ಹಾಕಿ ತಾರೆ ನಿಕ್ಕಿನ್ ಸಹಿತ 16 ಮಂದಿಗೆ ಕೆಒಎ ಪ್ರಶಸ್ತಿ
Team Udayavani, Dec 3, 2019, 11:25 PM IST
ಬೆಂಗಳೂರು: ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ವತಿಯಿಂದ ಕೊಡಮಾಡುವ ಪ್ರತಿಷ್ಠಿತ “ಕೆಒಎ ಪ್ರಶಸ್ತಿ’ಯನ್ನು ಮಂಗಳವಾರ ಪ್ರಕಟಿಸಲಾಗಿದೆ. ರಾಜ್ಯದ ಖ್ಯಾತ ಹಾಕಿ ತಾರೆ ನಿಕ್ಕಿನ್ ತಿಮ್ಮಯ್ಯ, ಬ್ಯಾಡ್ಮಿಂಟನ್ ಪಟು ಕೆ.ಅಶ್ವಿನಿ ಭಟ್ ಸೇರಿದಂತೆ ಒಟ್ಟಾರೆ 16 ಮಂದಿ ಕೆಒಎ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೈನಾ ನೆಹ್ವಾಲ್ ಅವರ ಮಾಜಿ ಬ್ಯಾಡ್ಮಿಂಟನ್ ಕೋಚ್ ವಿಮಲ್ ಕುಮಾರ್ ಸೇರಿದಂತೆ ನಾಲ್ವರು ಮಾಜಿ ಕ್ರೀಡಾಪಟುಗಳಿಗೆ ಜೀವಮಾನಶ್ರೇಷ್ಠ ಗೌರವ ನೀಡಲಾಗುತ್ತಿದೆ. ಕೆಒಎ ಪ್ರಶಸ್ತಿ ವಿಜೇತರು 1 ಲಕ್ಷ ರೂ. ನಗದು, ಸ್ಮರಣಿಕೆ ಪಡೆಯಲಿದ್ದಾರೆ. ಜೀವಮಾನಶ್ರೇಷ್ಠ ಪ್ರಶಸ್ತಿ ವಿಜೇತರು 25 ಸಾವಿರ ರೂ. ನಗದು, ಸ್ಮರಣಿಕೆ ಪಡೆಯಲಿದ್ದಾರೆ ಎಂದು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕೆಒಎ ಪ್ರಶಸ್ತಿ ಪುರಸ್ಕೃತರು
ನಿಕ್ಕಿನ್ ತಿಮ್ಮಯ್ಯ (ಹಾಕಿ), ಕೆ.ಅಶ್ವಿನಿ ಭಟ್ (ಬ್ಯಾಡ್ಮಿಂಟನ್), ಲೋಪಮುದ್ರ (ಬಾಸ್ಕೆಟ್ಬಾಲ್), ರಾಜು ಎ ಬಟ್ಟಿ (ಸೈಕ್ಲಿಂಗ್), ಬಿ.ನೈದೆಲೆ (ಫೆನ್ಸಿಂಗ್), ಎಂ.ಸುನಿಲ್ ಕುಮಾರ್ (ಫುಟ್ಬಾಲ್), ಮನು (ಖೋ ಖೋ), ಬಿ.ಆರ್.ನಿತೀಶ್ (ಕಬಡ್ಡಿ), ಬಿ.ಆರ್.ನಿಕ್ಷೇಪ್ (ಲಾನ್ ಟೆನಿಸ್), ಎಲ್.ಜಿ.ನಂದಿನಿ (ನೆಟ್ಬಾಲ್), ಸಿ.ಪಿ.ಜ್ಯೋತಿ (ರೋವಿಂಗ್), ಎಸ್.ಶಿವ (ಈಜು), ಟಿ.ಆರ್.ಶ್ರೀಜಯ್ (ಶೂಟಿಂಗ್), ಯಶಸ್ವಿನಿ ಡಿ.ಘೋರ್ಪಡೆ (ಟೇಬಲ್ ಟೆನಿಸ್), ಅಕ್ಷತಾ ಬಿ.ಕಮಟಿ (ವೇಟ್ಲಿಫ್ಟಿಂಗ್), ಕೆ.ರವಿ (ಮಾಧ್ಯಮ)
ಜೀವಮಾನಶ್ರೇಷ್ಠ ಪುರಸ್ಕೃತರು
ಯು.ವಿಮಲ್ ಕುಮಾರ್ (ಬ್ಯಾಡ್ಮಿಂಟನ್), ಚೆಂಡಂಡ ಅಚ್ಚಯ್ಯ ಕುಟ್ಟಪ್ಪ (ಬಾಕ್ಸಿಂಗ್), ನೋಯಲ್ ಆ್ಯಂಟನಿ ವಿಲ್ಸನ್ (ಫುಟ್ಬಾಲ್), ಎಂ.ವಿನೋದ್ ಚಿನ್ನಪ್ಪ (ಹಾಕಿ).
ರಾಜ್ಯಪಾಲರು ಗೈರು
ಪ್ರತಿ ವರ್ಷವೂ ಕೆಒಎ ಪ್ರಶಸ್ತಿ ಸಮಾರಂಭಕ್ಕೆ ರಾಜ್ಯಪಾಲರು ಆಗಮಿಸುತ್ತಿದ್ದರು. ಈ ಸಲ ಅವರ ಅನುಪಸ್ಥಿತಿಯಲ್ಲಿ ಬುಧವಾರ ಕರ್ನಾಟಕ ಒಲಿಂಪಿಕ್ಸ್ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜ್ಯಪಾಲರು ಆಸ್ಪತ್ರೆ ದಾಖಲಾಗಿದ್ದಾರೆ. ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು