ಪುನೇರಿಯನ್ನು ಮಣಿಸಿದ ಮುಂಬಾ
ಕೊಹ್ಲಿ ಉಪಸ್ಥಿತಿಯಲ್ಲಿ ಭಾರೀ ಹುರುಪು ತೋರಿದ ಆಟಗಾರರು
Team Udayavani, Jul 28, 2019, 5:18 AM IST
ಮುಂಬಯಿ: ಶನಿವಾರ ಮೊದಲ್ಗೊಂಡ ಮುಂಬಯಿ ಚರಣದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ಯು ಮುಂಬಾ 33-23 ಅಂಕಗಳ ಅಂತರದಿಂದ ಪುನೇರಿ ಪಲ್ಟಾನ್ ತಂಡವನ್ನು ಸೋಲಿಸಿತು. ಎರಡೂ ತಂಡಗಳು ಭಾರೀ ಹೋರಾಟವನ್ನೇ ನಡೆಸಿದವು. ಆದರೆ ಆತಿಥೇಯ ತಂಡವಾದ್ದರಿಂದ ಹೆಚ್ಚಿನ ಹುರುಪಿನಲ್ಲಿ ಆಡಿದ ಯು ಮುಂಬಾ ಜಯದ ನಗೆ ಬೀರಿತು.
ಯು ಮುಂಬಾ ಸಂಘಟಿತ ಹೋರಾಟದ ಮೂಲಕ ಗೆಲುವಿನ ದಡ ತಲುಪಿತು. ದಾಳಿಯಲ್ಲಿ ಗರಿಷ್ಠ ಅಂಕ ಗಳಿಸಿದ್ದು ಅಭಿಷೇಕ್ ಸಿಂಗ್. ವಿಶೇಷವೆಂದರೆ ಅವರು ಗಳಿಸಿದ್ದು ಬರೀ 5 ಅಂಕ. ಅದಕ್ಕಾಗಿ 15 ಬಾರಿ ಎದುರಾಳಿ ತಂಡದ ಕೋಟೆಗೆ ನುಗ್ಗಿ ಹೋದರು! ಮುಂಬಾ ಪರ ರಕ್ಷಣೆಯಲ್ಲಿ ಮಿಂಚಿದ್ದು ಸುರೀಂದರ್ ಸಿಂಗ್. ಅವರು 6 ಬಾರಿ ಎದುರಾಳಿಯನ್ನು ಕೆಡವಿಕೊಳ್ಳಲು ಯತ್ನಿಸಿ 4 ಅಂಕ ಪಡೆಯಲು ಸಫಲರಾದರು.
ಬೆಂಗಾಲ್ ವಿರುದ್ಧ
ಜೈಪುರಕ್ಕೆ ಜಯ
ಶನಿವಾರದ 2ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ನಡುವೆ ರೋಚಕ ಹೋರಾಟ ನಡೆಯಿತು. ಜೈಪುರ 27-25 ಅಂಕಗಳ ಅಂತರದಿಂದ ಜೈಸಿತು. ಗೆಲುವಿನ ಅಂತರ ಕೇವಲ 2 ಅಂಕ ಎನ್ನುವುದು ನಿಕಟ ಹೋರಾಟಕ್ಕೆ ಸಾಕ್ಷಿ. ಜೈಪುರ್ ಪರ ಸಂದೀಪ್ ಧುಲ್ ಮತ್ತು ದೀಪಕ್ ಹೂಡ ಮಿಂಚಿದರು.
ಗಮನ ಸೆಳೆದ ವಿರಾಟ್ ಕೊಹ್ಲಿ
ಪ್ರೊ ಕಬಡ್ಡಿ ಲೀಗ್ನ ಪ್ರತೀ ಚರಣದ ಆರಂಭದ ದಿನ ವಿಶೇಷ ಅತಿಥಿಯೊಬ್ಬರನ್ನು ಕರೆಯುವುದು ಸಂಪ್ರದಾಯ. ಅದರಂತೆ ಶನಿವಾರ ಮುಂಬಯಿ ಚರಣದ ಮೊದಲ ದಿನ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಟವನ್ನು ಉದ್ಘಾಟಿಸಿದರು. ಅಭಿಮಾನಿಗಳ ಆಕರ್ಷಣೆಯ ಕೇಂದ್ರ ಬಿಂದು ಅವರೇ ಆಗಿದ್ದರು. ಸ್ಟೇಡಿಯಂನಲ್ಲಿ ಕುಳಿತು ಕಬಡ್ಡಿ ರೋಮಾಂಚನವನ್ನು ಸವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್