ಮಿಕ್ಕಿಮೌಸ್ ಆಯ್ಕೆ ಸಮಿತಿ: ಎಂಜಿನಿಯರ್
Team Udayavani, Nov 1, 2019, 5:18 AM IST
ಮುಂಬಯಿ: ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಭಾರತೀಯ ಕ್ರಿಕೆಟ್ ವಲಯದಲ್ಲಿ ಹಲವು ಸಂದರ್ಭಗಳಲ್ಲಿ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.
ಇದೀಗ ಮತ್ತೆ ಅವರ ವಿರುದ್ಧ ಆಕ್ರೋಶ ಎದ್ದಿದೆ. ಈ ಬಾರಿ ಸಿಟ್ಟನ್ನು ಹೊರಹಾಕಿದ್ದು ಮಾಜಿ ಕ್ರಿಕೆಟಿಗ ಫಾರೂಖ್ ಎಂಜಿನಿಯರ್.
ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು, ಅನುಷ್ಕಾ ಶರ್ಮಗೆ ಟೀ ಕೊಡುವುದರಲ್ಲಿ ಮಗ್ನರಾಗಿದ್ದನ್ನು ನೋಡಿದೆ. ಇದು ಮಿಕ್ಕಿಮೌಸ್ ಆಯ್ಕೆ ಸಮಿತಿ. ಇವರ್ಯಾರಿಗೂ ಯೋಗ್ಯತೆಯೇ ಇಲ್ಲ ಎಂದು ಎಂಜಿನಿಯರ್ ಹೇಳಿದ್ದಾರೆ.
ಭಾರತೀಯ ತಂಡದ ಆಯ್ಕೆಯಲ್ಲಿ ವಿರಾಟ್ ಕೊಹ್ಲಿಯದ್ದೇ ಸಂಪೂರ್ಣ ಪ್ರಭಾವವಿದೆ. ಇದು ಒಳ್ಳೆಯದೇ. ಆದರೆ ಆಯ್ಕೆಗಾರರ ಯೋಗ್ಯತೆಯೇನು? ಈ ಆಯ್ಕೆಗಾರರೆಲ್ಲ ಸೇರಿ ಹತ್ತರಿಂದ ಹನ್ನೆರಡು ಟೆಸ್ಟ್ ಪಂದ್ಯವಾಡಿದ್ದಾರೆ. ಅವರೆಲ್ಲ ಮಾಡುತ್ತಿದ್ದುದು ಅನುಷ್ಕಾಗೆ ಟೀ ತಂದುಕೊಡುವ ಕೆಲಸ ಎಂದು ಫಾರೂಖ್ ಹೇಳಿದ್ದಾರೆ.
“ನಾನಲ್ಲಿ ಇರಲೇ ಇಲ್ಲ’
ಫಾರೂಖ್ ಎಂಜಿನಿಯರ್ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅನುಷ್ಕಾ ಶರ್ಮ ಮೌನ ಮುರಿದು, ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ನಿಮಗೆ ಆಯ್ಕೆ ಸಮಿತಿ ಮೇಲೆ ಸಿಟ್ಟಿದ್ದರೆ, ನೇರವಾಗಿ ಅವರ ವಿರುದ್ಧ ಮಾತನಾಡಿ. ಇದರಲ್ಲಿ ನನ್ನ ಹೆಸರನ್ನು ಎಳೆದು ತರಬೇಡಿ. ವಿಶ್ವಕಪ್ ಪಂದ್ಯಗಳಲ್ಲಿ ಆಯ್ಕೆಸಮಿತಿ ಸದಸ್ಯರು ನನಗೆ ಟೀ ತಂದುಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ. ಆದರೆ ನಾನು ವಿಶ್ವಕಪ್ ವೇಳೆ ಭಾರತ-ನ್ಯೂಜಿಲ್ಯಾಂಡ್ ನಡುವಿನ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಹಾಜರಿದ್ದೆ. ಆಗ ನಾನು ಆಯ್ಕೆ ಸಮಿತಿ ಬಾಕ್ಸ್ ನಲ್ಲಿ ಇರಲಿಲ್ಲ, ಬದಲಿಗೆ ಕುಟುಂಬ ಸದಸ್ಯರ ಸ್ಥಾನದಲ್ಲಿ ಕುಳಿತಿದ್ದೆ. ಇವೆಲ್ಲ ಉದ್ದೇಶಪೂರ್ವಕ ಸುಳ್ಳಿನಮಾಲಿಕೆಯ ಹೊಸ ಆವೃತ್ತಿಯಷ್ಟೇ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