ಚೆನ್ನೈಗೆ ಸೋಲುಣಿಸಿದ ಕೆಕೆಆರ್
Team Udayavani, Oct 8, 2020, 3:01 AM IST
ಅಬುಧಾಬಿ: ಬುಧವಾರದ ಐಪಿಎಲ್ ಪಂದ್ಯದಲ್ಲಿ ಅಲ್ಪ ಮೊತ್ತ ಪೇರಿಸಿದ ಕೋಲ್ಕತಾ ನೈಟ್ರೈಡರ್ ತಂಡವು ಆ ಬಳಿಕ ತನ್ನ ಉತ್ಕೃಷ್ಟ ಮಟ್ಟದ ಬೌಲಿಂಗ್ನಿಂದಾಗಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಶೇನ್ ವಾಟ್ಸನ್ ಬಿರುಸಿನ ಅರ್ಧ ಶತಕ ಹೊಡೆದರೂ ಕೆಕೆಆರ್ನ ನಿಖರ ದಾಳಿಗೆ ಕುಸಿದ ಚೆನ್ನೈ ತಂಡವು 5 ವಿಕೆಟಿಗೆ 157 ರನ್ ಗಳಿಸಲಷ್ಟೇ ಶಕ್ತವಾಗಿ 10 ರನ್ನಿನಿಂದ ಶರಣಾಯಿತು.
ಈ ಮೊದಲು ರಾಹುಲ್ ತ್ರಿಪಾಠಿ ಅವರ 81 ರನ್ನಿನಿಂದ ಕೆಕೆಆರ್ ತಂಡವು 167 ರನ್ ಗಳಿಸಿ ಆಲೌಟಾಗಿತ್ತು.
ವಾಟ್ಸನ್- ರಾಯುಡು ಉತ್ತಮ ಜತೆಯಾಟ
ಉತ್ತಮ ಆರಂಭ ನೀಡಿದ ವಾಟ್ಸನ್ ಮತ್ತು ಪ್ಲೆಸಿಸ್ ಮೊದಲ ವಿಕೆಟಿಗೆ 3.4 ಓವರ್ಗಳಲ್ಲಿ 30 ರನ್ ಪೇರಿಸಿ ಬೇರ್ಪಟ್ಟರು.
ರಾಯುಡು ಮತ್ತು ವಾಟ್ಸನ್ ಮತ್ತೆ ಉತ್ತಮ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವಿಗೆ ಶ್ರಮಿಸಿದರು.
ಆದರೆ ವಾಟ್ಸನ್ ಔಟಾದ ಬಳಿಕ ತಂಡದ ರನ್ವೇಗಕ್ಕೆ ಕಡಿವಾಣ ಬಿತ್ತು.
ಧೋನಿ, ಕರನ್ ಮತ್ತು ಕೇದಾರ್ ಚಾಧವ್ ರನ್ ಗಳಿಸಲು ಬಹಳಷ್ಟು ಒದ್ದಾಡಿದರು.
ಇದರಿಂದ ಚೆನ್ನೈ ಒತ್ತಡಕ್ಕೆ ಸಿಲುಕಿತು. ಅಂತಿಮ ಓವರಿನಲ್ಲಿ ತಂಡ ಗೆಲುವಿಗೆ 26 ರನ್ ಬೇಕಾಗಿತ್ತು. ಆದರೆ ರವೀಂದ್ರ ಜಡೇಜ ಮತ್ತು ಜಾಧವ್ ಕೇವಲ 15 ರನ್ ಗಳಿಸಿದ್ದರಿಂದ ತಂಡ ಸೋಲು ಕಾಣುವಂತಾಯಿತು.
