ಪಂಜಾಬ್‌ ಹಾದಿಗೆ ಮುಳ್ಳಾದೀತೇ ಆರ್‌ಸಿಬಿ?


Team Udayavani, May 14, 2018, 6:15 AM IST

Virat-Kohli-3.jpg

ಇಂದೋರ್‌: ಸುರಂಗದಲ್ಲಿ ಸಾಗುತ್ತಿರುವ ಆರ್‌ಸಿಬಿಗೆ ಬಹಳ ದೂರದಲ್ಲೊಂದು ಬೆಳಕಿನ ಕಿರಣ ಗೋಚರಿಸತೊಡಗಿದ ಅನುಭವವಾಗಿದೆ. ಇದಕ್ಕೆ ಕಾರಣ, ಡೆಲ್ಲಿ ವಿರುದ್ಧ ಸಾಧಿಸಿದ ಗೆಲುವು. ಸೋಮವಾರ ಇಂದೋರ್‌ನಲ್ಲಿ ಪಂಜಾಬ್‌ಗ ಪಂಚ್‌ ಕೊಟ್ಟರೆ ಕೊಹ್ಲಿ ಪಡೆಯ ಪ್ಲೇ-ಆಫ್ ಬೆಳಕು ಇನ್ನಷ್ಟು ಪ್ರಖರವಾಗಲಿದೆ. ಹಾಗೆಯೇ ಪಂಜಾಬ್‌ ಎದೆಬಡಿತವೂ ಜಾಸ್ತಿಯಾಗಲಿದೆ.

ಅನುಮಾನವೇ ಇಲ್ಲ, ಆರ್‌ಸಿಬಿ ಮುಂದಿನ ಸುತ್ತು ತಲುಪಬೇಕಾದರೆ ಪವಾಡವೇ ಸಂಭವಿಸಬೇಕು. ಕೊಹ್ಲಿ ಪಡೆ 4 ಜಯದೊಂದಿಗೆ ಇನ್ನೂ 7ನೇ ಸ್ಥಾನದಲ್ಲೇ ಇದೆ. ಆದರೆ ಪಂಜಾಬ್‌ ಸ್ಥಿತಿ ಇದಕ್ಕಿಂತ ಭಿನ್ನ. 6 ಜಯದೊಂದಿಗೆ 3ನೇ ಸ್ಥಾನ ಅಲಂಕರಿಸಿದೆ. ಆದರೆ ಕಳೆದೆರಡು ಪಂದ್ಯಗಳನ್ನು ಸೋತದ್ದು ಅಶ್ವಿ‌ನ್‌ ಪಡೆಯ ಆತಂಕವನ್ನು ಹೆಚ್ಚಿಸಿದೆ. ಈ ಸೋಲಿನ ಸರಪಳಿ ಮುಂದುವರಿದರೆ… ಎಂಬ ಚಿಂತೆ ಆವರಿಸಿದೆ. ಆಗ 2 ಪ್ಲೇ-ಆಫ್ ಸ್ಥಾನಗಳಿಗಾಗಿ ನಾಲ್ಕರ ಬದಲು 5 ತಂಡಗಳ ಸ್ಪರ್ಧೆಯನ್ನು ನಿರೀಕ್ಷಿಸಬೇಕೋ ಏನೋ!

ಅನಿರೀಕ್ಷಿತ, ಅಚ್ಚರಿ ಸಂಭವಿಸಿದರೆ?
ಪಂಜಾಬ್‌ ಪಾಲಿಗೆ ಇದು ಗೆಲ್ಲಲೇಬೇಕಾದ ಪಂದ್ಯ. ಇನ್ನೂ 4 ಪಂದ್ಯ ಬಾಕಿ ಇದ್ದು, ಎರಡನ್ನು ಗೆದ್ದರೆ ಸಾಕು ಎಂಬುದು ಪಂಜಾಬ್‌ ಲೆಕ್ಕಾಚಾರ. ಆದರೆ ಇದು ಉಲ್ಟಾ ಹೊಡೆದರೆ? ಲೀಗ್‌ ಹಂತ ಕೊನೆಗೊಳ್ಳುತ್ತಿರುವಂತೆಯೇ ಐಪಿಎಲ್‌ನಲ್ಲಿ ಅಚ್ಚರಿ, ಅನಿರೀಕ್ಷಿತಗಳು ಸಂಭವಿಸುವುದು ಜಾಸ್ತಿ!

