ಕೋವಿಡ್ 19 ಸಂಕಟದಲ್ಲಿ ಯುವಕರಿಗೆ ಸ್ಫೂರ್ತಿ : ವಾಲಿಬಾಲ್‌ ಪ್ರಿಯರ ಲೆಜೆಂಡ್ಸ್‌ ಲೈವ್‌ ಚಾಟ್‌


Team Udayavani, Aug 2, 2020, 6:39 AM IST

ಕೋವಿಡ್ 19 ಸಂಕಟದಲ್ಲಿ ಯುವಕರಿಗೆ ಸ್ಫೂರ್ತಿ : ವಾಲಿಬಾಲ್‌ ಪ್ರಿಯರ ಲೆಜೆಂಡ್ಸ್‌ ಲೈವ್‌ ಚಾಟ್‌

‘ಲೆಜೆಂಡ್ಸ್‌ ಲೈವ್‌ ಚಾಟ್‌ 2ಕೆ 20’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ದೈನಿಕ ಸಂವಾದಗಳ ಮೂಲಕ ಆಟದ ಕೌಶಲ ಹರಿತಗೊಳಿಸುವ ಹೊಸ ಪರಿಕಲ್ಪನೆ ಇದು.

ಮಣಿಪಾಲ: ಕೋವಿಡ್ 19 ಲಾಕ್‌ಡೌನ್‌ ಕ್ರೀಡೆಗೂ ಕತ್ತರಿ ಹಾಕಿದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಾಲಿಬಾಲ್‌ ಆಟಗಾರರೆಲ್ಲ ಒಟ್ಟುಗೂಡಿ ಹೊಸ ಪ್ರಯತ್ನವೊಂದಕ್ಕೆ ಕೈಯಿಕ್ಕಿದ್ದಾರೆ.

‘ಲೆಜೆಂಡ್ಸ್‌ ಲೈವ್‌ ಚಾಟ್‌ 2ಕೆ20’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ದೈನಿಕ ಸಂವಾದಗಳ ಮೂಲಕ ಆಟದ ಕೌಶಲ ಹರಿತಗೊಳಿಸುವ ಹೊಸ ಪರಿಕಲ್ಪನೆ ಇದು.

ಏನಿದು ಸ್ಟಾರ್‌ ಟಾಕ್‌?
ಒಂದು ಕಾಲದಲ್ಲಿ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸಿದ, ಜಿಲ್ಲೆಯ ಪ್ರಸಿದ್ಧ ಆಟಗಾರರನ್ನೆಲ್ಲ ದಿನಕ್ಕೊಬ್ಬರಂತೆ ಈ ಗ್ರೂಪ್‌ನಲ್ಲಿ ಸಂದರ್ಶಿಸಲಾಗುತ್ತದೆ. ದಿನವೂ ರಾತ್ರಿ 8ರಿಂದ 10 ಗಂಟೆ ವರೆಗೆ 2 ತಾಸು ಸಂವಾದಕ್ಕೆ ಮೀಸಲು.
ಈ ಸಂದರ್ಭ ಎಡ್ಮಿನ್‌ಗಳು ಮತ್ತು ಮಾಜಿ ಆಟಗಾರ ಮಾತ್ರವೇ ಮಾತನಾಡಬಹುದಾಗಿದೆ. ಈ ಅವಧಿ ಮುಗಿದ ಬಳಿ ಗ್ರೂಪನ್ನು ಮುಕ್ತಗೊಳಿಸಲಾಗುತ್ತದೆ.

ಆಗ ಆ ದಿನದ ಲೆಜೆಂಡರಿ ಆಟಗಾರನ ಸಹವರ್ತಿಗಳಾಗಿ ತಂಡದಲ್ಲಿದ್ದವರು ಭಾವನೆಗಳನ್ನು ಹಂಚಿಕೊಳ್ಳುತ್ತಾರೆ.
ಈ ಗ್ರೂಪನ್ನು ಜು. 14ರಿಂದ ಆರಂಭಿಸಲಾಗಿದ್ದು, 450ಕ್ಕೂ ಅಧಿಕ ವಾಲಿಬಾಲ್‌ ಪ್ರಿಯರಿಗೆ ಸಂವಾದ ಆಲಿಸಲು ಅವಕಾಶ ಕಲ್ಪಿಸಲಾಗಿದೆ.

