ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌: ಕಿರ್ಗಿಯೋಸ್‌ ಏಟಿಗೆ ಮೆಡ್ವೆಡೇವ್‌ ಔಟ್‌


Team Udayavani, Sep 5, 2022, 11:13 PM IST

ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌: ಕಿರ್ಗಿಯೋಸ್‌ ಏಟಿಗೆ ಮೆಡ್ವೆಡೇವ್‌ ಔಟ್‌

ನ್ಯೂಯಾರ್ಕ್‌: ಹಾಲಿ ಯುಎಸ್‌ ಓಪನ್‌ ಚಾಂಪಿಯನ್‌ ಹಾಗೂ ವಿಶ್ವದ ನಂ. 1 ಆಟಗಾರ ಡ್ಯಾನಿಲ್‌ ಮೆಡ್ವೆಡೇವ್‌ ಈಗ “ಮಾಜಿ’ ಆಗಿದ್ದಾರೆ. ಆಸ್ಟ್ರೇಲಿ ಯದ ನಿಕ್‌ ಕಿರ್ಗಿಯೋಸ್‌ ಈ ರಷ್ಯನ್‌ ಆಟಗಾರನನ್ನು ಬಲೆಗೆ ಬೀಳಿಸು ವುದರೊಂದಿಗೆ 2022ರ ಅಮೋಘ ಓಟವನ್ನು ಮುಂದುವರಿಸಿದರು.

ವಿಂಬಲ್ಡನ್‌ ಫೈನಲಿಸ್ಟ್‌ ಆಗಿರುವ ನಿಕ್‌ ಕಿರ್ಗಿಯೋಸ್‌, ಕಳೆದ ರಾತ್ರಿ ನಡೆದ ಪ್ರಿ-ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಡ್ಯಾನಿಲ್‌ ಮೆಡ್ವೆಡೇವ್‌ ಅವರನ್ನು 7-6 (13-11), 3-6, 6-3, 6-2 ಅಂತರದಿಂದ ಮಣಿಸಿದರು. ಇದು ಮೆಡ್ವೆಡೇವ್‌ ವಿರುದ್ಧ ಆಡಿದ 5 ಪಂದ್ಯಗಳಲ್ಲಿ ಆಸೀಸ್‌ ಆಟಗಾರನಿಗೆ ಒಲಿದ ಎರಡನೇ ಗೆಲುವು. ಈ ಸೋಲಿನಿಂದ ಮೆಡ್ವೆಡೇವ್‌ ಅವರ ನಂ.1 ಪಟ್ಟ ಬಹುತೇಕ ಜಾರಲಿದೆ.

ಕಿರ್ಗಿಯೋಸ್‌ ಯುಎಸ್‌ ಓಪನ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದು ಇದೇ ಮೊದಲು. ಇಲ್ಲಿ ಅವರ ಎದುರಾಳಿ ರಷ್ಯದ ಮತ್ತೋರ್ವ ಆಟಗಾರ ಕರೆನ್‌ ಕಶನೋವ್‌. ಅವರು ಸ್ಪೇನ್‌ನ ಪಾಬ್ಲೊ ಕರೆನೊ ಬುಸ್ಟ ವಿರುದ್ಧ 5 ಸೆಟ್‌ಗಳ ಹೋರಾಟ ನಡೆಸಿ 4-6, 6-3, 6-1, 4-6, 6-3 ಅಂತರದ ಗೆಲುವು ಸಾಧಿಸಿದರು.

ರೂಡ್‌ ವರ್ಸಸ್‌ ಬರೆಟಿನಿ
ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಕ್ಯಾಸ್ಪರ್‌ ರೂಡ್‌ ಮತ್ತು ಮ್ಯಾಟಿಯೊ ಬರೆಟಿನಿ ಮುಖಾಮುಖೀ ಆಗಲಿದ್ದಾರೆ. ನಾರ್ವೆಯ ಕ್ಯಾಸ್ಪರ್‌ ರೂಡ್‌ ಫ್ರಾನ್ಸ್‌ನ ಕೊರೆಂಟಿನ್‌ ಮೌಟೆಟ್‌ ವಿರುದ್ಧ 6-1, 6-2, 6-7 (4-7), 6-2 ಅಂತರದ ಗೆಲುವು ಸಾಧಿಸಿದರು. ರೂಡ್‌ ಅವರಿಗೆ ಇದು ಮೊದಲ ಯುಎಸ್‌ ಓಪನ್‌ ಕ್ವಾರ್ಟರ್‌ ಫೈನಲ್‌. ಇನ್ಮೊಂದೆಡೆ ಮೌಟೆಟ್‌ “ಲಕ್ಕಿ ಲಾಸರ್‌’ ಆಗಿ ಪ್ರಧಾನ ಸುತ್ತಿಗೆ ಏರಿದ್ದರು.