ಶನಿವಾರ ಇದೇ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ 245 ರನ್‌ ಪೇರಿಸಿ ಪಂಜಾಬ್‌ಗ ಆಘಾತವಿಕ್ಕಿತ್ತು. ಇದಕ್ಕೂ ಮುನ್ನ ರಾಜಸ್ಥಾನ್‌ ವಿರುದ್ಧ ಜೈಪುರದಲ್ಲಿ ಅಶ್ವಿ‌ನ್‌ ಪಡೆ 159 ರನ್‌ ಗುರಿ ಮುಟ್ಟಲಾಗದೆ ಪರಿತಪಿಸಿತ್ತು. ಬಹಳ ಬೇಗ ಪ್ಲೇ-ಆಫ್ ಮುಟ್ಟುವ ಕನಸು ಕಾಣುತ್ತಿದ್ದ ಪಂಜಾಬ್‌ ಹಾದಿಗೆ ಈ 2 ಸೋಲುಗಳು ಮುಳ್ಳಾಗಿ ಪರಿಣಮಿಸಿದ್ದು ಸುಳ್ಳಲ್ಲ.

ಪಂಜಾಬ್‌ ಬ್ಯಾಟಿಂಗ್‌ ಸರದಿ ಈಗ ಕೆ.ಎಲ್‌. ರಾಹುಲ್‌ ಅವರನ್ನೇ ಬಹಳಷ್ಟು ಅವಲಂಬಿಸಿದೆ. ಆರಂಭದಲ್ಲಿ ಮೆರೆದ ಕ್ರಿಸ್‌ ಗೇಲ್‌ ಈಗ ತುಸು ಮಂಕಾಗಿದ್ದಾರೆ. ಅಗರ್ವಾಲ್‌, ನಾಯರ್‌, ಫಿಂಚ್‌ ಅಗತ್ಯ ಸಂದರ್ಭಗಳಲ್ಲೇ ಕೈಕೊಡುತ್ತಿದ್ದಾರೆ. ಪಂಜಾಬ್‌ ಬೌಲರ್‌ಗಳ ಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂಬುದನ್ನು ಮೊನ್ನೆ ಕೋಲ್ಕತಾ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ತೋರಿಸಿ ಕೊಟ್ಟಿದ್ದಾರೆ. ಇದನ್ನೆಲ್ಲ ಮೀರಿ ಗೆಲುವಿನ ಹಾದಿಗೆ ಮರಳುವುದು ಪಂಜಾಬ್‌ ಪಾಲಿನ ತುರ್ತು ಅಗತ್ಯ.

ಸೇಡು ತೀರಿಸುವ ಒತ್ತಡ
ಬೆಂಗಳೂರಿನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ನಗು ಹೊಮ್ಮಿಸಿತ್ತು. ಕನ್ನಡಿಗರೇ ತುಂಬಿದ ಪಂಜಾಬನ್ನು “ಚಿನ್ನಸ್ವಾಮಿ’ಯಲ್ಲಿ 155 ರನ್ನಿಗೆ ಆಲೌಟ್‌ ಮಾಡಿದ್ದು ರಾಯಲ್‌ ಚಾಲೆಂಜರ್ ತಂಡದ ಹೆಚ್ಚುಗಾರಿಕೆಯಾಗಿತ್ತು. ಜವಾಬಿತ್ತ ಆರ್‌ಸಿಬಿ ಡಿ ಕಾಕ್‌ (45), ಎಬಿಡಿ (57) ಸಾಹಸದಿಂದ 4 ವಿಕೆಟ್‌ಗಳ ಜಯ ಸಾಧಿಸಿತ್ತು. ಇದಕ್ಕೆ ಸೇಡು ತೀರಿಸುವ ಒತ್ತಡವೂ ಪಂಜಾಬ್‌ ಮೇಲಿದೆ.

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.