ಬೇರ್‌ಸ್ಟೊ-ಕ್ರಿಸ್‌ ವೋಕ್ಸ್‌ ಭರ್ಜರಿ ಆಟ


Team Udayavani, Aug 12, 2018, 6:00 AM IST

ap8112018000200b.jpg

ಲಂಡನ್‌: ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಆತಿಥೇಯ ಇಂಗ್ಲೆಂಡ್‌ ತಂಡ ಲಾರ್ಡ್ಸ್‌ ಟೆಸ್ಟ್‌ ಪಂದ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ದ್ವಿತೀಯ ದಿನ ಮಳೆಯಾದ ಬಳಿಕ ಬ್ಯಾಟಿಂಗ್‌ ನಡೆಸಿದ ಭಾರತ ಜೇಮ್ಸ್‌ ಆ್ಯಂಡರ್ಸನ್‌ ಅವರ ಮಾರಕ ದಾಳಿಗೆ ಕೇವಲ 107 ರನ್ನಿಗೆ ಸರ್ವಪತನ ಕಂಡಿತ್ತು. ಮೂರನೇ ದಿನವಾದ ಶನಿವಾರ ಬ್ಯಾಟಿಂಗ್‌ ಪರಾಕ್ರಮ ಮೆರೆದ ಇಂಗ್ಲೆಂಡ್‌ ಆಟಗಾರರು ಈಗಾಗಲೇ ಭಾರತ ಮೊತ್ತವನ್ನು ಹಿಂದಿಕ್ಕಿದ್ದಾರೆ. 

ಟೀ  ವಿರಾಮದ ಬಳಿಕ ಇಂಗ್ಲೆಂಡ್‌ 6 ವಿಕೆಟ್‌ ಕಳೆದುಕೊಂಡಿದ್ದು 335 ರನ್‌ ಗಳಿಸಿ ಆಡುತ್ತಿದೆ. ಸದ್ಯ 228 ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಬೇರ್‌ಸ್ಟೊ ಮತ್ತು ವೋಕ್ಸ್‌ ಆರನೇ ವಿಕೆಟಿಗೆ 189 ರನ್‌ ಜತೆಯಾಟ ನಡೆಸಿದ್ದರಿಂದ ಇಂಗ್ಲೆಂಡ್‌ ಸುಸ್ಥಿತಿಗೆ ತಲುಪುವಂತಾಯಿತು. ಬೇರ್‌ಸ್ಟೊ 93 ರನ್ನಿಗೆ ಔಟಾದರೆ ವೋಕ್ಸ್‌ 111 ರನ್‌ ಗಳಿಸಿ ಆಡುತ್ತಿದ್ದಾರೆ.

ಎಚ್ಚರಿಕೆಯ ಆಟ
ಇಂಗ್ಲೆಂಡ್‌ ತಂಡ ಎಚ್ಚರಿಕೆಯಿಂದ ಆಟ ಆರಂಭಿಸಿತು. ಆದರೆ 32 ರನ್ನಿಗೆ 2 ವಿಕೆಟ್‌ ಉರುಳಿದಾಗ ಭಾರತದಂತೆ ಇಂಗ್ಲೆಂಡ್‌ ಆಟಗಾರರೂ ಕುಸಿಯಬಹುದೆಂದು ಭಾವಿಸ ಲಾಗಿತ್ತು. ಆದರೆ ಆ ಬಳಿಕದ ಆಟಗಾರರು ಕ್ರೀಸ್‌ಗೆ ಅಂಟಿಕೊಡು ನಿಂತ ಕಾರಣ ಭಾರತ ಒತ್ತಡಕ್ಕೆ ಬೀಳುವಂತಾಯಿತು. ಊಟದ ವಿರಾಮದ ವೇಳೆ ಶಮಿ ಅವರು ಜೋ ರೂಟ್‌ ವಿಕೆಟ್‌ ಹಾರಿಸಿದ್ದರಿಂದ ಇಂಗ್ಲೆಂಡ್‌ ಆಘಾತಕ್ಕೆ ಒಳಗಾಯಿತು. ಆಗ ಇಂಗ್ಲೆಂಡ್‌ 89 ರನ್ನಿಗೆ 4 ವಿಕೆಟ್‌ ಕಳೆದುಕೊಂಡಿತ್ತು. 

ಊಟದ ವಿರಾಮದ ಬಳಿಕ ಜಾನಿ ಬೇರ್‌ಸ್ಟೊ ಮತ್ತು ಬಟ್ಲರ್‌ ಐದನೇ ವಿಕೆಟಿಗೆ 41 ರನ್‌ ಪೇರಿಸಿದರು. ಇದರಿಂದಾಗಿ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸುವಂತಾಯಿತು. ಬಟ್ಲರ್‌ 24 ರನ್‌ ಗಳಿಸಿ ಶಮಿಗೆ ಮೂರನೇ ಬಲಿಯಾದರು. ಆ ಬಳಿಕ ಬೇರ್‌ಸ್ಟೊ ಮತ್ತು ಕ್ರಿಸ್‌ ವೋಕ್ಸ್‌ ಭರ್ಜರಿ ಆಟವಾಡಿದರು.
 
