ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌: ಲಕ್ಷ್ಯ ಸೇನ್‌, ಪ್ರಣಯ್‌ ಪ್ರಿ-ಕ್ವಾರ್ಟರ್‌ಗೆ

ಶ್ರೀಕಾಂತ್‌ಗೆ ಸೋಲು

Team Udayavani, Aug 24, 2022, 11:58 PM IST

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌: ಲಕ್ಷ್ಯ ಸೇನ್‌, ಪ್ರಣಯ್‌ ಪ್ರಿ-ಕ್ವಾರ್ಟರ್‌ಗೆ

ಟೋಕಿಯೊ: ದ್ವಿತೀಯ ಶ್ರೇಯಾಂಕದ ಕೆಂಟೊ ಮೊಮೊಟ ಅವರನ್ನು ಅಮೋಘ ಆಟದ ಮೂಲಕ ಸೋಲಿಸಿ ಆಘಾತಗೊಳಿಸಿದ ಭಾರತದ ಎಚ್‌.ಎಸ್‌. ಪ್ರಣಯ್‌ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಪ್ರಿ-
ಕ್ವಾರ್ಟರ್‌ಫೈನಲಿಗೇರಿದ್ದಾರೆ.

ಈ ಮೊದಲು ಹಾಲಿ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಲಕ್ಷ್ಯ ಸೇನ್‌ ಸುಲಭ ಗೆಲುವಿನೊಂದಿಗೆ ಪ್ರಿ-ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದರೆ ಕಿದಂಬಿ ಶ್ರೀಕಾಂತ್‌ ಆಘಾತಕಾರಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ. ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣಯ್‌ಮತ್ತು ಸೇನ್‌ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

ನಿರೀಕ್ಷೆಗೂ ಮೀರಿದ ಆಟದ ಪ್ರದರ್ಶನ ನೀಡಿದ ಶ್ರೇಯಾಂಕರಹಿತ ಆಟಗಾರ ಪ್ರಣಯ್‌ ಪ್ರೇಕ್ಷಕರ ಫೇವರಿಟ್‌ ಮತ್ತು ಎರಡು ಬಾರಿಯ ಮಾಜಿ ಚಾಂಪಿಯನ್‌ ಮೊಮೊಟ ಅವರನ್ನು 21-17, 21-16 ಗೇಮ್‌ಗಳಿಂದ ಸೋಲಿಸಿ ಅಚ್ಚರಿಗೊಳಿಸಿದರು. ಆಶ್ಚರ್ಯವೆಂಬಂತೆ ಇದು ಮೊಮೊಟ ವಿರುದ್ಧ ಆಡಲಾದ ಎಂಟು ಪಂದ್ಯಗಳಲ್ಲಿ ಪ್ರಣಯ್‌ ಅವರ ಮೊದಲ ಗೆಲುವು ಆಗಿದೆ. ಈ ಹಿಂದಿನ ಪಂದ್ಯಗಳಲ್ಲಿ ಪ್ರಣಯ್‌ ಅವರ ವಿರುದ್ಧ ಕೇವಲ ಒಂದು ಗೇಮ್‌ ಜಯಿಸಿದ್ದರು.

ಶ್ರೀಕಾಂತ್‌ಗೆ ಸೋಲು
ಇಲ್ಲಿ ಕಳೆದ ಬಾರಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದ ಶ್ರೀಕಾಂತ್‌ ಕೇವಲ 34 ನಿಮಿಷಗಳ ಕಾದಾಟದಲ್ಲಿ ಚೀನದ ಎದುರಾಳಿ ವಿಶ್ವದ 32ನೇ ರ್‍ಯಾಂಕಿನ ಝಾವೊ ಜುನ್‌ ಪೆಂಗ್‌ ಅವರಿಗೆ 18-21, 17-21 ಗೇಮ್‌ಗಳಿಂದ ಶರಣಾದರು. 29ರ ಹರೆಯ ಶ್ರೀಕಾಂತ್‌ ಆರಂಭದಿಂದಲೇ ಹಿನ್ನಡೆ ಅನುಭವಿಸಿದ್ದರು. ಎದುರಾಳಿಯ ಹೊಡೆತಕ್ಕೆ ಉತ್ತರಿಸಲು ಒದ್ದಾಡಿದರು. ಇದರಿಂದಾಗಿ ಮೊದಲ ಗೇಮ್‌ ಅನ್ನು ಅವರು 12 ನಿಮಿಷಗಳಲ್ಲಿ ಕಳೆದುಕೊಂಡರು. ದ್ವಿತೀಯ ಗೇಮ್‌ನಲ್ಲಿ ತೀವ್ರ ಹೋರಾಟ ನಡೆಸಿದ್ದ ಶ್ರೀಕಾಂತ್‌ ಒಂದು ಹಂತದಲ್ಲಿ 16-14ರಿಂದ ಮುನ್ನಡೆ ಸಾಧಿಸಿದ್ದರು.

ಸೇನ್‌ ಮುನ್ನಡೆ
ಹಾಲಿ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಲಕ್ಷ್ಯ ಸೇನ್‌ ಸ್ಪೇನ್‌ನ ಲೂಯಿಸ್‌ ಪೆನಲ್ವೆರ್‌ ಅವರನ್ನು ನೇರ ಗೇಮ್‌ಗಳಿಂದ ಉರುಳಿಸಿ ಪ್ರಿ-ಕ್ವಾರ್ಟರ್‌ಫೈನಲಿಗೇರಿದರು. ದ್ವಿತೀಯ ಸುತ್ತಿನ ಈ ಹೋರಾಟದಲ್ಲಿ ಅವರು 21-17, 21-10 ಗೇಮ್‌ಗಳಿಂದ 72 ನಿಮಿಷದಲ್ಲಿ ಜಯ ಸಾಧಿಸಿದರು. ಒಂದು ಹಂತದಲ್ಲಿ 3-4 ಹಿನ್ನಡೆ ಅನುಭವಿಸಿದ್ದ 9ನೇ ಶ್ರೇಯಾಂಕದ ಸೇನ್‌ ಆಬಳಿಕ ನಿರಂತರ ಆರಂಕ ಪಡೆದು ಮುನ್ನಡೆಯನ್ನು 13-7ಕ್ಕೇರಿಸಿದರು. ಆಬಳಿಕ ಹಿಂದೆ ನೋಡದ ಸೇನ್‌ ಸುಲಭವಾಗಿ ಮೊದಲ ಗೇಮ್‌ ಗೆದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಸೇನ್‌ ದ್ವಿತೀಯ ಗೇಮ್‌ನಲ್ಲೂ ತನ್ನ ಹಿಡಿತವನ್ನು ಬಿಗಿಗೊಳಿಸಿ ಇನ್ನಷ್ಟು ದೊಡ್ಡ ಅಂತರದಿಂದ ಗೆದ್ದು ಬಂದರು. ಒಂದು ಹಂತದಲ್ಲಿ ಅವರು 9 ಅಂಕಗಳ ಮುನ್ನಡೆ ಸಾಧಿಸಿದ್ದರು.

ಅರ್ಜುನ್‌-ಕಪಿಲ ಪ್ರಿ-ಕ್ವಾರ್ಟರ್‌ಗೆ
ಭಾರತದ ಡಬಲ್ಸ್‌ ಆಟಗಾರರಾದ ಎಂ.ಆರ್‌. ಅರ್ಜುನ್‌ ಮತ್ತು ದ್ರುವ್‌ ಕಪಿಲ ಅವರು ಪ್ರಿ-ಕ್ವಾರ್ಟರ್‌ ಫೈನಲಿಗೇರಿದರೆ ಅಶ್ವಿ‌ನಿ ಪೊನ್ನಪ್ಪ ಮತ್ತು ಎನ್‌. ಸಿಕ್ಕಿ ರೆಡ್ಡಿ ದ್ವಿತೀಯ ಸುತ್ತಿನಲ್ಲಿ ಸೋತು ಹೊರಬಿದ್ದರು. ಅರ್ಜುನ್‌ ಮತ್ತು ಕಪಿಲ ಅವರು ಕಳೆದ ವರ್ಷ ಇಲ್ಲಿ ಕಂಚು ಜಯಿಸಿದ್ದ ಡೆನ್ಮಾರ್ಕ್‌ನ ಕಿಮ್‌ ಆಸ್ಟ್ರೆಪ್‌ ಮತ್ತು ಆ್ಯಂಡರ್ ಸ್ಕಾರುಪ್‌ ರಸು¾ಸ್ಸೆನ್‌ ಅವರನ್ನು 21-17, 21-16 ಗೇಮ್‌ಗಳಿಂದ ಉರುಳಿಸಿದ್ದರು. ಮುಂದಿನ ಸುತ್ತಿನಲ್ಲಿ ಅವರು ಸಿಂಗಾಪುರದ ಹೀ ಯಾಂಗ್‌ ಕಯಿ ಟೆರ್ರಿ ಮತ್ತು ಲೋಹ್‌ ಕೀನ್‌ ಹೀನ್‌ ಅವರನ್ನು ಎದುರಿಸಲಿದ್ದಾರೆ.

ಎಂಟನೇ ಶ್ರೇಯಾಂಕದ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಅವರು ಗಾಟೆಮಾಲದ ಸೊಲಿಸ್‌ ಜೊನಾಥನ್‌ ಮತ್ತು ಅನಿಬಲ್‌ ಮಾರೊಕ್ವಿನ್‌ ಅವರನ್ನು 21-8, 21-10 ಗೇಮ್‌ಗಳಿಂದ ಸೋಲಿಸಿ ಅಂತಿಮ 16ರ ಸುತ್ತಿಗೇರಿದ್ದಾರೆ.

ಇನ್ನೊಂದೆಡೆ ಪೊನ್ನಪ್ಪ ಮತ್ತು ಸಿಕ್ಕಿ ಅವರು ಅಗ್ರ ಶ್ರೇಯಾಂಕದ ಚೀನದ ಚೆನ್‌ ಕಿನ್‌ ಚೆನ್‌ ಮತ್ತು ಜಿಯಾ ಯಿ ಫ‌ನ್‌ ಕೈಯಲ್ಲಿ ಕೇವಲ 42 ನಿಮಿಷಗಳಲ್ಲಿ 15-21, 10-21 ಗೇಮ್‌ಗಳಿಂದ ಸೋತರು.

ವನಿತಾ ಡಬಲ್ಸ್‌ನ ಇನ್ನೊಂದು ಜೋಡಿ ಪೂಜಾ ದಂಡು ಮತ್ತು ಸಂಜನಾ ಸಂತೋಷ್‌ ಅವರು ಮೂರನೇ ಶ್ರೇಯಾಂಕದ ಕೊರಿಯದ ಲೀ ಸೊ ಹೀ ಮತ್ತು ಶಿನ್‌ ಸಿಯುಂಗ್‌ ಚಾನ್‌ ಕೈಯಲ್ಲಿ 15-21, 7-21 ಗೇಮ್‌ಗಳಿಂದ ಸೋತು ಹೊರ ಬಿದ್ದಿದ್ದಾರೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.