ಮರಳಿ ಅಗ್ರಸ್ಥಾನಕ್ಕೇರಿದ ಕೆಕೆಆರ್‌


Team Udayavani, Apr 27, 2017, 8:51 PM IST

KKR-27–4.jpg

ಪುಣೆ: ನಾಯಕ ಗೌತಮ್‌ ಗಂಭೀರ್‌ ಮತ್ತು ರಾಬಿನ್‌ ಉತ್ತಪ್ಪ ಅವರ ಆಕರ್ಷಕ ಅರ್ಧಶತಕದಿಂದಾಗಿ ಕೋಲ್ಕತಾ ನೈಟ್‌ರೈಡರ್ ತಂಡವು ಬುಧವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಗೆಲ್ಲಲು 183 ರನ್‌ ತೆಗೆಯುವ ಕಠಿನ ಗುರಿ ಪಡೆದ ಕೆಕೆಆರ್‌ ತಂಡವು 18.1 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟದಲ್ಲಿ ಜಯದ ಗುರಿ ತಲುಪಿತು. ಈ ಮೊದಲು ಪುಣೆ ತಂಡವು 5 ವಿಕೆಟಿಗೆ 182 ರನ್‌ ಗಳಿಸಿತ್ತು. ಗಂಭೀರ್‌ ಮತ್ತು ಉತ್ತಪ್ಪ  ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದು ತಂಡದ ಗೆಲುವನ್ನು ಖಚಿತಪಡಿಸಿದರು. ಬಿರುಸಿನ ಆಟವಾಡಿದ ಅವರು ದ್ವಿತೀಯ ವಿಕೆಟಿಗೆ 158 ರನ್‌ ಪೇರಿಸಿದರು. ಗೆಲುವಿಗೆ 5 ರನ್‌ ಇರುವಾಗ ಉತ್ತಪ್ಪ ಔಟಾದರು. 47 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 6 ಸಿಕ್ಸರ್‌ ನೆರವಿನಿಂದ 87 ರನ್‌ ಹೊಡೆದರು. ಉತ್ತಪ್ಪ ಮತ್ತು ಗಂಭೀರ್‌ ಅವರ ಆಟ ಗುಜರಾತ್‌ ವಿರುದ್ಧ ಗಂಭೀರ್‌ ಮತ್ತು ಆ್ಯಂಡ್ರೂé ಲಿನ್‌ ಅವರ ಆಟವನ್ನು ನೆನಪಿಸುವಂತಿತ್ತು. 


ಉತ್ತಪ್ಪ ಔಟಾದ ತತ್‌ಕ್ಷಣವೇ ಗಂಭೀರ್‌ ಕೂಡ ಕ್ರಿಸ್ಟಿಯನ್‌ಗೆ ವಿಕೆಟ್‌ ಒಪ್ಪಿಸಿದರು. 46 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 62 ರನ್‌ ಹೊಡೆದರು.
ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪುಣೆ ತಂಡವು ಭರ್ಜರಿ ಆರಂಭ ಪಡೆಯಿತು. ಆರಂಭಿಕರಾದ ಅಜಿಂಕ್ಯ ರಹಾನೆ ಮತ್ತು ರಾಹುಲ್‌ ತ್ರಿಪಾಠಿ ಬಿರುಸಿನ ಆಟವಾಡಿ ಮೊದಲ ವಿಕೆಟಿಗೆ 7.5 ಓವರ್‌ಗಳಲ್ಲಿ 65 ರನ್ನುಗಳ ಜತೆಯಾಟ ನಡೆಸಿದರು. ಉತ್ತಮವಾಗಿ ಆಡುತ್ತಿದ್ದ ತ್ರಿಪಾಠಿ ಅಂತಿಮವಾಗಿ ಚಾವ್ಲಾ ಮೋಡಿಗೆ ಕ್ಲೀನ್‌ಬೌಲ್ಡ್‌ ಆದರು. 23 ಎಸೆತ ಎದುರಿಸಿದ ಅವರು 38 ರನ್‌ ಹೊಡೆದರು.