ವನಿತಾ ವಿಭಾಗದಲ್ಲೂ ಆಸೀಸ್‌ ಸಂಭ್ರಮ
ನಿಕ್‌ ಕಿರ್ಗಿಯೋಸ್‌ ಪುರುಷರ ವಿಭಾಗದಲ್ಲಿ ಆಸ್ಟ್ರೇಲಿಯದ ಸಂಭ್ರಮ ಹೆಚ್ಚಿಸಿದರೆ, ಅಜ್ಲಾ ಟೊಮ್ಜಾನೋವಿಕ್‌ ವನಿತಾ ವಿಭಾಗದಲ್ಲಿ ಕಾಂಗರೂ ಟೆನಿಸ್‌ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದರು. ಸರೆನಾ ವಿಲಿಯಮ್ಸನ್‌ ಅವರನ್ನು ಸೋಲಿಸಿ ಸುದ್ದಿಯಾಗಿದ್ದ ಅಜ್ಲಾ ಟೊಮ್ಜಾನೋವಿಕ್‌, ಈ ಗೆಲುವು ಆಕಸ್ಮಿಕವಲ್ಲ ಎಂಬುದನ್ನು ನಿರೂಪಿಸಿದರು. ರಷ್ಯದ ಲಿಯುದ್ಮಿಲಾ ಸಮೊÕನೋವಾ ಅವರನ್ನು 7-6 (10-8), 6-1ರಿಂದ ಹಿಮ್ಮೆಟ್ಟಿಸಿ ಮೊದಲ ಸಲ ಯುಎಸ್‌ ಓಪನ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಇದರೊಂದಿಗೆ ಸಮೊÕನೋವಾ ಅವರ ಸತತ 13 ಗೆಲುವಿನ ಓಟ ಕೊನೆಗೊಂಡಿತು. ಯುಎಸ್‌ ಓಪನ್‌ಗೂ ಮುನ್ನ ನಡೆದ ಕ್ಲೇವ್‌ಲ್ಯಾಂಡ್‌ ಮತ್ತು ವಾಷಿಂಗ್ಟನ್‌ ಡಿಸಿ ಟೂರ್ನಿಗಳಲ್ಲಿ ಅವರು ಪ್ರಶಸ್ತಿ ಎತ್ತಿದ್ದರು.

ಅಜ್ಲಾ ಟೊಮ್ಜಾನೋವಿಕ್‌ ಅವರಿನ್ನು ಟ್ಯುನಿಶಿಯಾದ ಓನ್ಸ್‌ ಜೆಬ್ಯೂರ್‌ ವಿರುದ್ಧ ಆಡುವರು. ಅವರು ರಷ್ಯದ ವೆರೋನಿಕಾ ಕುಡೆರ್ಮಟೋವಾಗೆ 7-6 (7-1), 6-4ರಿಂದ ಆಘಾತವಿಕ್ಕಿದರು.

ಕೊಕೊ ಗಾಫ್ ಭರವಸೆ
18 ವರ್ಷದ ಯುವ ಆಟಗಾರ್ತಿ ಕೊಕೊ ಗಾಫ್ ಆತಿಥೇಯ ನಾಡಿನ ಭರವಸೆಯಾಗಿ ಉಳಿದಿದ್ದಾರೆ. ಅವರು ಭಾರೀ ಹೋರಾಟದ ಬಳಿಕ ಚೀನದ 33 ವರ್ಷದ ಅನುಭವಿ ಜಾಂಗ್‌ ಶುಯಿ ವಿರುದ್ಧ 7-5, 7-5 ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.

ಫ್ರಾನ್ಸ್‌ನ ಕ್ಯಾರೋಲಿನ್‌ ಗಾರ್ಸಿಯಾ ವಿರುದ್ಧ ಕೊಕೊ ಗಾಫ್ ಕ್ವಾರ್ಟರ್‌ ಫೈನಲ್‌ನಲ್ಲಿ ಕಾದಾಡಬೇಕಿದೆ. ಗಾರ್ಸಿಯಾ ಅಮೆರಿಕದ ಅಲಿಸನ್‌ ರಿಸ್ಕೆ ಅವರನ್ನು 6-4, 6-1 ನೇರ ಸೆಟ್‌ಗಳಲ್ಲಿ ಕೆಡವಿದರು.

ಟಾಪ್ ನ್ಯೂಸ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

1-ewqew

KKR ಸೋಲಿನ ಮೇಲೆ ಬರೆ : ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ರೂ. ದಂಡ

Hockey

Hockey; ಕುಂಡ್ಯೋಳಂಡ ಟೂರ್ನಿ: ಕಣ್ಣಂಡ ತಂಡಕ್ಕೆ ಜಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.