಕೆಕೆಆರ್‌ ಬೌಲರ್‌ಗಳಲ್ಲಿ ಭೀತಿಯೊಡಿದ್ದರು. 

ಪಂದ್ಯದ ತಿರುವು
ಗೇಲ್‌ ಮತ್ತು ಮಾಯಾಂಕ್‌ ಅಗರ್ವಾಲ್‌ ಅವರನ್ನು ಔಟ್‌ ಮಾಡಿದ ಬಳಿಕ ಕರುಣ್‌ ನಾಯರ್‌ ಅವರನ್ನು ಅಗ್ಗಕ್ಕೆ ಉರುಳಿಸಿದ ವೇಗಿ ಆ್ಯಂಡ್ರೆ ರಸೆಲ್‌ ಕೆಕೆಆರ್‌ಗೆ ಮೇಲುಗೈ ಸಾಧಿಸುವಂತೆ ಮಾಡಿದರು. 

ಸಂಕ್ಷಿಪ್ತ ಸ್ಕೋರು
ಕೋಲ್ಕತಾ 20 ಓವರ್‌ಗೆ 245/6 (ಸುನೀಲ್‌ ನಾರಾಯಣ್‌ 75, ದಿನೇಶ್‌ ಕಾರ್ತಿಕ್‌ 50, ಆ್ಯಂಡ್ರೂé 41ಕ್ಕೆ 4) ಪಂಜಾಬ್‌ 20 ಓವರ್‌ಗೆ 214/8 (ಕೆ.ಎಲ್‌. ರಾಹುಲ್‌ 66, ಆರ್‌. ಅಶ್ವಿ‌ನ್‌ 45, ಆ್ಯಂಡ್ರೆ ರಸೆಲ್‌ 41ಕ್ಕೆ 3)

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.