ಪಂಜಾಬ್‌ ಜಯಕ್ಕೆ ರಾಹುಲ್‌ ಆಸರೆ


Team Udayavani, May 7, 2018, 6:05 AM IST

PTI5_6_2018_000197B.jpg

ಇಂದೋರ್‌: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ.

ಮುಜೀಬ್‌ ಉರ್‌ ರೆಹಮಾನ್‌ ಅವರ ನಿಖರ ದಾಳಿಗೆ ತತ್ತರಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡವು 9 ವಿಕೆಟಿಗೆ 152 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಪಂಜಾಬ್‌ ತಂಡ ಕುಸಿತಕ್ಕೆ ಒಳಗಾದರೂ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌ ಅವರ ಅಜೇಯ ಅರ್ಧಶತಕದಿಂದಾಗಿ 18.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 155 ರನ್‌ ಪೇರಿಸಿ ಜಯಭೇರಿ ಬಾರಿಸಿತು. ಈ ಗೆಲುವಿನಿಂದ ಪಂಜಾಬ್‌ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು.

ಒಂದು ಹಂತದಲ್ಲಿ 87 ರನ್ನಿಗೆ ನಾಲ್ಕು ವಿಕೆಟ್‌ ಕಳೆದು ಕೊಂಡು ಸಂಕಷ್ಟಕ್ಕೆ ಬಿದ್ದಿದ್ದ ಪಂಜಾಬ್‌ ತಂಡವನ್ನು ರಾಹುಲ್‌ ಆಧರಿಸಿದರು. ಅವರು ಮುರಿಯದ ಐದನೇ ವಿಕೆಟಿಗೆ ಮಾರ್ಕಸ್‌ ಸ್ಟಾಯಿನಿಸ್‌ ಜತೆಗೆ 68 ರನ್‌ ಪೇರಿಸಿ ತಂಡದ ಗೆಲುವು ಸಾರಿದರು. ಭರ್ಜರಿ ಆಟದ ಪ್ರದರ್ಶನ ನೀಡಿದ ರಾಹುಲ್‌ 54 ಎಸೆತ ಎದುರಿಸಿ 7 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 84 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಆರಂಭಕಾರ ಜಾಸ್‌ ಬಟ್ಲರ್‌ ಎಂದಿನಂತೆ ಬಿರುಸಿನ ಆಟಕ್ಕೆ ಮುಂದಾದರೂ ಇನ್ನೊಂದು ತುದಿಯಲ್ಲಿ ವಿಕೆಟ್‌ ಉರುಳುತ್ತಲೇ ಹೋದದ್ದು ರಾಜಸ್ಥಾನ್‌ಗೆ ಕಂಟಕವಾಗಿ ಪರಿಣಮಿಸಿತು. 13ನೇ ಓವರ್‌ ತನಕ ಕ್ರೀಸಿನಲ್ಲಿದ್ದ ಬಟ್ಲರ್‌ 39 ಎಸೆತ ಎದುರಿಸಿ 51 ರನ್‌ ಬಾರಿಸಿದರು. ಇದರಲ್ಲಿ 7 ಬೌಂಡರಿ ಒಳಗೊಂಡಿತ್ತು.  ಬಟ್ಲರ್‌-ಸಂಜು ಸ್ಯಾಮ್ಸನ್‌ 3ನೇ ವಿಕೆಟಿಗೆ 49 ರನ್‌ ಪೇರಿಸಿ ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಆದರೆ ಈ ಜೋಡಿ ಬೇರ್ಪಟ್ಟೊಡನೆ ರಾಜಸ್ಥಾನ್‌ ಕುಸಿತ ತೀವ್ರಗೊಂಡಿತು.ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಸತತ ಎಸೆತಗಳಲ್ಲಿ ಬಟ್ಲರ್‌, ಆರ್ಚರ್‌ ವಿಕೆಟ್‌ ಉಡಾಯಿಸಿ ಘಾತಕವಾಗಿ ಪರಿ ಣಮಿಸಿದರು. ಮುಜೀಬ್‌ ಸಾಧನೆ 27ಕ್ಕೆ 3 ವಿಕೆಟ್‌. 

