ಕೆಪಿಎಲ್‌: ಶ್ರೇಯಸ್‌ ಗೋಪಾಲ್‌, ಸಮರ್ಥ್ ಮಾರಾಟವಾಗಲಿಲ್ಲವೇಕೆ?


Team Udayavani, Jul 23, 2018, 11:56 AM IST

kpl.jpg

ಬೆಂಗಳೂರು: ಹಿಂದಿನ ಆವೃತ್ತಿ ಕೆಪಿಎಲ್‌ಗ‌ಳಲ್ಲಿ ಸಕ್ರಿಯ ಪಾತ್ರವಹಿಸಿದ್ದ ಶ್ರೇಯಸ್‌ ಗೋಪಾಲ್‌ ಮತ್ತು ಆರ್‌. ಸಮರ್ಥ್ ಈ ಬಾರಿ ಮಾರಾಟವನ್ನೇ ಕಾಣಲಿಲ್ಲವೇಕೆ? ಶನಿವಾರದ ಹರಾಜಿನ ಬಳಿಕ ಈ ಪ್ರಶ್ನೆ ರಾಜ್ಯದ ಕ್ರಿಕೆಟ್‌ ಅಭಿಮಾನಿಗಳನ್ನು ಬಹಳಷ್ಟು ಕಾಡತೊಡಗಿದೆ. ಭಾರತ ಎ ತಂಡದಲ್ಲಿ ರವಿಕುಮಾರ್‌ ಸಮರ್ಥ್ ಸ್ಥಾನ ಪಡೆದಿದ್ದಾರೆ. ಇನ್ನೊಂದು ಕಡೆ ಶ್ರೇಯಸ್‌ ಗೋಪಾಲ್‌ ಭಾರತ ಎ ತಂಡಕ್ಕೆ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದ ಫ್ರಾಂಚೈಸಿಗಳು ಈ ಇಬ್ಬರನ್ನು ಕೊಳ್ಳಲು ಹಿಂದೇಟು ಹಾಕಿದವು ಎಂಬುದು ಸ್ಪಷ್ಟ.

ವಿಶೇಷವೆಂದರೆ, ಹಿಂದಿನ ಆವೃತ್ತಿಗಳಲ್ಲಿ ಗರಿಷ್ಠ ಮೊತ್ತ ಕಂಡಿದ್ದ ಮಾಯಾಂಕ್‌ ಅಗರ್ವಾಲ್‌, ಕೆ. ಗೌತಮ್‌ ಅವರನ್ನು ಈ ಬಾರಿ ಕೇಳುವವರೇ ಇರಲಿಲ್ಲ. ನಿಗದಿತ ಹರಾಜಿನ ವೇಳೆಯಲ್ಲಿ ಎರಡೆರಡು ಬಾರಿ ಹೆಸರು ಕರೆದರೂ ಈ ಇಬ್ಬರನ್ನು ಕೊಳ್ಳಲು ಹಿಂದೇಟು ಹಾಕಲಾಯಿತು. ಎರಡನೆ ಬಾರಿ ಕರೆದಾಗ ಹುಬ್ಬಳ್ಳಿ ಟೈಗರ್ಸ್‌ 25,000 ರೂ. ನೀಡಿ ಮಾಯಾಂಕ್‌ ಅವರನ್ನು ಖರೀದಿಸಿತು. 
ಗೌತಮ್‌ ಅವರನ್ನು ಹರಾಜು ಮುಗಿದ ಅನಂತರ 25,000 ರೂ. ನೀಡಿ ಮೈಸೂರು ವಾರಿಯರ್ಸ್‌ ಖರೀದಿಸಿತು. ಇದಕ್ಕೂ ಕಾರಣ, ಈ ಇಬ್ಬರು ಆಟಗಾರರು ಭಾರತ ಎ ತಂಡ ಅಥವಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿರುವುದು. ಒಂದು ವೇಳೆ ಈ ಇಬ್ಬರೂ ಆಯ್ಕೆಯಾದರೂ ತಮ್ಮ ಹಣ ನಷ್ಟವಾಗುವುದಿಲ್ಲ ಎಂಬ ಭರವಸೆಯೊಂದಿಗೆ ಕನಿಷ್ಠ ಬೆಲೆಗೆ ಫ್ರಾಂಚೈಸಿಗಳು ಖರೀದಿಸಿದವು.ಫ್ರಾಂಚೈಸಿಗಳು, ಕೆಪಿಎಲ್‌ನಲ್ಲಿ ಪೂರ್ಣಾವಧಿಯಲ್ಲಿ ಆಡುವ ಆಟಗಾರರಿಗೆ ಹೆಚ್ಚಿ ಆದ್ಯತೆ ನೀಡಿದ್ದು ಈ ಬಾರಿಯ ಹರಾಜಿನ ವಿಶೇಷ. ದೊಡ್ಡ ಮೊತ್ತಕ್ಕೆ ಖರೀದಿಸಿ, ಅವರು ಅರ್ಧದಲ್ಲೇ ಬಿಟ್ಟುಹೋಗುವುದರಿಂದ ನಷ್ಟ ಖಚಿತ ಎಂಬ ಲೆಕ್ಕಾಚಾರ ಇಲ್ಲಿ ಕೆಲಸ ಮಾಡಿತ್ತು!

ಬಿ ವಿಭಾಗದಲ್ಲಿ ದಾಖಲೆ 
ಅನುಭವ, ಸಾಮರ್ಥ್ಯ ಎಲ್ಲವನ್ನೂ ಆಧಾರವಾಗಿಟ್ಟುಕೊಂಡು ಎರಡು ಗುಂಪುಗಳಲ್ಲಿ ಆಟಗಾರರನ್ನು ವಿಂಗಡಿಸಿ ಹರಾಜು ನಡೆಸಲಾಗಿತ್ತು. ಅನುಭವ, ದಾಖಲೆ, ಫಾರ್ಮ್ನಲ್ಲಿ ಸ್ವಲ್ಪ ಹಿಂದಿದ್ದವರು ಪೂಲ್‌ ಬಿಯಲ್ಲಿ ಸ್ಥಾನ ಪಡೆದಿದ್ದರು. ಇಲ್ಲಿ 20 ಸಾವಿರ ರೂ. ಮೂಲ ಬೆಲೆ ಇರುತ್ತದೆ. ಈ ಗುಂಪಿನಲ್ಲಿ ಸ್ಥಾನ ಪಡೆದರೂ ಮೋಹನ್‌ರಾಮ್‌ ನಿದೀಶ್‌ ಮತ್ತು ಆರ್‌. ಜೊನಾಥನ್‌ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದ್ದಾರೆ. ನಿದೀಶ್‌ 5.85 ಲಕ್ಷ ರೂ. ಪಡೆದರೆ, ಜೊನಾಥನ್‌ 5.45 ಲಕ್ಷ ರೂ.ಗೆ ಬಿಕರಿಯಾದರೂ ಬಿ ವಿಭಾಗದ ಆಟಗಾರರ ಪೈಕಿ ಇದು ದಾಖಲೆಯಾಗಿದೆ. ಶನಿವಾರದ ಹರಾಜಿನಲ್ಲಿ ಅಭಿಮನ್ಯು ಮಿಥುನ್‌ ಕೆಪಿಎಲ್‌ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ (8.30 ಲಕ್ಷ ರೂ.) ಮಾರಾಟವಾಗಿ ದಾಖಲೆ ನಿರ್ಮಿಸಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.