IPL 2020: ಪಂಜಾಬ್-ಡೆಲ್ಲಿ ಫೈಟ್: ರಾಹುಲ್ ಪಡೆಗೆ 5 ವಿಕೆಟ್ ಗಳ ಗೆಲುವು


Team Udayavani, Oct 20, 2020, 10:57 PM IST

IPL

ಅಬುಧಾಬಿ: ನಿಕೋಲಸ್ ಪೂರನ್ (53) ಅಮೋಘ ಅರ್ಧಶತಕ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ (32) ಜೋಡಿಯ ಭರ್ಜರಿ ಆಟದ ನೆರವು ಪಡೆದ ಪಂಜಾಬ್ ತಂಡ ಡೆಲ್ಲಿ ಒಡ್ಡಿದ 164 ರನ್‌ಗಳ ಸುಲಭ ಸವಾಲನ್ನು ಮೆಟ್ಟಿನಿಂತು ವಿಜಯ ಸಂಭ್ರಮ ಆಚರಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಶಿಖರ್‌ ಧವನ್‌ ಅವರ ಮತ್ತೂಂದು ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟಿಗೆ 164 ರನ್‌ ಪೇರಿಸಿ ಪಂಜಾಬ್‌ಗ ಸವಾಲೊಡ್ಡಿತು. ಗುರಿ ಬೆನ್ನತ್ತಿದ ಪಂಜಾಬ್‌ 19 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 167 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಸತತ ಐದು ಗೆಲುವಿನೊಂದಿಗೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆರಂಭಿಕ ಆಘಾತ ಕಂಡಿತು. ಶೀಖರ್‌ ಧವನ್‌ ಜತೆ ಇನ್ನಿಂಗ್ಸ್‌ ಆರಂಭಿಸಿದ ಪೃಥ್ವಿ ಶಾ (7) ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ವಿಫ‌ಲಗೊಂಡರು. ಇದರೊಂದಿಗೆ ಶಾ ಮತ್ತೆ ಬ್ಯಾಟಿಂಗ್‌ ಬರಗಾಲ ಅನುಭವಿಸಿದರು. ಕಳೆದ ಎರಡು ಪಂದದ್ಯಲ್ಲಿ ಶೂನ್ಯಕ್ಕೆ ಔಟಾಗಿದ್ದರು.

ಧವನ್‌ ಮತ್ತೆ ಮಿಂಚು
ಎರಡನೇ ವಿಕೆಟಿಗೆ ಆಡಳಿಲಿದ ನಾಯಕ ಅಯ್ಯರ್‌ ಮತ್ತು ಧವನ್‌ ತಂಡಕ್ಕೆ ಹಾನಿಯಾಗದ ರೀತಿಯಲ್ಲಿ ಆಡಲಾರಂಭಿಸಿದರು. ಈ ಜೋಡಿ 2ನೇ ವಿಕೆಟಿಗೆ 48 ರನ್‌ ಒಟ್ಟುಗೂಡಿಸಿತು. ಅಯ್ಯರ್‌ 14 ರನ್‌ ಗಳಿಸಿ ಮುರುಗನ್‌ ಅಶ್ವಿ‌ನ್‌ಗೆ ವಿಕೆಟ್‌ ಒಪ್ಪಿಸಿದರು. ಗಾಯದ ಸಮಸ್ಯೆಯಿಂದ ಚೇತರಿಸಿ ಕಣಕ್ಕಿಳಿದ ಪಂತ್‌ ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾದರು. ಮ್ಯಾಕ್ಸ್‌ವೆಲ್‌ ಎಸೆತವೊಂದನ್ನು ಸಿಕ್ಸರ್‌ಗಟ್ಟುವ ಪ್ರಯತ್ನದಲ್ಲಿ ಲಾಂಗ್‌ಆಪ್‌ನಲ್ಲಿದ್ದ ಅಗರ್ವಾಲ್‌ಗೆ ಕ್ಯಾಚಿತ್ತರೆ ಬಳಿಕ ಬಂದ ಆಸೀಸ್‌ ಆಲ್‌ರೌಂಡರ್‌ ಸ್ಟೋಯಿನಿಸ್‌ ಕೂಡ ಅಗರ್ವಾಲ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿಕೋಂಡರು. ಈ ವಿಕೆಟ್‌ ಶಮಿ ಪಾಲಾಯಿತು.

