IPL 2020: ಸತತ ಸೋಲಿನಿಂದ ಹೊರಬಂದ ಪಂಜಾಬ್‌


Team Udayavani, Oct 15, 2020, 11:01 PM IST

ಬೆಂಗಳೂರು-ಪಂಜಾಬ್ ಹಣಾಹಣಿ: ಗೇಲ್, ರಾಹುಲ್ ಅರ್ಧ ಶತಕ; ಗೆಲುವಿನ ನಗೆ ಬೀರಿದ ಪಂಜಾಬ್

ಶಾರ್ಜಾ: ಸತತ ಐದು ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್‌ ಗುರುವಾರದ ಐಪಿಎಲ್‌ ಮುಖಾಮುಖೀಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 8 ವಿಕೆಟ್‌ಗಳ ಗೆಲುವಿನ ನಗೆ ಬೀರಿತು. ಇದು ಆರ್‌ಸಿಬಿಗೆ ಪಂಜಾಬ್‌ ವಿರುದ್ಧ ಎದುರಾದ ಕೂಟದ ಎರಡನೇ ಸೋಲಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 171 ರನ್‌ ಗಳಿಸಿ ಸವಾಲೊಡ್ಡಿತು. ಗುರಿ ಬೆನ್ನತ್ತಿದ ಪಂಜಾಬ್‌ 2 ವಿಕೆಟಿಗೆ 177 ರನ್‌ ಗಳಿಸಿ ಗೆಲುವು ದಾಖಲಿಸಿತು.

ಪಂಜಾಬ್‌ ಚೇಸಿಂಗ್‌ ವೇಳೆ ನಾಯಕ ರಾಹುಲ್‌ ಮತ್ತು ಅಗರ್ವಾಲ್‌ ಆರಂಭ ಸ್ಫೋಟಕ ಬ್ಯಾಟಿಂಗ್‌ನಿಂದ ಕೂಡಿತು. ಈ ಜೋಡಿ ಮೊದಲ ವಿಕೆಟಿಗೆ 78 ರನ್‌ ಸೂರಗೈದರು.

ರಾಹುಲ್‌ -ಗೇಲ್‌ ಅಬ್ಬರ
2ನೇ ವಿಕೆಟಿಗೆ ಕ್ರೀಸ್‌ಗಿಳಿದ ಯುನಿವರ್ಸ್‌ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್‌ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗಿಗೆ ಮುಂದಾದರೂ ಅನಂತರದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿ ಅರ್ಧಶತಕ ಪೂರ್ತಿಗೊಳಿಸಿದರು. ಗೇಲ್‌ ಗಳಿಕೆ 53 ( 1ಬೌಂಡರಿ, 5 ಸಿಕ್ಸರ್‌).

ರಾಹುಲ್‌ ಕೂಡ ಅಜೇಯರಾಗಿ ಉಳಿದು 49 ಎಸೆತಗಳಿಂದ 61ರನ್‌ ಬಾರಿಸಿದರು. ರಾಹುಲ್‌ ಒಟ್ಟು 1 ಬೌಂಡರಿ, 5 ಸಿಕ್ಸರ್‌ ಬಾರಿಸಿ ಆರ್‌ಸಿಬಿ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು.

ಆರ್‌ಸಿಬಿಗೆ ಆರಂಭಿಕರಾದ ಫಿಂಚ್‌ ಮತ್ತು ಪಡಿಕ್ಕಲ್‌ ಬೌಂಡರಿ, ಸಿಕ್ಸರ್‌ ಮೂಲಕ ಚುರುಕಿನ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕುವ ಮುನ್ಸೂಚನೆ ನೀಡಿದರು. ಆದರೆ ದ್ವಿತೀಯ ಸ್ಪೆಲ್‌ ಎಸೆಯಲು ಬಂದ ಯುವ ವೇಗಿ ಆರ್ಷದೀಪ್‌ ಸಿಂಗ್‌ ಅವರು ಪಡಿಕ್ಕಲ್‌ (18) ವಿಕೆಟ್‌ ಬೇಟೆಯಾಡುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು. ಒಂದು ವಿಕೆಟ್‌ ಕಳೆದುಕೊಂಡರೂ ಆರ್‌ಸಿಬಿಗೆ ದೊಡ್ಡ ಆಘಾತವೇನೂ ಸಂಭವಿಸಲಿಲ್ಲ ಪವರ್‌ ಪ್ಲೇ ಅವಧಿಯಲ್ಲಿ 57 ರನ್‌ ಒಟ್ಟುಗೂಡಿತು.

