ಬೆಂಗಳೂರಿಗೆ ಕ್ಯಾಪ್ಟನ್‌ ಕೊಹ್ಲಿ ಬಲ


Team Udayavani, Apr 14, 2017, 1:03 AM IST

Bala-14-4.jpg

ಬೆಂಗಳೂರು: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಶುಕ್ರವಾರ 10ನೇ ಐಪಿಎಲ್‌ನಲ್ಲಿ ಆಡಲಿಳಿದು ಆರ್‌ಸಿಬಿಯನ್ನು ಮುನ್ನಡೆಸಲಿದ್ದಾರೆ. ಕೊಹ್ಲಿ ಆಗಮನದಿಂದ ಸಹಜವಾಗಿಯೇ ಬೆಂಗಳೂರು ತಂಡದ ಅಭಿಮಾನಿಗಳು ಹೆಚ್ಚು ಖುಷಿಯಲ್ಲಿದ್ದಾರೆ. ಈ ಯುಗಾದಿ ಪಂದ್ಯ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆಯಲಿದ್ದು, ಆರ್‌ಸಿಬಿ ತವರಿನ ಲಾಭವನ್ನೆತ್ತಿ ಸಿಹಿ ಹಂಚೀತೆಂಬ ನಿರೀಕ್ಷೆ ಎಲ್ಲರದು. ಶೇನ್‌ ವಾಟ್ಸನ್‌ ನಾಯಕತ್ವದಲ್ಲಿ ಈವರೆಗೆ 3 ಪಂದ್ಯಗಳನ್ನಾಡಿರುವ ಆರ್‌ಸಿಬಿ ಜಯ ಸಾಧಿಸಿದ್ದು ಒಂದರಲ್ಲಿ ಮಾತ್ರ. ಅದು ಡೆಲ್ಲಿ ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಮೇಲಾಟವಾಗಿತ್ತು. ಗೆಲುವಿನ ಅಂತರ 15 ರನ್‌. ಇದು ಆರ್‌ಸಿಬಿಯ ಏಕೈಕ ತವರು ಪಂದ್ಯವಾಗಿತ್ತು. ಇದರ ಹಿಂದಿನ-ಮುಂದಿನ ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ಲಾಗ ಹಾಕಿತ್ತು. ಆರಂಭದಲ್ಲಿ ಹೈದರಾಬಾದ್‌ ವಿರುದ್ಧ 35 ರನ್ನುಗಳಿಂದ ಸೋತರೆ, ಕೊನೆಯ ಪಂದ್ಯದಲ್ಲಿ ಪಂಜಾಬ್‌ಗೆ 8 ವಿಕೆಟ್‌ಗಳಿಂದ ಶರಣಾಗಿತ್ತು.

ಕೊಹ್ಲಿ ಫಾರ್ಮ್ ಹೇಗಿದ್ದೀತು?
ವಿರಾಟ್‌ ಕೊಹ್ಲಿ ಆಗಮನದಿಂದ ಸಹಜವಾಗಿಯೇ ಆರ್‌ಸಿಬಿಗೆ ಆನೆಬಲ ಬಂದಿದೆ. ಆದರೆ ಅವರ ಫಾರ್ಮ್ ಹೇಗಿದೆ ಎಂಬ ಆತಂಕ ಇದ್ದೇ ಇದೆ. ಕಳೆದ ವರ್ಷ 16 ಐಪಿಎಲ್‌ ಪಂದ್ಯಗಳಿಂದ 973 ರನ್‌ ಸೂರೆಗೈದು, ತಂಡವನ್ನು ಫೈನಲ್‌ ತನಕ ಮುನ್ನಡೆಸಿದ ಹೆಗ್ಗಳಿಕೆ ಕೊಹ್ಲಿ ಅವರದಾಗಿತ್ತು. ಆದರೆ ಮೊನ್ನೆ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಬ್ಯಾಟ್‌ ಸಣ್ಣ ಮಟ್ಟದ ಮುಷ್ಕರ ಹೂಡಿತ್ತು. ಜತೆಗೆ ಭುಜಕ್ಕೆ ಏಟು ಕೂಡ ಬಿತ್ತು. ಇದರಿಂದ ಧರ್ಮಶಾಲಾ ಟೆಸ್ಟ್‌ ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಯಿತು. ಏನೇ ಇದ್ದರೂ, ಆರ್‌ಸಿಬಿ ಯಶಸ್ಸು ಕೊಹ್ಲಿ ಬ್ಯಾಟಿಂಗನ್ನು ಅವಲಂಬಿಸಿರುವುದು ಸುಳ್ಳಲ್ಲ. ಕಳೆದ ಪಂದ್ಯದಲ್ಲಿ ತಂಡದ ಮತ್ತೂಬ್ಬ ಸ್ಟಾರ್‌ ಆಟಗಾರ ಎಬಿ ಡಿ ವಿಲಿಯರ್ಸ್ ತಂಡವನ್ನು ಕೂಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಏಕಾಂಗಿಯಾಗಿ ಹೋರಾಡಿ 89 ರನ್‌ ಸಿಡಿಸಿದ್ದಾರೆ. ಇದು ಎದುರಾಳಿಗಳ ಪಾಲಿಗೆ ಅಪಾಯದ ಸಂಕೇತ. ಕೇದಾರ್‌ ಜಾಧವ್‌ ಆರ್‌ಸಿಬಿಯ ಮತ್ತೂಬ್ಬ ಪ್ರಮುಖ ಬ್ಯಾಟ್ಸ್‌ಮನ್‌. ಡೆಲ್ಲಿ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದರು.

