ಲಡಾಖ್ ಕ್ರಿಕೆಟಿಗರ “ವಿಧಿ ಬರಹ’ವೂ ಬದಲಾಗಲಿದೆ
Team Udayavani, Aug 7, 2019, 6:28 AM IST
ಮುಂಬಯಿ: ಕೇಂದ್ರ ಸರಕಾರ ಜಮ್ಮು- ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿ ಕಾಶ್ಮೀರ ಮತ್ತು ಲಡಾಖ್ನ್ನು ಪ್ರತ್ಯೇಕಿಸಿರುವುದರಿಂದ ಲಡಾಖ್ನ ಉದಯೋನ್ಮುಖ ಕ್ರಿಕೆಟಿಗರ “ವಿಧಿ ಬರಹ’ವೂ ಬದಲಾಗಲಿದೆ.
ಇನ್ನು ಮುಂದೆ ಹೊಸದಾಗಿ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ನ ಕ್ರಿಕೆಟಿಗರು ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ ಅನ್ನು ಪ್ರತಿನಿಧಿಸಬಹುದು ಎಂದು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಹೇಳಿದ್ದಾರೆ.
ಸದ್ಯಕ್ಕೆ ಲಡಾಖ್ಗೆ ಪ್ರತ್ಯೇಕ ಕ್ರಿಕೆಟ್ ಮಂಡಳಿ ರಚಿಸುವ ಉದ್ದೇಶವಿಲ್ಲ. ಬಿಸಿಸಿಯ ಎಲ್ಲ ದೇಶೀಯ ಪಂದ್ಯಗಳಲ್ಲಿ ಲಡಾಖ್ನ ಕ್ರಿಕೆಟಿಗರು ಜಮ್ಮು-ಕಾಶ್ಮೀರ ತಂಡದಲ್ಲಿ ಆಡಬಹುದು ಎಂದಿದ್ದಾರೆ.
ಇಷ್ಟರ ತನಕ ಜಮ್ಮು-ಕಾಶ್ಮೀರದ ರಣಜಿ ತಂಡದಲ್ಲಿ ಲಡಾಖ್ನ ಆಟಗಾರರಿಗೆ ಅವಕಾಶ ಸಿಕ್ಕಿಲ್ಲ. ಈ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದೆ. ರಣಜಿ ಪಂದ್ಯಗಳು ವರ್ಷಾಂತ್ಯದಲ್ಲಿ ಆರಂಭವಾಗಲಿವೆ.
ಪುದುಚೇರಿ ಮಾದರಿಯಲ್ಲಿ ಲಡಾಖ್ಗೂ ಬಿಸಿಸಿಐಯಲ್ಲಿ ಮತದಾನ ಹಕ್ಕು ಸಿಗುವುದೇ ಎಂದು ಕೇಳಿದಾಗ ರಾಯ್ ನಾವು ಇನ್ನೂ ಈ ಕುರಿತು ಚಿಂತಿಸಿಲ್ಲ ಎಂದು ಉತ್ತರಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕೈಗೊಂಡಿರುವ ನಿರ್ಧಾರದಿಂದ ಕ್ರಿಕೆಟ್ನ ಮೇಲೇನೂ ಪರಿಣಾಮವಾಗುವುದಿಲ್ಲ. ಕಣಿವೆಯಲ್ಲಿ ಕ್ರಿಕೆಟ್ ಎಂದಿನಂತೆ ಇರಲಿದೆ, ಆ ಬಗ್ಗೆ ಚಿಂತೆ ಬೇಡ ಎಂದಿದ್ದಾರೆ.
ಜಮ್ಮು-ಕಾಶ್ಮೀರ ತಂಡ ಮುಂದಿನ ದಿನಗಳಲ್ಲಿ ತವರಿನ ಪಂದ್ಯಗಳನ್ನು ಶ್ರೀನಗರದಲ್ಲಿ ಆಡುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು