IPL 2020:  ಮುಂಬೈ, ಕೆಕೆಆರ್ ಸೆಣಸಾಟ: ಮುಂಬೈ ಇಂಡಿಯನ್ಸ್‌ಗೆ 8 ವಿಕೆಟ್‌ ಜಯ


Team Udayavani, Oct 16, 2020, 10:52 PM IST

IPLIPL 2020:  ಮುಂಬೈ, ಕೆಕೆಆರ್ ಸೆಣಸಾಟ : ಗೆಲುವಿನ ನಗೆ ಬೀರಿದ ರೋಹಿತ್ ಬಳಗ

ಅಬುಧಾಬಿ: ಆರಂಭಕಾರ ಕ್ವಿಂಟಾನ್‌ ಡಿ ಕಾಕ್‌ (78*) ಅಮೋಘ ಅರ್ಧಶತಕ ಹಾಗೂ ನಾಯಕ ರೋಹಿತ್‌ ಶರ್ಮ (35) ಜೋಡಿಯ ಭರ್ಜರಿ ಆಟದ ನೆರವು ಪಡೆದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಕೆಕೆಆರ್‌ ಒಡ್ಡಿದ 148 ರನ್‌ಗಳ ಸುಲಭ ಸವಾಲನ್ನು ಮೆಟ್ಟಿನಿಂತು ವಿಜಯ ಸಂಭ್ರಮ ಆಚರಿಸಿತು. ಈ ಜಯದೊಂದಿಗೆ ಸದ್ಯ ಮುಂಬೈ ಅಗ್ರ ಸ್ಥಾನದಲ್ಲಿದ್ದರೂ ಶನಿವಾರ ದಂದ್ಯದಲ್ಲಿ ಚೆನ್ನೈವಿರುದ್ಧ ಡೆಲ್ಲಿ ಗೆಲುವು ದಾಖಲಿಸಿದರೆ ಡೆಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಲಿದೆ. ಆದ್ದರಿಂದ ಡೆಲ್ಲಿ ಮತ್ತು ಮುಂಬೈ ನಡುವೆ ಅಗ್ರ ಸ್ಥಾನಕ್ಕೆ ಮತ್ತೆ ಹಾವು-ಏಣಿ ಆಟ ಆರಂಭವಾಗಿದೆ.

ಟಾಸ್‌ ಜಯಿಸಿ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟಿಗೆ 148 ರನ್‌ ಪೇರಿಸಿತು. ಗುರಿ ಬೆನ್ನತ್ತಿದ ರೋಹಿತ್‌ ನೇತೃತ್ವದ ಮುಂಬೈ 16.5 ಓವರ್‌ಗಳಲ್ಲಿ 2 ವಿಕೆಟ್‌ನಷ್ಟಕ್ಕೆ 149 ರನ್‌ ಗಳಿಸುವಲ್ಲಿ ಯಶಸ್ವಿಯಾಯಿತು.

ಆರ್‌ಸಿಬಿ ವಿರುದ್ಧದ ಸೋಲಿನ ಬಳಿಕ ಪುಟಿದೇಳುವ ನಿರೀಕ್ಷೆಯಲ್ಲಿದ್ದ ಕೆಕೆಆರ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ರಾಹುಲ್‌ ತ್ರಿಪಾಠಿ 7 ರನ್ನಿಗೆ ವಿಕೆಟ್‌ ಒಪ್ಪಿಸಿದರು. ಉತ್ತಮ ಲಯದಲ್ಲಿರುವ ಕಿವೀಸ್‌ ವೇಗಿ ಟ್ರೆಂಟ್‌ ಬೌಲ್ಟ್ ಮಾರಕ ದಾಳಿಯ ಮರ್ಮವನ್ನರಿಯದೆ ಸೂರ್ಯಕುಮಾರ್‌ಗೆ ಕ್ಯಾಚಿತ್ತು ತ್ರಿಪಾಠಿ ನಿರಾಶೆಯೊಂದಿಗೆ ಪೆವಿಲಿಯನ್‌ ಸೇರಿಕೊಂಡರು.

ಈ ಆಘಾತದಿಂದ ಕೆಕೆಆರ್‌ ಹೊರಬರುವ ಮುನ್ನವೇ ಡೇಂಜರಸ್‌ ಬ್ಯಾಟ್ಸ್‌ಮನ್‌ ನಿತೀಶ್‌ ರಾಣ (5), ಭರವಸೆಯ ಆಟಗಾರ ಶುಭಮನ್‌ ಗಿಲ್‌ (21), ನಾಯಕತ್ವದಿಂದ ಕೆಳಗಿಳಿದ ದಿನೇಶ್‌ ಕಾರ್ತಿಕ್‌ (4) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಪೆರೇಡ್‌ ನಡೆಸಿದರು. ಪವರ್‌ ಪ್ಲೇ ಅವಧಿಯಲ್ಲಿ ತಂಡದ ಮೊತ್ತ 2 ವಿಕೆಟ್‌ ಕಳೆದುಕೊಂಡು 33 ರನ್‌ಗಳಿಸಿ ಒತ್ತಡಕ್ಕೆ ಸಿಲುಕಿತು. ಕಳೆದ ಪಂದ್ಯದಲ್ಲಿ ದುಬಾರಿ ಸ್ಪೆಲ್‌ ನಡೆಸಿದ ರಾಹುಲ್‌ ಚಹರ್‌ ಒಂದೇ ಓವರ್‌ನಲ್ಲಿ ಗಿಲ್‌ ಮತ್ತು ಕಾರ್ತಿಕ್‌ ವಿಕೆಟ್‌ ಬೇಟೆಯಾಡುವ ಮೂಲಕ ಕಳೆದ ಪಂದ್ಯದ ವೈಫ‌ಲ್ಯವನ್ನು ಬದಿಗೊತ್ತಿದರು. ಅವರು 4 ಓವರ್‌ಗಳಲ್ಲಿ ನೀಡಿದ್ದು ಬರೀ 18 ರನ್‌.