ಒಂದೆಡೆ ತಂಡದ ವಿಕೆಟ್‌ ಬೀಳುತ್ತಿದ್ದರೂ ಚೆನ್ನೈ ವಿರುದ್ಧ ಅಜೇಯ ಶತಕ ಸಿಡಿಸಿ ಮಿಂಚಿದ್ದ ಶಿಖರ್‌ ಧವನ್‌ ಇನ್ನೊಂದು ಬದಿ ಏಕಾಂಗಿಯಾಗಿ ನಿಂತು ಪಂಜಾಬ್‌ ಬೌಲರ್‌ಗಳ ಮೇಲೆರಗಿ ಬಿರುಸುಸಿನ ಬ್ಯಾಟಿಂಗ್‌ ನಡೆಸಿದರು. 61 ಎಸೆತ ಎದುರಿಸಿ ಅಜೇಯ 106 ರನ್‌ ಸೂರೆಗೈದರು. ಸಿಡಿಸಿದ್ದು 13 ಬೌಂಡರಿ, 3 ಸಿಕ್ಸರ್‌.

ಸ್ಕೋರ್‌ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಮ್ಯಾಕ್ಸ್‌ವೆಲ್‌ ಬಿ ನೀಶಮ್‌ 7
ಶಿಖರ್‌ ಧವನ್‌ ಔಟಾಗದೆ 106
ಅಯ್ಯರ್‌ ಸಿ ರಾಹುಲ್‌ ಬಿ ಎಂ. ಅಶ್ವಿ‌ನ್‌ 14
ರಿಷಭ್‌ ಪಂತ್‌ ಸಿ ಅಗರ್ವಾಲ್‌ ಬಿ ಮ್ಯಾಕ್ಸ್‌ವೆಲ್‌ 14
ಸ್ಟೋಯಿನಿಸ್‌ ಸಿ ಅಗರ್ವಾಲ್‌ ಬಿ ಶಮಿ 9
ಹೆಟ್‌ಮೈರ್‌ ಬಿ ಶಮಿ 10

ಇತರ 4
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 164
ವಿಕೆಟ್‌ ಪತನ: 1-25, 2-73, 3-106, 4-141, 5-164.

ಬೌಲಿಂಗ್‌:
ಗ್ಲೆನ್‌ ಮ್ಯಾಕ್ಸ್‌ವೆಲ್‌ 4-0-31-1
ಮೊಹಮ್ಮದ್‌ ಶಮಿ 4-0-28-2
ಆರ್ಷದೀಪ್‌ ಸಿಂಗ್‌ 3-0-30-0
ಜಿಮ್ಮಿ ನೀಶಮ್‌ 2-0-17-1
ಮುರುಗನ್‌ ಅಶ್ವಿ‌ನ್‌ 4-0-33-1
ರವಿ ಬಿಶ್ನೋಯಿ 3-0-24-0

ಪಂಜಾಬ್‌
ಕೆ. ಎಲ್‌ ರಾಹುಲ್‌ ಸಿ ಸ್ಯಾಮ್‌ ಬಿ ಅಕ್ಷರ್‌ 15
ಅಗರ್ವಾಲ್‌ ರನೌಟ್‌ 5
ಕ್ರಿಸ್‌ ಗೇಲ್‌ ಬಿ ಆರ್‌ ಅಶ್ವಿ‌ನ್‌ 29
ಪೂರನ್‌ ಸಿ ಪಂತ್‌ ಬಿ ರಬಾಡ 53
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಪಂತ್‌ ಬಿ ರಬಾಡ 32
ದೀಪಕ್‌ ಹೂಡ ಔಟಾಗದೆ 15
ಜೆಮ್ಮಿ ನಿಶಮ್‌ ಔಟಾಗದೆ 10

ಇತರ 8
ಒಟ್ಟು(19ವರ್‌ಗಳಲ್ಲಿ 5 ವಿಕೆಟಿಗೆ) 167
ವಿಕೆಟ್‌ ಪತನ:1-17, 2-52, 3-56, 4-125, 5-147.

ಬೌಲಿಂಗ್
ಡೇನಿಯಲ್‌ ಸ್ಯಾಮ್ಸ್‌ 4-0-30-0
ಕಗಿಸೊ ರಬಾಡ 4-0-27-2
ಅಕ್ಷರ್‌ ಪಟೇಲ್‌ 4-0-27-1
ತುಷಾರ್‌ ಪಾಂಡೆ 2-0-41-0
ಆರ್‌. ಅಶ್ವಿ‌ನ್‌ 4-0-27-1
ಮಾರ್ಕಸ್‌ ಸ್ಟೋಯಿನಿಸ್‌ 1-0-14-0

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

1-saddas

Badminton; ಇಂದಿನಿಂದ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.