
ಫಿಫಾ ವಿಶ್ವಕಪ್: ಪೆನಾಲ್ಟಿ ಶೂಟೌಟ್: ಕ್ರೊವೇಶಿಯ ಹ್ಯಾಟ್ರಿಕ್
Team Udayavani, Dec 6, 2022, 11:14 PM IST

ಸೋಮವಾರ ರಾತ್ರಿ ಜಪಾನ್ ಎದುರಿನ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ರನ್ನರ್ ಅಪ್ ಕ್ರೊವೇಶಿಯ ಪೆನಾಲ್ಟಿ ಶೂಟೌಟ್ ಮೂಲಕ ಗೆದ್ದು ಮೇಲೇರಿತು. 90 ನಿಮಿಷ ಹಾಗೂ ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಎರಡೂ ತಂಡಗಳು 1-1 ಸಮಬಲದಲ್ಲಿದ್ದುದರಿಂದ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಇಲ್ಲಿ ಕ್ರೊವೇಶಿಯ 3-1 ಮೇಲುಗೈ ಸಾಧಿಸಿತು.
ಇದು ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕ್ರೊವೇಶಿಯದ ಹ್ಯಾಟ್ರಿಕ್ ಶೂಟೌಟ್ ಗೆಲುವು. ಹಿಂದಿನೆರಡೂ ಶೂಟೌಟ್ ಗೆಲುವು 2018ರ ವಿಶ್ವಕಪ್ನಲ್ಲಿ ದಾಖಲಾಗಿತ್ತು. ಕ್ರೊವೇಶಿಯ ವಿಶ್ವಕಪ್ನಲ್ಲಿ “3 ಪ್ಲಸ್’ ಶೂಟೌಟ್ ಗೆಲುವು ದಾಖಲಿಸಿದ ಕೇವಲ 2ನೇ ತಂಡ. ಜರ್ಮನಿ ನಾಲ್ಕೂ ಶೂಟೌಟ್ಗಳಲ್ಲಿ ಗೆದ್ದು ಅಗ್ರಸ್ಥಾನಿಯಾಗಿದೆ.
ಅಂದಿನ ಮೊದಲ ಶೂಟೌಟ್ಗೆ ಸಾಕ್ಷಿಯಾದದ್ದು ಡೆನ್ಮಾರ್ಕ್ ಎದುರಿನ ಪ್ರಿ ಕ್ವಾರ್ಟರ್ ಫೈನಲ್. ಹೆಚ್ಚುವರಿ ಸಮಯದಲ್ಲೂ ಪಂದ್ಯ 1-1 ಸಮಬಲದಲ್ಲಿತ್ತು. ಶೂಟೌಟ್ನಲ್ಲಿ ಕ್ರೊವೇಶಿಯ 3-2 ಗೆಲುವು ಕಂಡಿತು.
ಮುಂದಿನ ಪಂದ್ಯವೇ ಮತ್ತೊಂದು ಶೂಟೌಟ್ಗೆ ಸಾಕ್ಷಿಯಾಯಿತು. ಅದು ಆತಿಥೇಯ ರಷ್ಯಾ ಎದುರಿನ ಕ್ವಾರ್ಟರ್ ಫೈನಲ್ ಮುಖಾಮುಖೀ. ಹೆಚ್ಚುವರಿ ಅವಧಿಯಲ್ಲಿ ಇತ್ತಂಡಗಳು 2-2 ಸಮಬಲದಲ್ಲಿದ್ದವು. ಶೂಟೌಟ್ನಲ್ಲಿ ಕ್ರೊವೇಶಿಯ 4-3 ಅಂತರದ ಮೇಲುಗೈ ಸಾಧಿಸಿತು.
ಜಪಾನ್ಗೆ ಲಕ್ ಇಲ್ಲ
ಶೂಟೌಟ್ ವಿಷಯದಲ್ಲಿ ಜಪಾನ್ ನತದೃಷ್ಟ ತಂಡ. ಇದು ವಿಶ್ವಕಪ್ನಲ್ಲಿ ಜಪಾನ್ಗೆ ಎದುರಾದ 2ನೇ ಶೂಟೌಟ್. ಎರಡರಲ್ಲೂ ಅದು ಸೋಲನುಭವಿಸಿತು.
ಜಪಾನ್ ಮೊದಲ ಶೂಟೌಟ್ ಪಂದ್ಯ ಕಂಡದ್ದು 2016ರ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ. ಅಂದಿನ ಎದುರಾಳಿ ಪರಗ್ವೆ. 120 ನಿಮಿಷಗಳ ಆಟದಲ್ಲೂ ಗೋಲು ದಾಖಲಾಗಿರಲಿಲ್ಲ. ಇದನ್ನು ಜಪಾನ್ 3-5 ಅಂತರದಿಂದ ಕಳೆದುಕೊಂಡಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿರಾಟ್, ಸಚಿನ್, ಗಾವಸ್ಕರ್ ರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ: ಕೋಚ್ ಗುರುಚರಣ್ ಸಿಂಗ್

ಇವನಂತಹ ಆಟಗಾರನನ್ನು ನೋಡಿಲ್ಲ..: ಭಾರತೀಯನನ್ನು ಹಾಡಿ ಹೊಗಳಿದ ರಿಕಿ ಪಾಂಟಿಂಗ್

ಐಸಿಸಿ ವನಿತಾ ಟಿ20 ವಿಶ್ವಕಪ್: ಮತ್ತೊಂದು ಎತ್ತರಕ್ಕೆ ತಲುಪಿದ ವನಿತಾ ಕ್ರಿಕೆಟ್

ಆಸ್ಟ್ರೇಲಿಯನ್ ಓಪನ್: ನೊವಾಕ್ ಜೊಕೋವಿಕ್-ಸಿಸಿಪಸ್ ಪ್ರಶಸ್ತಿ ರೇಸ್

ಇಂಡೋನೇಷ್ಯಾ ಮಾಸ್ಟರ್: ಲಕ್ಷ್ಯ ಸೇನ್ ಪರಾಭವ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಹಲವು ವಿಸ್ಮಯಗಳ ಆಗರ ನೆಲ್ಲಿತೀರ್ಥ- ವರ್ಷದಲ್ಲಿ ಆರು ತಿಂಗಳು ಮಾತ್ರ ಭೇಟಿಗೆ ಅವಕಾಶ…

ತೆಕ್ಕಟ್ಟೆ: ಕಾರಿಗೆ ಟ್ಯಾಂಕರ್ ಲಾರಿ ಢಿಕ್ಕಿ ; ನಾಲ್ವರು ವಿದ್ಯಾರ್ಥಿಗಳು ಪಾರು !

ಪತ್ರಕರ್ತನನ್ನು ಮರಕ್ಕೆ ಕಟ್ಟಿ ಥಳಿಸಿದ ಕಿಡಿಗೇಡಿಗಳು: ಆರು ಮಂದಿಯ ಬಂಧನ

ಜ. 29ರಂದು ಕಟಪಾಡಿ ಏಣಗುಡ್ಡೆಯಲ್ಲಿ ‘ಕೌಸ್ತುಭ ರೆಸಿಡೆನ್ಸಿ’ ಹೊಟೇಲ್, ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಅಂಬೇಡ್ಕರ್ ಮತ್ತು ಮಹಾ ಆಘಾಡಿಯ ನಡುವೆ ಯಾವುದೇ ಮಾತುಕತೆ ನಡೆದಿಲ್ಲ: ಪವಾರ್