ವಿರಾಟ್‌ ಕೊಹ್ಲಿ ಕಳೆದ ವರ್ಷದಂತೆ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಆದರೆ ಮತ್ತೂಬ್ಬ ಆರಂಭಕಾರ ಕ್ರಿಸ್‌ ಗೇಲ್‌ ಸಿಡಿಯದಿರುವುದು ಬೆಂಗಳೂರು ಪಾಲಿಗೆ ಚಿಂತೆಯ ಸಂಗತಿ. ಪಂಜಾಬ್‌ ವಿರುದ್ಧ ಗೇಲ್‌ ಆವರನ್ನು ಕೈಬಿಡಲಾಗಿತ್ತು. ವಾಟ್ಸನ್‌-ವಿಷ್ಣು ವಿನೋದ್‌ ಆರಂಭಿಕರಾಗಿ ಘೋರ ವೈಫ‌ಲ್ಯ ಅನುಭವಿಸಿದ್ದರು. ಮುಂಬೈ ವಿರುದ್ಧ ತಂಡದ ಒಟ್ಟು ಸ್ವರೂಪದಲ್ಲಿ ಸಕಾರಾತ್ಮಕ ಬದಲಾವಣೆಯಾಗಲಿದ್ದು, ಇದು ಹೆಚ್ಚು ಪರಿಪೂರ್ಣವಾಗಿರುತ್ತದೆಂಬ ನಂಬಿಕೆ ಇದೆ. ಆರ್‌ಸಿಬಿ ಬೌಲಿಂಗ್‌ ವಿಭಾಗದಲ್ಲಿ ಸೀಮರ್‌ ಸ್ಟಾನ್‌ಲೇಕ್‌, ಸ್ಪಿನ್ನರ್‌ಗಳಾದ ಚಾಹಲ್‌, ನೇಗಿ ಹೆಚ್ಚು ಪರಿಣಾಮಕಾರಿ ಎನಿಸಿದ್ದಾರೆ. ಆದರೆ ಪ್ರಧಾನ ವೇಗಿ ಮಿಲ್ಸ್‌ ಅಪಾಯಕಾರಿಯಾಗಿ ಗೋಚರಿಸುವುದು ಮುಖ್ಯ.

ಅಪಾಯಕಾರಿ ಮುಂಬೈ
ಕಳೆದ ಪಂದ್ಯದಲ್ಲಿ ಹೈದರಾಬಾದ್‌ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್‌, ಒಟ್ಟು 3 ಪಂದ್ಯಗಳಿಂದ 2 ಜಯ ಸಾಧಿಸಿದೆ. ಈ ಎರಡೂ ಗೆಲುವು ಒಲಿದದ್ದು ತವರಿನ ವಾಂಖೇಡೆ ಸ್ಟೇಡಿಯಂನಲ್ಲಿ. ಸೋಲು ಪುಣೆಯಲ್ಲಿ ಎದುರಾಗಿತ್ತು. ನಿತೀಶ್‌ ರಾಣ, ಮಾಲಿಂಗ, ಬುಮ್ರಾ, ಪಾಂಡ್ಯಾಸ್‌, ಭಜ್ಜಿ, ಪೊಲಾರ್ಡ್‌, ಬಟ್ಲರ್‌, ಪಾರ್ಥಿವ್‌, ರೋಹಿತ್‌ ಅವರನ್ನೊಳಗೊಂಡ ಮುಂಬೈ ಸಶಕ್ತ ಹಾಗೂ ಅಪಾಯಕಾರಿ ಎಂಬುದನ್ನು ಆರ್‌ಸಿಬಿ ಎಚ್ಚರಿಕೆಯಿಂದ ಗಮನಿಸಬೇಕು.

ಟಾಪ್ ನ್ಯೂಸ್

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.