ವನ್‌ಡೌನ್‌ನಲ್ಲಿ ಆಡಲಿಳಿದ ನಾಯಕ ವಿರಾಟ್‌ ಕೊಹ್ಲಿ ಜತೆ ಸೇರಿ ಫಿಂಚ್‌ ಮತ್ತೆ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಲು ಮುಂದಾದರು ಆದರೆ ಮುರುಗನ್‌ ಅಶ್ವಿ‌ನ್‌ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಒಂದು ಜೀವದಾನ ಪಡೆದ ಫಿಂಚ್‌ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫ‌ಲರಾದರು. ಮರು ಎಸೆತದಲ್ಲಿ ಬೌಲ್ಡ್‌ ಆಗುವ ಮೂಲಕ ನಿರಾಶೆ ಮೂಡಿಸಿದರು. ಪಿಂಚ್‌ ಗಳಿಕೆ 20 (ಎರಡು ಬೌಂಡರಿ, ಒಂದು ಸಿಕ್ಸರ್‌).

ಮೂರನೇ ವಿಕೆಟಿಗೆ ಕ್ರೀಸ್‌ ಗಿಳಿದ ವಾಷಿಂಗ್ಟನ್‌ ಸುಂದರ್‌ ಹೆಚ್ಚು ಕಾಲ ಉಳಿಯಲಿಲ್ಲ 13 ರನ್‌ ಗಳಿಸಿ ಎಂ. ಅಶ್ವಿ‌ನ್‌ಗೆ ವಿಕೆಟ್‌ ಒಪ್ಪಿಸಿದರು.

ದುಬೆ-ಕೊಹ್ಲಿ ಆಸರೆ
ಆಲ್‌ರೌಂಡರ್‌ ದುಬೆ ಮತ್ತು ವಿರಾಟ್‌ ಕೊಹ್ಲಿ ಸೇರಿಕೊಂಡು ತಂಡದ ಮೊತ್ತವನ್ನು ಹಿಗ್ಗಿಸಿದರು. 4ನೇ ವಿಕೆಟಿಗೆ ಈ ಜೋಡಿ 41 ರನ್‌ ಸೂರಗೈದಿತು. ದುಬೆ 19 ಎಸೆತಗಳಿಂದ 23 ರನ್‌ ಬಾರಿಸಿದರು. ಕಳೆದ ಪಂದ್ಯದ ಹೀರೋ 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ ಈ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರು ಕೇವಲ 2 ರನ್‌ ಗಳಿಸಿ ಪೆವಿಲಿಯನ್‌ ಹಾದಿ ಹಿಡಿದರು. ಇದರ ಬೆನ್ನಲ್ಲೆ ವಿರಾಟ್‌ ಕೊಹ್ಲಿಯೂ ಔಟಾದರು. ವಿರಾಟ್‌ 18 ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿ 48 ರನ್‌ ಬಾರಿಸಿದರು. ಈ ಎರಡೂ ವಿಕೆಟ್‌ ಶಮಿ ಪಾಲಾಯಿತು.

