ಮನೋಜ್ ತಿವಾರಿ ಬಂಗಾಲ ಕ್ರಿಕೆಟ್ ತಂಡದ ನಾಯಕ
Team Udayavani, Jul 29, 2018, 12:12 PM IST
ಕೋಲ್ಕತಾ: ತನ್ನನ್ನು ಯಾವುದೇ ದೇಶಿ ಕ್ರಿಕೆಟ್ ತಂಡಗಳಲ್ಲಿ ಸೇರಿಸಿಕೊಂಡಿಲ್ಲ ಎಂದು ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮನೋಜ್ ತಿವಾರಿ ಅವರೀಗ 2018-19ನೇ ಸಾಲಿನ ದೇಶಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಂಗಾಲ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಬಂಗಾಲ ತಂಡದ ಮಾಜಿ ನಾಯಕ ಪ್ರೀತೀಶ್ ನಂದಿ ಅಧ್ಯಕ್ಷತೆಯ ನೂತನ ಆಯ್ಕೆ ಸಮಿತಿ ಈ ನೇಮಕ ಮಾಡಿತು. ಸ್ವತಃ ಮನೋಜ್ ತಿವಾರಿ ಮತ್ತು ಕೋಚ್ ಸಾಯಿರಾಜ್ ಬಹುತುಳೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. “ಹೌದು, ದುಲೀಪ್ ಟ್ರೋಫಿ ತಂಡಗಳಿಗೆ ಆಯ್ಕೆ ಮಾಡದೇ ಇದ್ದಾಗ ನನಗೆ ಬೇಸರವಾಗಿತ್ತು. ಆದರೆ ಬಂಗಾಲ ತಂಡದ ನಾಯಕತ್ವದ ಯಾವುದೇ ಅವಕಾಶವನ್ನು ನಾನು ತಪ್ಪಿಸಿಕೊಳ್ಳಲಾರೆ. ಇದೊಂದು ಗೌರವ…’ ಎಂದು ಮನೋಜ್ ತಿವಾರಿ ಹೇಳಿದ್ದಾರೆ.ಮುಂದಿನ ಕ್ರಿಕೆಟ್ ಋತುವಿಗಾಗಿ ಬಂಗಾಲದ 31 ಸದಸ್ಯರ ಸಂಭಾವ್ಯ ಕ್ರಿಕೆಟ್ ತಂಡವನ್ನೂ ಈ ಸಂದರ್ಭದಲ್ಲಿ ಆರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