ಭಾರತ 107ಕ್ಕೆ ಆಲೌಟ್‌
ದ್ವಿತೀಯ ದಿನ ಮಳೆ ನಿಂತ ಬಳಿಕ ಆಟ ಆರಂಭಿಸಿದ ಭಾರತ ಆ್ಯಂಡರ್ಸನ್‌ ದಾಳಿಗೆ ತತ್ತರಿಸಿ ಹೋಯಿತು. ಮಳೆ ಹನಿ ಬಿದ್ದಂತೆ ವಿಕೆಟ್‌ ಕಳೆದುಕೊಳ್ಳುತ್ತ ಹೋಯಿತು. ಕೊಹ್ಲಿ ಮತ್ತು ಆರ್‌. ಅಶ್ವಿ‌ನ್‌ ಮಾತ್ರ 20 ಪ್ಲಸ್‌ ರನ್‌ ಗಳಿಸಿದ ಸಾಧನೆ ಮಾಡಿದರು. 

ಮಾರಕ ದಾಳಿ ಸಂಘಟಿಸಿದ ಆ್ಯಂಡರ್ಸನ್‌ ಕೇವಲ 20 ರನ್ನಿಗೆ 5 ವಿಕೆಟ್‌ ಕಿತ್ತು ಮಿಂಚಿದರು. ವೋಕ್ಸ್‌ 19 ರನ್ನಿಗೆ 2 ವಿಕೆಟ್‌ ಪಡೆದರು. ಬ್ರಾಡ್‌, ಕುರಾನ್‌ ತಲಾ ಒಂದು ವಿಕೆಟ್‌ ಕಿತ್ತರು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌
ಮುರಳಿ ವಿಜಯ್‌    ಬಿ ಆ್ಯಂಡರ್ಸನ್‌    0
ಕೆಎಲ್‌ ರಾಹುಲ್‌    ಸಿ ಬೇರ್‌ಸ್ಟೊ ಬಿ ಆ್ಯಂಡರ್ಸನ್‌    8
ಚೇತೇಶ್ವರ ಪೂಜಾರ    ರನೌಟ್‌    1
ವಿರಾಟ್‌ ಕೊಹ್ಲಿ    ಸಿ ಬಟ್ಲರ್‌ ಬಿ ವೋಕ್ಸ್‌    23
ಅಜಿಂಕ್ಯ ರಹಾನೆ    ಸಿ ಕುಕ್‌ ಬಿ ಆ್ಯಂಡರ್ಸನ್‌    18
ಹಾರ್ದಿಕ್‌ ಪಾಂಡ್ಯ    ಸಿ ಬಟ್ಲರ್‌ ಬಿ ವೋಕ್ಸ್‌    11
ದಿನೇಶ್‌ ಕಾರ್ತಿಕ್‌    ಬಿ ಕುರಾನ್‌    1
ಆರ್‌. ಅಶ್ವಿ‌ನ್‌    ಎಲ್‌ಬಿಡಬ್ಲ್ಯು ಬಿ ಬ್ರಾಡ್‌    29
ಕುಲದೀಪ್‌ ಯಾದವ್‌    ಎಲ್‌ಬಿಡಬ್ಲ್ಯು ಬಿ ಆ್ಯಂಡರ್ಸನ್‌    0
ಮೊಹಮ್ಮದ್‌ ಶಮಿ    ಔಟಾಗದೆ    10
ಇಶಾಂತ್‌ ಶರ್ಮ            ಎಲ್‌ಬಿಡಬ್ಲ್ಯು ಬಿ ಆ್ಯಂಡರ್ಸನ್‌     0
ಇತರ        6
ಒಟ್ಟು (ಆಲೌಟ್‌)        107
ವಿಕೆಟ್‌ ಪತನ: 1-0, 2-10, 3-15, 4-49, 5-61, 6-62, 7-84, 8-96, 9-96
ಬೌಲಿಂಗ್‌: ಜೇಮ್ಸ್‌ ಆ್ಯಂಡರ್ಸನ್‌    13.2-5-20-5
ಸ್ಟುವರ್ಟ್‌ ಬ್ರಾಡ್‌        10-2-37-1
ಕ್ರಿಸ್‌ ವೋಕ್ಸ್‌        6-2-19-2
ಸ್ಯಾಮ್‌ ಕುರಾನ್‌        6-0-26-1

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.