ಕೊರಿಯಾ ಓಪನ್ ಬ್ಯಾಡ್ಮಿಂಟನ್: ಮೊದಲ ಸುತ್ತಲ್ಲೇ ಸಿಂಧು ಪತನ
Team Udayavani, Sep 26, 2019, 5:32 AM IST
ಇಂಚೆಯಾನ್ (ಕೊರಿಯಾ): ವಿಶ್ವ ಚಾಂಪಿಯನ್ ಪಿ.ವಿ. ಸಿಂಧು “ಕೊರಿಯಾ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿ ಹೊರಬಿದ್ದಿದ್ದಾರೆ. ಇನ್ನೊಂದೆಡೆ ಭರವಸೆಯ ಆಟಗಾರರಾದ ಸೈನಾ ನೆಹ್ವಾಲ್ ಅನಾರೋಗ್ಯದಿಂದ, ಬಿ. ಸಾಯಿಪ್ರಣೀತ್ ಗಾಯಾಳಾಗಿ ಕೂಟದಿಂದ ನಿರ್ಗಮಿಸುವ ಸಂಕಟಕ್ಕೆ ಸಿಲುಕಿದರು. ಮುನ್ನಡೆದ ಏಕೈಕ ಭಾರತೀಯನೆಂದರೆ ಪಾರುಪಳ್ಳಿ ಕಶ್ಯಪ್.
ಬುಧವಾರದ ಪಂದ್ಯದಲ್ಲಿ ಸಿಂಧು ಅವರನ್ನು ಚೀನೀ ಮೂಲದ ಅಮೆರಿಕನ್ ಆಟಗಾರ್ತಿ ಬೀವೆನ್ ಚಾಂಗ್ 3 ಗೇಮ್ಗಳ ಹೋರಾಟದ ಬಳಿಕ 21-7, 22-24, 21-15 ಅಂತರದಿಂದ ಹಿಮ್ಮೆಟ್ಟಿಸಿದರು. ಇವರಿಬ್ಬರ ಹೋರಾಟ 56 ನಿಮಿಷಗಳ ತನಕ ಸಾಗಿತು.
ವಿಶ್ವ ಚಾಂಪಿಯನ್ ಎನಿಸಿದ ಬಳಿಕ ಸಿಂಧು ಆಟದಲ್ಲೇನೋ ಸಮಸ್ಯೆ ಕಾಡುತ್ತಿರುವುದು ಈ ಕೂಟದಲ್ಲೂ ಸಾಬೀತಾಯಿತು. ಇದಕ್ಕೂ ಹಿಂದಿನ ಚೀನ ಓಪನ್ ಪಂದ್ಯಾವಳಿಯಲ್ಲಿ ಅವರು ದ್ವಿತೀಯ ಸುತ್ತಿನಲ್ಲೇ ಹೊರಬಿದ್ದಿದ್ದರು. ಸ್ವಾರಸ್ಯವೆಂದರೆ, ಕಳೆದ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ ಎತ್ತುವ ವೇಳೆ ಬೀವೆನ್ ಚಾಂಗ್ ಅವರನ್ನು ಸೋಲಿಸಿಯೇ ಸಿಂಧು ಮುನ್ನಡೆದಿದ್ದರು. ಆದರಿಲ್ಲಿ ಚಾಂಗ್ ಸೇಡು ತೀರಿಸಿಕೊಂಡರು.
ಪ್ರಣೀತ್ಗೆ ಪಾದದ ನೋವು
ಡೆನ್ಮಾರ್ಕ್ನ 5ನೇ ಶ್ರೇಯಾಂಕದ ಆ್ಯಂಡ್ರೆಸ್ ಆ್ಯಂಟನ್ಸೆನ್ ವಿರುದ್ಧ ಸೆಣಸಾಡುತ್ತಿದ್ದ ಬಿ. ಸಾಯಿ ಪ್ರಣೀತ್ 9-21, 7-11ರ ಹಿನ್ನಡೆಯಲ್ಲಿರುವಾಗ ಪಾದದ ನೋವಿನಿಂದ ಪಂದ್ಯ ತ್ಯಜಿಸಿದರು.
2ನೇ ಸುತ್ತಿಗೆ ಪಿ. ಕಶ್ಯಪ್
ಪಾರುಪಳ್ಳಿ ಕಶ್ಯಪ್ ಚೈನೀಸ್ ತೈಪೆಯ ಲು ಚಿಯ ಹಂಗ್ ಅವರನ್ನು 42 ನಿಮಿಷಗಳ ಹೋರಾಟದ ಬಳಿಕ 21-16, 21-16 ಅಂಕಗಳಿಂದ ಪರಾಭವಗೊಳಿಸಿದರು.
ಸೈನಾಗೆ ಅನಾರೋಗ್ಯ ಸಮಸ್ಯೆ
ಸೈನಾ ನೆಹ್ವಾಲ್ ದಕ್ಷಿಣ ಕೊರಿಯಾದ ಕಿಮ್ ಗಾ ಇಯುನ್ ವಿರುದ್ಧ 21-19, 18-21 ಸಮಬಲದ ಬಳಿಕ ನಿರ್ಣಾಯಕ 3ನೇ ಗೇಮ್ನಲ್ಲಿ 1-8ರ ಹಿನ್ನಡೆಯಲ್ಲಿದ್ದಾಗ ಅನಾರೋಗ್ಯದ ಸಮಸ್ಯೆಗೆ ಸಿಲುಕಿದರು. ಇದರಿಂದ ಸ್ಪರ್ಧೆಯಿಂದ ಹಿಂದೆ ಸರಿಯುವುದು ಅನಿವಾರ್ಯವಾಯಿತು.
ಸೈನಾ ಗ್ಯಾಸ್ಟ್ರಿಕ್ ಸಮಸ್ಯೆಗೆ ಸಿಲುಕಿದರು ಎಂಬುದಾಗಿ ಅವರ ಪತಿ ಕಶ್ಯಪ್ ತಿಳಿಸಿದರು. “ಇದರಿಂದ ನಿನ್ನೆ ಸೈನಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ನೇರವಾಗಿ ಆಸ್ಪತ್ರೆಯಿಂದ ಸ್ಟೇಡಿಯಂಗೆ ಆಗಮಿಸಿದರು. ಇಲ್ಲಿ ಅವರಿಗೆ ಪಂದ್ಯ ಮುಂದುವರಿಸಲಾಗಲಿಲ್ಲ’ ಎಂದರು. ಕಿಮ್ ಗಾ ಇಯುನ್ ವಿರುದ್ಧ ಸೈನಾ ಆಡುತ್ತಿದ್ದ 3ನೇ ಪಂದ್ಯ ಇದಾಗಿತ್ತು. ಹಿಂದಿನೆರಡೂ ಪಂದ್ಯಗಳಲ್ಲಿ ಸೈನಾ ಜಯ ಸಾಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್