18 ಓವರ್‌ಗೆ 6ಕ್ಕೆ 136ರನ್‌ ಗಳಿಸಿ 150ರ ಗಡಿ ದಾಟಲು ಪರದಾಡುತಿದ್ದ ಆರ್‌ಸಿಬಿಗೆ ಬೌಲರ್‌ಗಳಾದ ಕ್ರಿಸ್‌ ಮಾರಿಸ್‌ ಮತ್ತು ಇಸುರು ಉದಾನ ಸೇರಿಕೊಂಡು ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರೂ ಅಂತಿಮ ಓವರ್‌ ಎಸೆದ ಶಮಿ 24 ರನ್‌ ಬಿಟ್ಟುಕೊಟ್ಟು ದುಬಾರಿಯಾಗಿ ಪರಿಣಮಿಸಿದರು. ಮಾರಿಸ್‌ 8 ಎಸೆತಗಳಿಂದ 25 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಉದಾನ ಗಳಿಕೆ ಅಜೇಯ 10 ರನ್‌.

ಗೇಲ್‌ ಇನ್‌
ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನ್ಪೋಟಕ ಆಟಗಾರ ಕ್ರಿಸ್‌ ಗೇಲ್‌ ಅವರಿಗೆ ಕಡೆಗೂ ಆಡುವ ಅವಕಾಶ ಲಭಿಸಿತು. ಈ ಮೂಲಕ 13ನೇ ಆವೃತ್ತಿಯ ಮೊದಲ ಐಪಿಎಲ್‌ ಅಭಿಯಾನ ಆರಂಭಿಸಿದರು. ಕಳೆದ ಪಂದ್ಯದಲ್ಲಿಯೇ ಆಡಬೇಕಿದ್ದ ಗೇಲ್‌ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿ ಗೇಲ್‌ ಆಡಲಿಳಿದರು. ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸುತ್ತಿದ್ದ ಆಸೀಸ್‌ ಆಲ್‌ರೌಂಡರ್‌ ಗ್ಲೆàಮ್‌ ಮ್ಯಾಕ್ಸ್‌ವೆಲ್‌ಗೆ ತಂಡ ಮತ್ತೆ ವಿಶ್ವಾಸವನ್ನಿಟ್ಟು ಈ ಪಂದ್ಯದಲ್ಲಿಯೂ ಅವಕಾಶ ನೀಡಿತು. ಅಭ್ಯಾಸದ ವೇಳೆ ಗಾಯದ ಸಮಸ್ಯೆಗೆ ಸಿಲುಕಿದ ಮನ್‌ದೀಪ್‌ ಸಿಂಗ್‌ ಬದಲಿಗೆ ದೀಪಕ್‌ ಹೂಡಗೆ ಅವಕಾಶ ನೀಡಲಾಯಿತು. ಹೂಡ ಅವರಿಗೂ ಇದು ಈ ಬಾರಿಯ ಮೊದಲ ಐಪಿಎಲ್‌ ಪಂದ್ಯವಾಗಿತ್ತು.

ಧೋನಿ ಸಲಹೆಯಿಂದ ನೆರವು
“ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡದಲ್ಲಿ ಎಂ.ಎಸ್‌. ಧೋನಿ ಅವರ ನಾಯಕತ್ವದಲ್ಲಿ ಆಡಿದ್ದು ಇಂದು ನಾನು ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು’ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ ವಾಷಿಂಗ್ಟನ್‌ ಸುಂದರ್‌ ಹೇಳಿದ್ದಾರೆ.