ಸ್ಕೋರ್ ಪಟ್ಟಿ
ಕೋಲ್ಕತಾ ನೈಟ್ರೈಡರ್
ರಾಹುಲ್ ತ್ರಿಪಾಠಿ ಸಿ ವಾಟ್ಸನ್ ಬಿ ಬ್ರಾವೊ 81
ಶುಭಮನ್ ಗಿಲ್ ಸಿ ಧೋನಿ ಬಿ ಠಾಕೂರ್ 11
ನಿತೀಶ್ ರಾಣ ಸಿ ಜಡೇಜ ಬಿ ಕರಣ್ ಶರ್ಮ 9
ನಾರಾಯಣ್ ಸಿ ಡು ಪ್ಲೆಸಿಸ್ ಬಿ ಸ್ಯಾಮ್ 17
ಮಾರ್ಗನ್ ಸಿ ಧೋನಿ ಬಿ ಸ್ಯಾಮ್ 7
ರಸೆಲ್ ಸಿ ಧೋನಿ ಬಿ ಠಾಕೂರ್ 2
ದಿನೇಶ್ ಕಾರ್ತಿಕ್ ಸಿ ಠಾಕೂರ್ ಬಿ ಸ್ಯಾಮ್ 12
ಪಾಟ್ ಕಮಿನ್ಸ್ ಔಟಗದೆ 17
ನಾಗರ್ಕೋಟಿ ಸಿ ಡು ಪ್ಲೆಸಿಸ್ ಬಿ ಬ್ರಾವೊ 0
ಶಿವಂ ಮಾವಿ ಸಿ ಧೋನಿ ಬಿ ಬ್ರಾವೊ 0
ವರುಣ್ ಚಕ್ರವರ್ತಿ ರನೌಟ್ 1
ಇತರ 10
ಒಟ್ಟು (20 ಓವರ್ಗಳಲ್ಲಿ ಆಲೌಟ್) 167
ವಿಕೆಟ್ ಪತನ: 1-37, 2-70, 3-98, 4-114, 5-128. 6-140, 7-162, 8-163, 9-166
ಬೌಲಿಂಗ್:
ದೀಪಕ್ ಚಹರ್ 4-0 -47-0
ಸ್ಯಾಮ್ ಕರಣ್ 4-0-26-2
ಶಾರ್ದೂಲ್ ಠಾಕೂರ್ 4-0-28-2
ಕರನ್ ಶರ್ಮ 4-0-25-2
ಡ್ವೇನ್ ಬ್ರಾವೊ 4-0-37-3
ಚೆನ್ನೈ ಸೂಪರ್ ಕಿಂಗ್ಸ್
ವಾಟ್ಸನ್ ಎಲ್ಬಿಡಬ್ಲ್ಯು ಬಿ ನಾರಾಯಣ್ 50
ಫಾ ಡು ಪ್ಲೆಸಿಸ್ ಸಿ ಕಾರ್ತಿಕ್ ಬಿ ಮಾವಿ 17
ರಾಯುಡು ಸಿ ಗಿಲ್ ಬಿ ಮಾವಿ 30
ಎಂ. ಎಸ್. ಧೋನಿ ಬಿ ಚಕ್ರವರ್ತಿ 11
ಸ್ಯಾಮ್ ಕರನ್ ಸಿ ಮಾರ್ಗನ್ ಬಿ ರಸೆಲ್ 17
ಕೇದರ್ ಜಾಧವ್ ಔಟಾಗದೆ 7
ರವೀಂದ್ರ ಜಡೇಜ ಔಟಾಗದೆ 21
ಇತರ 4
ಒಟ್ಟು (20 ಓವರ್ಗಳಲ್ಲಿ 5 ವಿಕೆಟಿಗೆ) 157
ವಿಕೆಟ್ ಪತನ: 1-30, 2-99, 3-101, 4-129, 5-129.
ಬೌಲಿಂಗ್:
ಪಾಟ್ ಕಮಿನ್ಸ್ 4-0-25-0
ಶಿವಂ ಮಾವಿ 3-0-32-1
ವರುಣ್ ಚಕ್ರವರ್ತಿ 4-0-28-1
ಕಮಲೇಶ್ ನಾಗರಕೋಟಿ 3-0-21-1
ಸುನೀಲ್ ನಾರಾಯಣ್ 4-0-31-1
ಆ್ಯಂಡ್ರೆ ರಸೆಲ್ 2-0-18-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