ವೈಫ‌ಲ್ಯದಿಂದ ಪಾಠ: ಶಿಖರ್‌ ಧವನ್‌


Team Udayavani, Aug 22, 2017, 8:45 AM IST

dhavan.jpg

ಡಂಬುಲ: ತನ್ನ ಇಂದಿನ ಬ್ಯಾಟಿಂಗ್‌ ಯಶಸ್ಸಿಗೆ ವೈಫ‌ಲ್ಯ ಕಲಿಸಿದ ಪಾಠದ ಪಾತ್ರ ಬಹಳಷ್ಟಿದೆ ಎಂದು ಟೀಮ್‌ ಇಂಡಿಯಾ ಆರಂಭಕಾರ ಶಿಖರ್‌ ಧವನ್‌ ಹೇಳಿ ದ್ದಾರೆ. ಡಂಬುಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಭಾರತಕ್ಕೆ ಸುಲಭ ಜಯವನ್ನು ತಂದಿತ್ತ ಬಳಿಕ ಅವರು ಮಾತಾಡುತ್ತಿದ್ದರು.

“ವೈಫ‌ಲ್ಯ ಎನ್ನುವುದು ನಮಗೆ ಬಹಳಷ್ಟು ಪಾಠಗಳನ್ನು ಕಲಿಸುತ್ತದೆ. ಈ ವಿಷಯದಲ್ಲಿ ನಾನು ಅದೃಷ್ಟಶಾಲಿ. ಬ್ಯಾಟಿಂಗ್‌ ಬರಗಾಲದಲ್ಲಿದ್ದಾಗ ನನ್ನ ಪ್ರಗತಿ ಬಗ್ಗೆ ಚಿಂತಿಸುತ್ತಿದ್ದೆ. ಫಾರ್ಮ್ನಲ್ಲಿದ್ದಾಗಲೂ ಆಟದ ಪ್ರಗತಿ ಬಗ್ಗೆಯೇ ಯೋಚಿಸುತ್ತಿದ್ದೆ. ವೈಫ‌ಲ್ಯವನ್ನು ನಾನು ಕಲಿಕೆಗಾಗಿ ಮೀಸಲಿರಿಸಿದೆ’ ಎಂದು ಲಂಕಾ ವಿರುದ್ಧ ಪ್ರಚಂಡ ಫಾರ್ಮ್ ತೋರ್ಪಡಿಸುತ್ತಿರುವ ಧವನ್‌ ಹೇಳಿದರು.

“ಮುಂದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಇನ್ನೂ ದೂರದಲ್ಲಿದೆ. ಅಲ್ಲಿಯ ತನಕ ನಾನು ಅತ್ಯುತ್ತಮ ಪ್ರದರ್ಶನವನ್ನು ಕಾಯ್ದುಕೊಳ್ಳಬೇಕು. ಇದು ನನ್ನ ಗುರಿ. ಇಲ್ಲವಾದರೆ ನನ್ನ ಸ್ಥಾನವನ್ನು ತುಂಬಬಲ್ಲ ಬಹಳಷ್ಟು ಮಂದಿ ಆಟಗಾರರಿದ್ದಾರೆ…’ ಎಂದರು.

ಮರಳಿದಾಗಲೆಲ್ಲ ಮಹಾನ್‌ ಸಾಧನೆ
2013ರ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ ವೇಳೆ ಯಲ್ಲೂ ಶಿಖರ್‌ ಧವನ್‌ ಇದೇ ಫಾರ್ಮ್ನಲ್ಲಿದ್ದರು. ಬಳಿಕ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್‌ ಶತಕ ಬಾರಿಸಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದರು. ಈ ಸಲದ ಚಾಂಪಿಯನ್ಸ್‌ ಟ್ರೋಫಿಗೆ ಮರಳಿದಾಗಲೂ ಧವನ್‌ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಕಳೆದ ವರ್ಷ ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯ ಬಳಿಕ ಕಳಪೆ ಫಾರ್ಮ್ ಕಾರಣಕ್ಕಾಗಿ ಶಿಖರ್‌ ಧವನ್‌ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈ ವರ್ಷದ ಚಾಂಪಿಯನ್ಸ್‌ ಟ್ರೋಫಿ ವೇಳೆ ಮತ್ತೆ ತಂಡವನ್ನು ಕೂಡಿಕೊಂಡರು. ಆದರೂ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಧವನ್‌ ಆಯ್ಕೆಯಾಗಿರಲಿಲ್ಲ. ಮುರಳಿ ವಿಜಯ್‌ ಗಾಯಾಳಾಗಿ ಹೊರಬಿದ್ದುದರಿಂದ ಟೆಸ್ಟ್‌ ತಂಡದಲ್ಲೂ ಧವನ್‌ಗೆ ಅವಕಾಶ ಲಭಿಸಿತು. ಇದನ್ನವರು 2 ಶತಕಗಳೊಂದಿಗೆ ಎರಡೂ ಕೈಗಳಿಂದ ಬಾಚಿ
ಕೊಂಡರು. ಅರ್ಥಾತ್‌, ತಂಡಕ್ಕೆ ಮರಳಿದಾಗಲೆಲ್ಲ ಧವನ್‌ ಅಮೋಘ ಬ್ಯಾಟಿಂಗ್‌ ತೋರ್ಪಡಿಸುತ್ತಲೇ ಬಂದಿರುವುದು ವಿಶೇಷ. 

ನಾನು ಇಂತಿಷ್ಟೇ ರನ್‌ ಬಾರಿಸಬೇಕು, ಇಷ್ಟೇ ಶತಕ ಹೊಡೆಯಬೇಕೆಂಬ ಯಾವುದೇ ಗುರಿಯನ್ನು ಇರಿಸಿಕೊಂಡವನಲ್ಲ. ಆದರೆ ಫಿಟ್‌ನೆಸ್‌ ಜತೆಗೆ ಆಟದ ಕೌಶಲವನ್ನು ಕಾಯ್ದುಕೊಂಡು ಉತ್ತಮ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ ನಡೆಸುವುದನ್ನು ನಾನು ಬಯಸುತ್ತೇನೆ. ತಂಡದ ಕಿರಿಯ ಆಟಗಾರರೊಂದಿಗೆ ಸ್ಪರ್ಧಿಸಬೇಕಾದರೆ ಫಿಟ್‌ನೆಸ್‌ ಆತ್ಯಗತ್ಯ..
-ಶಿಖರ್‌ ಧವನ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.