ಸ್ಕೋರ್‌ ಪಟ್ಟಿ
ರೈಸಿಂಗ್‌ ಪುಣೆ ಸೂಪರ್‌ಜೈಂಟ್‌

ಅಜಿಂಕ್ಯ ರಹಾನೆ    ಸ್ಟಂಪ್ಡ್ ಉತ್ತಪ್ಪ ಬಿ ನಾರಾಯಣ್‌    46
ರಾಹುಲ್‌ ತ್ರಿಪಾಠಿ    ಬಿ ಚಾವ್ಲಾ    38
ಸ್ಟೀವನ್‌ ಸ್ಮಿತ್‌    ಔಟಾಗದೆ    51
ಎಂಎಸ್‌ ಧೋನಿ    ಸ್ಟಂಪ್ಡ್ ಉತ್ತಪ್ಪ ಬಿ ಕುಲದೀಪ್‌    23
ಮನೋಜ್‌ ತಿವಾರಿ    ಸ್ಟಂಪ್ಡ್ ಉತ್ತಪ್ಪ ಬಿ ಕುಲದೀಪ್‌    1
ಡಿ. ಕ್ರಿಸ್ಟಿಯನ್‌    ಸಿ ಪಾಂಡೆ ಬಿ ಉಮೇಶ್‌    16

ಇತರ:        7
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ)    182

ವಿಕೆಟ್‌ ಪತನ: 1-65, 2-112, 3-148, 4-150, 5-182

ಬೌಲಿಂಗ್‌:
ಉಮೇಶ್‌ ಯಾದವ್‌    3-0-28-1
ಕ್ರಿಸ್‌ ವೋಕ್ಸ್‌        3-0-38-0
ಸುನೀಲ್‌ ನಾರಾಯಣ್‌    4-0-34-1
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌    2-0-14-0
ಪೀಯೂಷ್‌ ಚಾವ್ಲಾ        4-0-36-1
ಕುಲದೀಪ್‌ ಯಾದವ್‌    4-0-31-2

ಕೋಲ್ಕತಾ ನೈಟ್‌ರೈಡರ್ಸ್
ಸುನೀಲ್‌ ನಾರಾಯಣ್‌    ರನೌಟ್‌    16
ಗೌತಮ್‌ ಗಂಭೀರ್‌    ಸಿ ಠಾಕುರ್‌ ಬಿ ಕ್ರಿಸ್ಟಿಯನ್‌    62
ರಾಬಿನ್‌ ಉತ್ತಪ್ಪ    ಸಿ ತ್ರಿಪಾಠಿ ಬಿ ಉನಾದ್ಕತ್‌    87
ಡ್ಯಾರನ್‌ ಬ್ರಾವೊ    ಔಟಾಗದೆ    6
ಮನೀಷ್‌ ಪಾಂಡೆ    ಔಟಾಗದೆ    0

ಇತರ:        13
ಒಟ್ಟು  (18.1 ಓವರ್‌ಗಳಲ್ಲಿ 3 ವಿಕೆಟಿಗೆ)    184

ವಿಕೆಟ್‌ ಪತನ: 1-20, 2-178, 3-179

ಬೌಲಿಂಗ್‌:
ಜೈದೇವ್‌ ಉನಾದ್ಕತ್‌    3-0-26-1
ಶಾದೂìಲ್‌ ಠಾಕುರ್‌    3.1-0-31-0
ವಾಷಿಂಗ್ಟನ್‌ ಸುಂದರ್‌    3-0-32-0
ಡೇನಿಯಲ್‌ ಕ್ರಿಸ್ಟಿಯನ್‌    4-0-31-1
ಇಮ್ರಾನ್‌ ತಾಹಿರ್‌        4-0-48-0
ರಾಹುಲ್‌ ತ್ರಿಪಾಠಿ        1-0-12-0

ಪಂದ್ಯಶ್ರೇಷ್ಠ: ರಾಬಿನ್‌ ಉತ್ತಪ್ಪ

ಟಾಪ್ ನ್ಯೂಸ್

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Police Raid: 346 ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.