ಆನ್ಲೈನ್ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ
Team Udayavani, Oct 25, 2021, 11:15 PM IST
ಹೊಸದಿಲ್ಲಿ: ಪಾಕಿಸ್ಥಾನ ವಿರುದ್ಧ ಸೋಲನುಭವಿ ಸಿದ ಬಳಿಕ ತೀವ್ರ ಟೀಕೆಗೊಳಗಾಗಿ, ಸಾಮಾಜಿಕ ಜಾಲತಾಣಿಗರ ದಾಳಿಗೆ ತುತ್ತಾಗಿರುವ ಮೊಹಮ್ಮದ್ ಶಮಿ ಬೆಂಬಲಕ್ಕೆ ಸಹಸ್ರ ಸಹಸ್ರ ಮಂದಿ ಧಾವಿಸಿದ್ದಾರೆ.
ಐಕಾನಿಕ್ ಕ್ರಿಕೆಟರ್ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹವಾಗ್, ರಾಜಕಾರಣಿಗಳು, ಟೀಮ್ ಇಂಡಿಯಾದ ಅಪ್ಪಟ ಅಭಿಮಾನಿಗಳು ಶಮಿಗೆ ನೈತಿಕ ಶಕ್ತಿ ತುಂಬಿದ್ದಾರೆ.
ಪಾಕ್ ಎದುರಿನ ಸೋಲಿನಲ್ಲಿ ಭಾರತದ ಬೌಲಿಂಗ್ ದಯನೀಯ ವೈಫಲ್ಯ ಕಂಡಿತ್ತು. ಪ್ರಧಾನ ವೇಗಿ ಮೊಹಮ್ಮದ್ ಶಮಿ 3.5 ಓವರ್ಗಳಲ್ಲಿ 43 ರನ್ ನೀಡಿ ಅತ್ಯಂತ ದುಬಾರಿಯಾಗಿದ್ದರು. ಇದನ್ನು ಸಹಿಸದ ಜಾಲತಾಣಿಗರು, “ನೀವು ಪಾಕಿಸ್ಥಾನದ ಪರ ಆಡುವುದಿದ್ದರೆ ಭಾರತದ ಜೆರ್ಸಿ ತೊಡುವುದೇಕೆ..’ ಎಂದೆಲ್ಲ ಟೀಕಾಪ್ರಹಾರ ಮಾಡಿದ್ದರು.
“ನಾವು ಟೀಮ್ ಇಂಡಿಯಾವನ್ನು ಬೆಂಬಲಿಸುವಾಗ ತಂಡದ ಎಲ್ಲ ಆಟಗಾರರನ್ನೂ ಬೆಂಬಲಿಸುತ್ತೇವೆ. ಮೊಹಮ್ಮದ್ ಶಮಿ ವಿಶ್ವ ದರ್ಜೆಯ ಬೌಲರ್. ಇದು ಅವರ ದಿನವಾಗಿರಲಿಲ್ಲ, ಅಷ್ಟೇ. ನಾನು ಶಮಿ ಮತ್ತು ಟೀಮ್ ಇಂಡಿಯಾ ಪರವಾಗಿ ನಿಲ್ಲುತ್ತೇನೆ’ ಎಂಬುದು ಸಚಿನ್ ತೆಂಡುಲ್ಕರ್ ಪ್ರತಿಕ್ರಿಯೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಅಫ್ಘಾನ್ಗೆ ಭರ್ಜರಿ ಗೆಲುವು
“ಶಮಿ ಮೇಲಿನ ಆನ್ಲೈನ್ ಆಕ್ರಮಣ ಅತ್ಯಂತ ಆಘಾತಕಾರಿ. ಅವರೋರ್ವ ಚಾಂಪಿಯನ್ ಬೌಲರ್.ಆನ್ಲೈನ್ನಲ್ಲಿ ಗಲಭೆ ಎಬ್ಬಿಸುವವರಿಗಿಂತ ಹೆಚ್ಚಿನ ದೇಶಪ್ರೇಮ ಭಾರತದ ಕ್ಯಾಪ್ ಧರಿಸಿದವರ ಹೃದಯದಲ್ಲಿರುತ್ತದೆ. ಶಮಿ, ಮುಂದಿನ ಪಂದ್ಯದಲ್ಲಿ ನಿಮ್ಮ ತಾಕತ್ತು ತೋರಿಸಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ’ ಎಂದು ಸೆಹವಾಗ್ ಆತ್ಮವಿಶ್ವಾಸ ತುಂಬಿದ್ದಾರೆ.
ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಯಜುವೇಂದ್ರ ಚಹಲ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಲೋಕಸಭಾ ಸದಸ್ಯ ಅಸಾದುದ್ದೀನ್ ಒವೈಸಿ ಕೂಡ ಶಮಿ ಪರವಾಗಿ ನಿಂತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು