ಸಂಕಷ್ಟದ ಸಮಯದಲ್ಲಿ ಬಿಸಿಸಿಐ ಮಾನ ಕಾಪಾಡಿದ್ದ ಲತಾ ಮಂಗೇಶ್ಕರ್!
Team Udayavani, Feb 7, 2022, 9:52 AM IST
ನವದೆಹಲಿ: ಇವತ್ತು ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐಗೆ ಒಂದುಕಾಲದಲ್ಲಿ ತನ್ನ ಆಟಗಾರರಿಗೆ ಉದಾರವಾಗಿ ನೆರವು ನೀಡಲೂ ಹಣವಿರಲಿಲ್ಲ!
1983ರಲ್ಲಿ ಭಾರತ ತಂಡ ಕಪಿಲ್ ದೇವ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿತ್ತು. ಆಗ ತನ್ನ ಆಟಗಾರರನ್ನು ಸನ್ಮಾನಿಸುವುದು ಹೇಗೆ ಅನ್ನುವ ಚಿಂತೆಯಲ್ಲಿ ಬಿಸಿಸಿಐ ಮುಳುಗಿತ್ತು. ಅಂತಹ ಹೊತ್ತಿನಲ್ಲಿ ನೆರವಿಗೆ ಬಂದಿದ್ದು ಪಕ್ಕಾ ಕ್ರಿಕೆಟ್ ಅಭಿಮಾನಿ, ಭಾರತ ರತ್ನ ಲತಾ ಮಂಗೇಶ್ಕರ್.
ತನ್ನ ತಂಡ ಯಾರೂ ಊಹಿಸದ ರೀತಿಯಲ್ಲಿ ವಿಶ್ವಕಪ್ ಗೆದ್ದರೂ, ನಗದು ಬಹುಮಾನ ನೀಡಲು ಹಣವೇ ಇಲ್ಲ. ಅಂತಹ ಬಿಕ್ಕಟ್ಟಿನಲ್ಲಿ ಅಂದಿನ ಕೇಂದ್ರ ಮಂತ್ರಿ ಎನ್ಕೆಪಿ ಸಾಳ್ವೆ ಅಧ್ಯಕ್ಷತೆಯ ಬಿಸಿಸಿಐ ಇತ್ತು. ಆಗ ದಿನಕ್ಕೆ ಕೇವಲ 250 ರೂ.ಗಳನ್ನು ಆಟಗಾರರಿಗೆ ದಿನಭತ್ಯೆಯಾಗಿ ನೀಡಲಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ನೀಡಿದ್ದು ಬಿಸಿಸಿಐನ ಇನ್ನೊಬ್ಬ ಮಾಜಿ ಅಧ್ಯಕ್ಷ ರಾಜ್ಸಿಂಗ್ ಡುಂಗಾರ್ಪುರ್.
ಇದನ್ನೂ ಓದಿ:ಅವಿವಾಹಿತೆಯಾಗಿ ಉಳಿದಿದ್ದೇಕೆ? ಲತಾ- ರಾಜ್ಸಿಂಗ್ ದುಂಗಾರ್ಪುರ್ “ಪ್ರೇಮ್’ ಕಹಾನಿ
ಲತಾ ಅವರ ಸ್ನೇಹಿತೆಯಾಗಿದ್ದರಿಂದ ತಕ್ಷಣ ಆಟಗಾರರಿಗಾಗಿ ಹಾಡಲು ಒಪ್ಪಿಕೊಂಡರು. ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಮೈದಾನ ಕಿಕ್ಕಿರಿದು ತುಂಬಿತ್ತು. ಅದರಿಂದ ಸಂಗ್ರಹವಾದ ಹಣದಿಂದ ವಿಶ್ವಕಪ್ ವಿಜೇತ 14 ಆಟಗಾರರಿಗೆ ತಲಾ 1 ಲಕ್ಷ ರೂ. ಕೊಡಲು ಬಿಸಿಸಿಐಗೆ ಸಾಧ್ಯವಾಯಿತು. ಆ ಕಾಲದಲ್ಲಿ ಒಂದು ಲಕ್ಷ ರೂ. ಅಂದರೆ ದೊಡ್ಡ ಮೊತ್ತವೆನ್ನುವುದನ್ನು ಮರೆಯಬಾರದು. ಮಂಗೇಶ್ಕರ್ ಅಂದು ಬಿಸಿಸಿಐಯನ್ನು ಅವಮಾನದಿಂದ ಪಾರು ಮಾಡಿದ್ದರು. ಅದರ ಸವಿನೆನಪಿಗಾಗಿ ಬಿಸಿಸಿಐ ಅವರ ಮರಣದವರೆಗೂ ಭಾರತದಲ್ಲಿ ಎಲ್ಲೇ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿ; ಮಂಗೇಶ್ಕರ್ ಹೆಸರಿನಲ್ಲಿ ಎರಡು ವಿಐಪಿ ಟಿಕೆಟ್ಗಳನ್ನು ಮೀಸಲಾಗಿಟ್ಟಿತ್ತು.
ಕಪ್ಪುಪಟ್ಟಿ ಧರಿಸಿದ ಭಾರತೀಯ ಕ್ರಿಕೆಟಿಗರು: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರು ತೋಳಿಗೆ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದಿದ್ದರು. ಗಾನ ಕೋಗಿಲೆ, ಲಂತಾ ಮಂಗೇಶ್ಕರ್ ನಿಧನದ ಹಿನ್ನೆಲೆಯಲ್ಲಿ ತಂಡದ ಆಟಗಾರರು ಶೋಕ ತೋರಿಸಿದ ರೀತಿ ಹೀಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