ಗ್ರೂಪ್‌ ‘ವಾಲಿಬಾಲ್‌ ಪರಂಪರೆ ಅನಾವರಣ’ ಎಂಬ ಧ್ಯೇಯ ವಾಕ್ಯದಡಿ ಕಾರ್ಯ ನಿರ್ವಹಿಸುತ್ತಿದೆ. ಅಂದಿನ ಪ್ರಸಿದ್ಧ ಆಟಗಾರರ ಪರಿಚಯ ಈಗಿನ ಪೀಳಿಗೆಗೆ ಬೇಕು, ಸಾಧನೆಯಿಂದ ಪ್ರೇರಣೆ ಪಡೆಯಬೇಕೆಂಬುದು ಗ್ರೂಪ್‌ನ ಹಂಬಲ. ಪ್ರಸ್ತುತ ರಾಜ್ಯ ಮತ್ತು ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುತ್ತಿರುವ ಅವಿನಾಶ್‌ ಶೆಟ್ಟಿ, ಅನೂಪ್‌ ಡಿ’ಕೋಸ್ತಾ, ಅಶ್ವಲ್‌ ರೈ, ಇಮ್ತಿಯಾಝ್ ಸಹಿತ ಅನೇಕರು ಈ ಗ್ರೂಪ್‌ನಲ್ಲಿದ್ದಾರೆ.

ಗ್ರೂಪ್‌ನಲ್ಲಿ ಇಂಡಿಯನ್‌ ಸರ್ವಿಸಸ್‌ ತಂಡ, ವೈಎಂಸಿ ಮಂಗಳೂರು ತಂಡವನ್ನು ಪ್ರತಿನಿಧಿಸಿದ ರಾಜಾರಾಂ ಮಂಗಳೂರು, ರಾಷ್ಟ್ರೀಯ, ರಾಜ್ಯ ತಂಡಗಳನ್ನು ಪ್ರತಿನಿಧಿಸಿದ ಜೂಲಿಯನ್‌ ಪಿಂಟೋ, ರಾಜ್ಯ ತಂಡ ಮತ್ತು ಸಿಂಡಿಕೇಟ್‌ ಬ್ಯಾಂಕ್‌ ತಂಡವನ್ನು ಪ್ರತಿನಿಧಿಸಿದ್ದ ಎವರೆಸ್ಟ್‌ ಪಿಂಟೋ, ಕರಾವಳಿ ಕರ್ನಾಟಕದ ನಂ.1 ಆಟಗಾರನಾಗಿದ್ದ ಭಗವಾನ್‌ ದಾಸ್‌, ರಾಜ್ಯ, ವಿ.ವಿ. ಪ್ರತಿನಿಧಿಸಿದ ಥಾಮಸ್‌ ಧರ್ಮಸ್ಥಳ, ರಾಜ್ಯ ತಂಡದ ಕಪ್ತಾನ, ಮಂಗಳ ಫ್ರೆಂಡ್ಸ್‌ನ ಆಟಗಾರ ಸುನಿಲ್‌ ಬಾಳಿಗಾ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಸಿದ್ಧಿ ಗಳಿಸಿದ್ದ ಯಾಕೂಬ್‌ ಕೈರಂಗಳ, ರಾಷ್ಟ್ರೀಯ ಆಟಗಾರರಾದ ಮಂಗಳ ಫ್ರೆಂಡ್ಸ್‌ನ ಕೋಚ್‌ ನಾಗೇಶ್‌, ಎಚ್‌ಎಂಟಿ ತಂಡದ ಪ್ರಕಾಶ್‌ ರಾವ್‌, ಗಣೇಶ್‌ ರೈ, ರಾಜ್ಯ ತಂಡದ ಬೇಬಿ ಜಾನ್‌, ವಿದೇಶಗಳಲ್ಲಿ ಛಾಪು ಮೂಡಿಸಿದ್ದ ರಿಜ್ವಾನ್‌ ಮಲ್ಪೆ ಅವರ ಸಂದರ್ಶನ ನಡೆದಿದೆ.

ಅನುಭವ ಹಂಚಿಕೊಳ್ಳಲು ಇಂತಹ ವೇದಿಕೆ ಸಿಗುವುದು ಅಪರೂಪ. ನಮ್ಮ ಕಾಲದ ಆಟಗಾರರನ್ನು ಗುರುತಿಸಿ ಒಂದೆಡೆ ಕಲೆ ಹಾಕಿದೆ, ಹಿಂದಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
– ಸುನಿಲ್‌ ಬಾಳಿಗಾ, ಮಾಜಿ ಆಟಗಾರ

90ರ ದಶಕದ ಆಟದ ಅನುಭವವನ್ನು ಮಾತಿನ ಮೂಲಕ ಯುವ ಮನಸ್ಸುಗಳಿಗೆ ದಾಟಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಕ್ರೀಡಾ ಪಯಣದಿಂದ ಯುವಕರು ಪ್ರೇರಣೆಗೊಂಡು ಅವರ ಮುಂದಿನ ಸಾಧನೆಗೆ ಇದು ದಾರಿಯಾದರೆ ಖುಷಿ.
– ಯಾಕೂಬ್‌ ಕೈರಂಗಳ, ಮಾಜಿ ಆಟಗಾರ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.