ಸ್ಕೋರ್‌ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌

ಜಾಸ್‌ ಬಟ್ಲರ್‌    ಸಿ ರಾಹುಲ್‌ ಮುಜೀಬ್‌    51
ಡಿ’ಆರ್ಸಿ ಶಾರ್ಟ್‌    ಸಿ ಟೈ ಬಿ ಅಶ್ವಿ‌ನ್‌    2
ಅಜಿಂಕ್ಯ ರಹಾನೆ    ಸಿ ಗೇಲ್‌ ಬಿ ಪಟೇಲ್‌    5
ಸಂಜು ಸ್ಯಾಮ್ಸನ್‌    ಸಿ ನಾಯರ್‌ ಬಿ ಟೈ    28
ಬೆನ್‌ ಸ್ಟೋಕ್ಸ್‌    ಸಿ ತಿವಾರಿ ಬಿ ಮುಜೀಬ್‌    12
ರಾಹುಲ್‌ ತ್ರಿಪಾಠಿ    ಸಿ ಅಶ್ವಿ‌ನ್‌ ಬಿ ಟೈ    11
ಜೋಫ‌Å ಆರ್ಚರ್‌    ಬಿ ಮುಜೀಬ್‌    0
ಕೆ. ಗೌತಮ್‌    ಸಿ ಸ್ಟೊಯಿನಿಸ್‌ ಬಿ ರಜಪೂತ್‌    5
ಶ್ರೇಯಸ್‌ ಗೋಪಾಲ್‌    ರನೌಟ್‌    24
ಜೈದೇವ್‌ ಉನಾದ್ಕತ್‌    ಔಟಾಗದೆ    6
ಇತರ        8
ಒಟ್ಟು  (20 ಓವರ್‌ಗಳಲ್ಲಿ 9 ವಿಕೆಟಿಗೆ)    152
ವಿಕೆಟ್‌ ಪತನ: 1-3, 2-35, 3-84, 4-100, 5-106, 6-106, 7-114, 8-129, 9-152.
ಬೌಲಿಂಗ್‌: ಆರ್‌. ಅಶ್ವಿ‌ನ್‌        4-0-30-1
ಅಂಕಿತ್‌ ರಜಪೂತ್‌        3-0-37-1
ಮುಜೀಬ್‌ ಉರ್‌ ರೆಹಮಾನ್‌    4-0-27-3
ಅಕ್ಷರ್‌ ಪಟೇಲ್‌        4-0-21-1
ಆ್ಯಂಡ್ರೂé ಟೈ        4-0-24-2
ಮಾರ್ಕಸ್‌ ಸ್ಟೊಯಿನಿಸ್‌        1-0-6-0
ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಕೆಎಲ್‌ ರಾಹುಲ್‌    ಔಟಾಗದೆ    84
ಕ್ರಿಸ್‌ ಗೇಲ್‌    ಸಿ ಸ್ಯಾಮ್ಸನ್‌ ಬಿ ಆರ್ಚರ್‌    8
ಮಯಾಂಕ್‌ ಅಗರ್ವಾಲ್‌    ಸಿ ತ್ರಿಪಾಠಿ ಬಿ ಸ್ಟೋಕ್ಸ್‌    2
ಕರುಣ್‌ ನಾಯರ್‌    ಬಿ ಅನುರೀತ್‌ ಸಿಂಗ್‌    31
ಅಕ್ಷರ್‌ ಪಟೇಲ್‌    ಸಿ ಶಾರ್ಟ್‌ ಬಿ ಗೌತಮ್‌    4
ಮಾರ್ಕಸ್‌ ಸ್ಟಾಯಿನಿಸ್‌    ಔಟಾಗದೆ    23
ಇತರ:        3
ಒಟ್ಟು (18.4 ಓವರ್‌ಗಳಲ್ಲಿ 4 ವಿಕೆಟಿಗೆ)    155
ವಿಕೆಟ್‌ ಪತನ: 1-23, 2-29, 3-79, 4-87
ಬೌಲಿಂಗ್‌: ಕೃಷ್ಣಪ್ಪ ಗೌತಮ್‌        3-0-18-1
ಜೋಫ್ರಾ ಆರ್ಚರ್‌        3.4-0-43-1
ಬೆನ್‌ ಸ್ಟೋಕ್ಸ್‌        3-0-22-1
ಜೈದೇವ್‌ ಉನಾದ್ಕತ್‌        4-0-26-0
ಶ್ರೇಯಸ್‌ ಗೋಪಾಲ್‌        3-0-26-0
ಅನುರೀತ್‌ ಸಿಂಗ್‌        2-0-20-0
ಪಂದ್ಯಶ್ರೇಷ್ಠ: ಮುಜೀಬ್‌ ಉರ್‌ ರೆಹಮಾನ್‌

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.