ಅಂಧತ್ವ ಮೆಟ್ಟಿ ನಿಂತ ಕಿಶನ್
Team Udayavani, Oct 13, 2018, 12:47 PM IST
ಕುಂದಾಪುರ: ಅಂಧತ್ವವನ್ನು ಮೆಟ್ಟಿ ನಿಂತು ಚೆಸ್ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲು ಸ್ಥಾಪಿಸುತ್ತಿರುವ ಕನ್ನಡದ ಕ್ರೀಡಾ ಪ್ರತಿಭೆ ಕಿಶನ್ ಗಂಗೊಳ್ಳಿ. 26ರ ಹರೆಯದ ಪ್ರತಿಭಾವಂತ ಕಿಶನ್ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಇಕನಾಮಿಕ್ಸ್ ಎಂ.ಎ.ಯಲ್ಲಿ ಎರಡನೇ ರ್ಯಾಂಕ್ ಪಡೆದವರು. ಕಲಿಕೆಗಾಗಲೀ, ಚೆಸ್ಗಾಗಲೀ ಅವರಿಗೆ ಜನ್ಮತಃ ಅಂಧತ್ವ ಹಿನ್ನಡೆಯಾಗಿಲ್ಲ. ಮೂಲತಃ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಕಲೈಕಾರ್ನವರಾಗಿದ್ದು, ಶಿವಮೊಗ್ಗದ ವಿನೋಬಾ ನಗರದ ಬ್ಯೂಟಿಶಿಯನ್ ಗೀತಾ ಗಂಗೊಳ್ಳಿ ಅವರ ಏಕೈಕ ಪುತ್ರ. ಅಕ್ಷಯಕಲ್ಪ ಆರ್ಗಾನಿಕ್ ಸಂಸ್ಥೆಯಲ್ಲಿ ಕಸ್ಟಮರ್ ಕೇರ್ಗೆ ಮನೆಯಿಂದಲೇ ಉದ್ಯೋಗಿ.
6ನೇ ತರಗತಿಯಿಂದಲೇ ಆರಂಭ
ಕಿಶನ್ ಆರನೇ ತರಗತಿಯಲ್ಲಿದ್ದಾಗ ಚೆಸ್ ಆಟವನ್ನು ಗಂಭೀರವಾಗಿ ಆಡತೊಡಗಿದರು. ಇದಕ್ಕೆ ಅವರ ಸೋದರಮಾವನ ಪ್ರೇರಣೆಯೇ ಕಾರಣವಾಗಿತ್ತು. ಆರಂಭದಲ್ಲಿ ಎಲ್ಲರ ಜತೆಗೆ ಆಟವಾಡುತ್ತ 2011ರಲ್ಲಿ ಅಂಧರ ಚೆಸ್ನಲ್ಲಿ ಸ್ಪರ್ಧೆ ಆರಂಭಿಸಿದರು. ಅಂದಿನಿಂದ ಚೆಸ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತ ಬಂದರು. 2012ರಲ್ಲಿ ಚೆನ್ನೈಯಲ್ಲಿ ನಡೆದ ಅಂಧರ ಚೆಸ್ ಒಲಿಂಪಿಯಾಡ್ನಲ್ಲಿ ಭಾರತವನ್ನು ಪ್ರತಿನಿಧಿಸಿ ವೈಯಕ್ತಿಕ ಚಿನ್ನದ ಪದಕ ಗೆದ್ದ ದೇಶದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಸಂಪಾದಿಸಿದರು. ಇದರಲ್ಲಿ ಭಾರತ ತಂಡ ವಿಶ್ವದಲ್ಲಿ 5ನೇ ಸ್ಥಾನ ಪಡೆದಿತ್ತು.
6ನೇ ತರಗತಿಯಿಂದ ಶಿವಮೊಗ್ಗದ ಮತ್ತೂಬ್ಬ ಅಂಧ ಚೆಸ್ ಆಟಗಾರ ಕೃಷ್ಣ ಉಡುಪರ ಬಳಿ ಚೆಸ್ ತರಬೇತಿ ಪಡೆದರು. ಬಳಿಕ ಸ್ವಯಂ ಚೆಸ್ ಕಲಿತು ಕಂಪ್ಯೂಟರ್ ಮೂಲಕವೂ ಅಭ್ಯಸಿಸಿದರು. ತನ್ನ ಅಂಗವೈಕಲ್ಯವನ್ನು ಎಲ್ಲೂ ಪ್ರಕಟಿಸದೆ, ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುವ ಕಿಶನ್ 2013-2017ರ ವರೆಗೆ ಸತತ 4 ಬಾರಿ ಅಂಧರ ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದಾರೆ.
ದೇವರ ಎದುರು ಕುಳಿತೆ
ನಿನ್ನೆಯಿಂದ ಊಟ, ನಿದ್ದೆ ಬಿಟ್ಟು ಸತತ 3 ಮ್ಯಾಚ್ ಆಟವಾಡುತ್ತಿದ್ದ ಕಾರಣ ನನಗೆ ಟೆನ್ಶನ್ ಆಗಿ ದೇವರ ಎದುರು ಕೂತುಬಿಟ್ಟೆ. ನೀನೇ ಏನಾದರೂ ಮಾಡೆಂದು ಪ್ರಾರ್ಥಿಸಿದೆ. ಫಲ ಸಿಕ್ಕಿದೆ
ಗೀತಾ ಗಂಗೊಳ್ಳಿ, ತಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