ಪಂದ್ಯಕ್ಕೂ ಮುನ್ನ ಮಾತನಾಡಿದ ಸುಂದರ್‌ ನಾನು ಮಾಹಿ ಅವರ ತಂಡದಲ್ಲಿ ಆಡಿದ್ದು ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು. ಇಂದು ಗುಣಮಟ್ಟದ ಬೌಲಿಂಗ್‌ ನಡೆಸುತ್ತಿದ್ದೇನೆ ಎಂದರೆ ಅದರ ಹಿಂದೆ ಮಾಹಿಯ ಶ್ರಮವಿದೆ ಬ್ಯಾಟ್ಸ್‌ಮನ್‌ಗಳ ಚಲನವಲನಗಳನ್ನು ಗಮನಿಸುವ ಧೋನಿ ಬೌಲರ್‌ಗಳಿಗೆ ಸೂಕ್ತ ಸಲಹೆ ನೀಡುತ್ತಾರೆ. ಅವರು ಅಂದು ನೀಡಿದ ಕೆಲ ಸಲಹೆಗಳಿಂದ ಸಾಕಷ್ಟು ಕಲಿತಿದ್ದು ಹಂತಹಂತವಾಗಿ ಬೆಳೆಯುತ್ತಿದ್ದೇನೆ ಎಂದು ಹೇಳಿ¨ªಾರೆ.

ಸ್ಕೋರ್‌ ಪಟ್ಟಿ
ಬೆಂಗಳೂರು
ಆರನ್‌ ಫಿಂಚ್‌ ಬಿ ಅಶ್ವಿ‌ನ್‌ 20
ಪಡಿಕ್ಕಲ್‌ ಸಿ ಪೂರನ್‌ ಬಿ ಆರ್ಷದೀಪ್‌ 18
ವಿರಾಟ್‌ ಸಿ ರಾಹುಲ್‌ ಬಿ ಶಮಿ 48
ಸುಂದರ್‌ ಸಿ ಜೋರ್ಡನ್‌ ಬಿ ಅಶ್ವಿ‌ನ್‌ 13
ಶಿವಂ ದುಬೆ ಸಿ ರಾಹುಲ್‌ ಬಿ ಜೋರ್ಡನ್‌ 23
ವಿಲಿಯರ್ ಸಿ ಹೂಡ ಬಿ ಶಮಿ 2
ಕ್ರಿಸ್‌ ಮಾರಿಸ್‌ ಔಟಾಗದೆ 25
ಉದಾನ ಔಟಾಗದೆ 10

ಇತರ 12
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 171
ವಿಕೆಟ್‌ ಪತನ: 1-38, 2-62, 3-86, 4-127, 5-134, 6-136.

ಬೌಲಿಂಗ್‌:
ಮ್ಯಾಕ್ಸ್‌ವೆಲ್‌ 4-0-28-0
ಮೊಹಮ್ಮದ್‌ ಶಮಿ 4-0-45-2
ಆರ್ಷದೀಪ್‌ 2-0-20-1
ರವಿ ಬಿಶ್ನೋಯಿ 3-0-29-0
ಎಂ. ಅಶ್ವಿ‌ನ್‌ 4-0-23-2
ಜೋರ್ಡನ್‌ 3-0-20-1
ಪಂಜಾಬ್‌
ಕೆ. ಎಲ್‌. ರಾಹುಲ್‌ ಅಜೇಯ 61
ಅಗರ್ವಾಲ್‌ ಬಿ ಚಹಲ್‌ 45
ಕ್ರಿಸ್‌ ಗೇಲ್‌ ರನೌಟ್‌ 53
ನಿಕೋಲಸ್‌ ಪೂರನ್‌ ಔಟಾಗದೆ 6

ಇತರ 12
ಒಟ್ಟು (20 ಓವರ್‌ಗಳಲ್ಲಿ 2 ವಿಕೆಟಿಗೆ) 177
ವಿಕೆಟ್‌ ಪತನ:

ಬೌಲಿಂಗ್‌:
ಕ್ರಿಸ್‌ ಮಾರಿಸ್‌ 4-0-22-0
ನವದೀಪ್‌ ಸೈನಿ 4-0-21-0
ಚಹಲ್‌ 3-0-35-1
ಇಸುರು ಉದಾನ 2-0-14-0
ಮೊಹಮ್ಮದ್‌ ಸಿರಾಜ್‌ 3-0-44-0
ವಾಷಿಂಗ್ಟನ್‌ ಸುಂದರ್‌ 4-0-38-0

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.