ನ್ಯೂಜಿಲ್ಯಾಂಡಿಗೆ ಅಲ್ಪ ಮುನ್ನಡೆ


Team Udayavani, Mar 11, 2017, 9:53 AM IST

11-SPORTS-7.jpg

ಡ್ಯುನೆಡಿನ್‌: ಡ್ಯುನೆಡಿನ್‌ ಟೆಸ್ಟ್‌ ಪಂದ್ಯದ 3ನೇ ದಿನ ಕೇನ್‌ ವಿಲಿಯಮ್ಸನ್‌ ಅವರ ಶತಕ ಹಾಗೂ ಕೇಶವ್‌ ಮಹಾರಾಜ್‌ ಅವರ 5 ವಿಕೆಟ್‌ ಸಾಧನೆಯಿಂದ ನ್ಯೂಜಿಲ್ಯಾಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸಮಾನ ಗೌರವ ಪಡೆದಿವೆ.

ದಕ್ಷಿಣ ಆಫ್ರಿಕಾದ 308 ರನ್ನಿಗೆ ಉತ್ತರವಾಗಿ 3ಕ್ಕೆ 177 ರನ್‌ ಮಾಡಿದ್ದ ನ್ಯೂಜಿಲ್ಯಾಂಡ್‌, ಶುಕ್ರವಾರದ ಆಟದಲ್ಲಿ 341 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಲಭಿಸಿದ್ದು 33 ರನ್ನುಗಳ ಅಲ್ಪ ಮುನ್ನಡೆ. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ಒಂದು ವಿಕೆಟಿಗೆ 38 ರನ್‌ ಮಾಡಿ ದಿನದಾಟ ಮುಗಿಸಿದೆ. ಸದ್ಯದ ಮುನ್ನಡೆ 5 ರನ್‌ ಮಾತ್ರ. ಹೀಗಾಗಿ 4ನೇ ದಿನದಾಟ ಎರಡೂ ತಂಡಗಳ ಪಾಲಿಗೆ ನಿರ್ಣಾಯಕ.

ತೃತೀಯ ದಿನದಾಟದಲ್ಲಿ ಮಿಂಚಿದವರು ನ್ಯೂಜಿಲ್ಯಾಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ದಕ್ಷಿಣ ಆಫ್ರಿಕಾದ ಆಫ್ಸ್ಪಿನ್ನರ್‌ ಕೇಶವ್‌ ಮಹಾರಾಜ್‌. 78 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ವಿಲಿಯಮ್ಸನ್‌ 130ರ ತನಕ ಸಾಗಿ ತಂಡಕ್ಕೆ ಮುನ್ನಡೆ ಕೊಡಿಸುವಲ್ಲಿ ನೆರವಾದರು. ಮಹಾರಾಜ್‌ 94 ರನ್ನಿಗೆ 5 ವಿಕೆಟ್‌ ಉರುಳಿಸಿ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶಿಸಿದರು.

59ನೇ ಟೆಸ್ಟ್‌ ಆಡುತ್ತಿರುವ ವಿಲಿಯಮ್ಸನ್‌ ಬಾರಿಸಿದ 16ನೇ ಶತಕ ಇದಾಗಿದೆ. 380 ನಿಮಿಷಗಳ ದಿಟ್ಟ ನಿಲುವು ಪ್ರದರ್ಶಿಸಿದ ಕಿವೀಸ್‌ ಕಪ್ತಾನ 241 ಎಸೆತಗಳಿಗೆ ಜವಾಬಿತ್ತರು. ಚೆಂಡು 18 ಸಲ ಬೌಂಡರಿ ಗೆರೆ ದಾಟಿತು. ವಿಲಿಯಮ್ಸನ್‌ ನಿರ್ಗಮನದ ಬಳಿಕ ಕೀಪರ್‌ ಬ್ರಾಡ್ಲಿ ವಾಟಿಗ್‌ (50) ಮತ್ತು ಆಲ್‌ರೌಂಡರ್‌ ನೀಲ್‌ ವ್ಯಾಗ್ನರ್‌ (32) ಜವಾಬ್ದಾರಿಯುತ ಆಟವಾಡಿದರು.

ದ್ವಿತೀಯ ಇನ್ನಿಂಗ್ಸಿನಲ್ಲಿ ದಕ್ಷಿಣ ಆಫ್ರಿಕಾದ ಆರಂಭ ಆಘಾತಕಾರಿಯಾಗಿತ್ತು. 4ನೇ ಎಸೆತದಲ್ಲೇ ಸ್ಟೀಫ‌ನ್‌ ಕುಕ್‌ (0) ವಿಕೆಟ್‌ ಬೌಲ್ಟ್ ದಾಳಿಗೆ ಉರುಳಿತು. ಆಗ ಆಫ್ರಿಕಾ ಕೂಡ ಖಾತೆ ತೆರೆದಿರಲಿಲ್ಲ. ಡೀನ್‌ ಎಲ್ಗರ್‌ (12)-ಹಾಶಿಮ್‌ ಆಮ್ಲ (23) ತಂಡವನ್ನು ಆಧರಿಸುವ ಪ್ರಯತ್ನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ-308 ಮತ್ತು ಒಂದು ವಿಕೆಟಿಗೆ 38. ನ್ಯೂಜಿಲ್ಯಾಂಡ್‌-341 (ವಿಲಿಯಮ್ಸನ್‌ 130, ರಾವಲ್‌ 52, ವಾಟಿಗ್‌ 50, ಮಹಾರಾಜ್‌ 94ಕ್ಕೆ 5, ಮಾರ್ಕೆಲ್‌ 62ಕ್ಕೆ 2, ಫಿಲಾಂಡರ್‌ 67ಕ್ಕೆ 2).

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.