ಇದೇ ಕೊನೆಯ ಪಂದ್ಯವೆಂದು ಭಾವಿಸಿ ಆಡಿದ ಮ್ಯಾಥ್ಯೂ ವೇಡ್
Team Udayavani, Nov 13, 2021, 7:00 AM IST
ದುಬಾೖ: ಘಾತಕ ವೇಗಿ ಅಫ್ರಿದಿ ಎಸೆತಗಳಿಗೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಆಸ್ಟ್ರೇಲಿಯವನ್ನು ಗೆಲ್ಲಿಸಿದ ಮ್ಯಾಥ್ಯೂ ವೇಡ್ ಈಗ ದೊಡ್ಡ ಹೀರೋ. ಇದು ಆಸ್ಟ್ರೇಲಿಯವನ್ನು ಪ್ರತಿನಿಧಿಸಲು ತನಗಿರುವ ಅಂತಿಮ ಅವಕಾಶವೇನೋ ಎಂದು ಭಾವಿಸಿ ಅವರು ಕ್ರೀಸ್ ಇಳಿದಿದ್ದರಂತೆ!
ನನ್ನ ಪಾಲಿಗೊಂದು ಅವಕಾಶ:
“ಕ್ರೀಸಿಗೆ ಬರುವಾಗ ನಾನು ತುಸು ನರ್ವಸ್ ಆಗಿದ್ದೆ. ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್ನಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದರಿಂದ ಇದೇ ತನ್ನ ಕೊನೆಯ ಪಂದ್ಯವಾದೀತೆಂದು ಭಾವಿಸಿದ್ದೆ. ಪರಿಸ್ಥಿತಿ ಹಾಗಿತ್ತು. ತಂಡವನ್ನು ಎತ್ತಿ ನಿಲ್ಲಿಸಿ ಗೆಲ್ಲಿಸುವ ಅವಕಾಶ ನನ್ನ ಮುಂದಿತ್ತು. ಇದರಲ್ಲಿ ಯಶಸ್ಸು ಸಾಧಿಸಿದ್ದೇ ಆದರೆ ದೇಶವನ್ನು ಪ್ರತಿನಿಧಿಸಿದ್ದು ನನ್ನ ಪಾಲಿಗೆ ಸಾರ್ಥಕವಾಗುತ್ತಿತ್ತು. ಕೊನೆಗೂ ಇದರಲ್ಲಿ ನಾನು ಯಶಸ್ಸು ಸಾಧಿಸಿದೆ. ಫೈನಲ್ ಪಂದ್ಯವೇ ನನ್ನ ಕೊನೆಯ ಟಿ20 ಪಂದ್ಯವಾಗಲಿದೆ’ ಎಂದು ವೇಡ್ ಹೇಳಿದರು.
ಅಫ್ರಿದಿ ಎಸೆತಗಳಿಗೆ ಸತತ 3 ಸಿಕ್ಸರ್ ಬಾರಿಸಿದ ಬಗ್ಗೆ ಪ್ರತಿಕ್ರಿಯಿಸಿದ ವೇಡ್, “ನಾವು ಅಫ್ರಿದಿಯನ್ನು ಟಾರ್ಗೆಟ್ ಮಾಡಲೇ ಇಲ್ಲ. ಆಗ ಸ್ಟೋಯಿನಿಸ್ ಮುನ್ನುಗ್ಗಿ ಬೀಸುತ್ತಿದ್ದರು. ಹೀಗಾಗಿ ಗುರಿ ಅಸಾಧ್ಯವಲ್ಲ ಎಂದು ಭಾವಿಸಿದೆವು. ನನಗೆ ಅದೃಷ್ಟ ಕೂಡ ಕೈಹಿಡಿಯಿತು’ ಎಂದರು. 33 ವರ್ಷದ ಮ್ಯಾಥ್ಯೂ ವೇಡ್, ಒಂದು ಹಂತದಲ್ಲಿ 3 ವರ್ಷ ಕಾಲ ಟಿ20 ಪಂದ್ಯವಾಡದೇ ಉಳಿದಿದ್ದರು!
ಅಂದು ಹಸ್ಸಿ ಸಿಕ್ಸರ್:
2010ರ ಸೆಮಿಯಲ್ಲೂ ಆಸೀಸ್ ಇಂಥದೇ ಅಸಾಮಾನ್ಯ ಬ್ಯಾಟಿಂಗ್ ಮೂಲಕ ಪಾಕಿಸ್ಥಾನವನ್ನು ಹೊರ ದಬ್ಬಿತ್ತು. ಅಂದು 191 ರನ್ ಚೇಸಿಂಗ್ ವೇಳೆ ಮೈಕಲ್ ಹಸ್ಸಿ ಸಿಡಿದು ನಿಂತಿ ದ್ದರು. ಸಯೀದ್ ಅಜ್ಮಲ್ ಅವರ ಕೊನೆಯ ಓವರ್ನಲ್ಲಿ 18 ರನ್ ಅಗತ್ಯ ವಿದ್ದಾಗ 22 ರನ್ ಬಾರಿಸಿ 3 ವಿಕೆಟ್ ಜಯ ತಂದಿತ್ತಿದ್ದರು (6, 6, 4, 6).
ಸೆಮಿಫೈನಲ್ ಸ್ವಾರಸ್ಯ:
ಎರಡೂ ಸೆಮಿಫೈನಲ್ ಏಕರೀತಿಯ ಹೋರಾಟಕ್ಕೆ ಸಾಕ್ಷಿಯಾದದ್ದು ಕೂಟದ ಸ್ವಾರಸ್ಯವೆನಿಸಿದೆ. ಎರಡರಲ್ಲೂ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಗೆಲ್ಲುವ
ಅವಕಾಶ ಹೆಚ್ಚಿತ್ತು. ಆದರೆ ನೀಶಮ್-ಮಿಚೆಲ್ ಮತ್ತು ಸ್ಟೋಯಿನಿಸ್-ಮ್ಯಾಥ್ಯೂ
ವೇಡ್ ಕೊನೆಯ ಗಳಿಗೆಯಲ್ಲಿ ಸಿಡಿದು ಫಲಿತಾಂಶವನ್ನೇ ಬದಲಿಸಿದರು. ಎರಡೂ ಸಂದರ್ಭದಲ್ಲಿ ಸಿಕ್ಸರ್ ಸುರಿಮಳೆಯಾಯಿತು.ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 4 ವಿಕೆಟ್ ಕಳೆದುಕೊಂಡರೆ, ಚೇಸಿಂಗ್ ತಂಡಗಳೆರಡೂ 5 ವಿಕೆಟ್ ನಷ್ಟದಲ್ಲಿ, ಸರಿಯಾಗಿ 19 ಓವರ್ಗಳಲ್ಲಿ ಗುರಿ ಮುಟ್ಟಿದವು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