ರಸೆಲ್‌ ಮತ್ತೆ ವಿಫ‌ಲ
ಈ ಬಾರಿಯ ಐಪಿಎಲ್‌ ಕೂಟದ ಪ್ರತಿ ಪಂದ್ಯದಲ್ಲಿಯೂ ಬ್ಯಾಟಿಂಗ್‌ ಬರ ಅನುಭವಿಸುತಿದ್ದ ರಸೆಲ್‌ ಆರಂಭದಲ್ಲಿ ಸಿಕ್ಸರ್‌ ಸಿಡಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ ಬುಮ್ರಾ ಎಸೆದ ದ್ವಿತೀಯ ಓವರ್‌ನಲ್ಲಿ ಡಿ ಕಾಕ್‌ಗೆ ಕ್ಯಾಚ್‌ ನೀಡಿ ಔಟಾದರು. ಹೀಗೆ ರಸೆಲ್‌ ಬ್ಯಾಟಿಂಗ್‌ ವೈಫ‌ಲ್ಯ ಮತ್ತೆ ಮುಂದುವರಿಯಿತು.

ತೀವ್ರ ಸಂಕಷ್ಟಕ್ಕೆ ಸಿಲುಕಿ 61ಕ್ಕೆ 5 ವಿಕೆಟ್‌ ಕಳೆದುಕೊಂಡು ನೂರರ ಗಡಿ ದಾಟಲು ಪರಡಾಡುತಿದ್ದ ತಂಡಕ್ಕೆ ಆಸರೆಯಾದದ್ದು ನೂತನವಾಗಿ ಆಯ್ಕೆಯಾದ ನಾಯಕ ಇಯಾನ್‌ ಮಾರ್ಗನ್‌ ಮತ್ತು ಆಸೀಸ್‌ ವೇಗಿ ಪ್ಯಾಟ್‌ ಕಮಿನ್ಸ್‌. ಇವರಿಬ್ಬರು ಎಚ್ಚರಿಕೆಯ ಆಟವಾಡಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾದರು. ಮಾರ್ಗನ್‌ಗಿಂತ ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿದ್ದ ಕಮಿನ್ಸ್‌ಗೆ ಡಿ’ ಕಾಕ್‌ ಒಂದು ಜೀವದಾನ ನೀಡಿದರು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಿಸಿಕೊಂಡ ಅವರು 35 ಎಸೆತಗಳಿಂದ ಅರ್ಧಶತಕ ಪೂರೈಸಿದರು. ಇದು ಕಮಿನ್ಸ್‌ ಅವರ ಚೊಚ್ಚಲ ಐಪಿಎಲ್‌ ಅರ್ಧಶತಕವಾಗಿದೆ. ಈ ಜೋಡಿಯಿಂದ ಮುರಿಯದ ವಿಕೆಟಿಗೆ 87 ರನ್‌ ಒಟ್ಟುಗೂಡಿತು. ಮಾರ್ಗನ್‌ 29 ಎಸೆತಗಳಿಂದ ಅಜೇಯ 39 (2 ಬೌಂಡರಿ, 2 ಸಿಕ್ಸರ್‌), ಕಮಿನ್ಸ್‌ ಅಜೇಯ 53 (5 ಬೌಂಡರಿ, 2 ಸಿಕ್ಸರ್‌) ರನ್‌ ಸಿಡಿಸಿದರು.

ಸ್ಕೋರ್‌ ಪಟ್ಟಿ
ಕೆಕೆಆರ್‌
ತ್ರಿಪಾಠಿ ಸಿ ಸೂರ್ಯಕುಮಾರ್‌ ಬಿ ಬೌಲ್ಟ್ 7
ಶುಭಮನ್‌ ಸಿ ಪೊಲಾರ್ಡ್‌ ಬಿ ಚಹರ್‌ 21
ರಾಣ ಸಿ ಡಿ ಕಾಕ್‌ ಬಿ ಕೋಲ್ಟರ್‌ನೆçಲ್‌ 5
ದಿನೇಶ್‌ ಕಾರ್ತಿಕ್‌ ಬಿ ಚಹರ್‌ 4
ಮಾರ್ಗನ್‌ ಔಟಾಗದೆ 39
ರಸೆಲ್‌ ಸಿ ಡಿ ಕಾಕ್‌ ಬಿ ಬುಮ್ರಾ 12
ಪ್ಯಾಟ್‌ ಕಮಿನ್ಸ್‌ ಔಟಾಗದೆ 53

ಇತರ 7
ಒಟ್ಟು (20 ಓವರ್‌ಗಗಳಲ್ಲಿ 5 ವಿಕೆಟಿಗೆ) 148
ವಿಕೆಟ್‌ ಪತನ: 1-18, 2-33, 3-42, 4-42, 5-61, 6-

ಬೌಲಿಂಗ್‌;
ಟ್ರೆಂಟ್‌ ಬೌಲ್ಟ್ 4-0-32-1
ನಥನ್‌ ಕೋಲ್ಟರ್‌ನೆçಲ್‌ 4-0-51-1
ಜಸ್‌ಪ್ರೀತ್‌ ಬುಮ್ರಾ 4-0-22-1
ಕೃಣಾಲ್‌ ಪಾಂಡ್ಯ 4-0-23-0
ರಾಹುಲ್‌ ಚಹರ್‌ 4-0-18-2

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಕಾರ್ತಿಕ್‌ ಬಿ ಮಾವಿ 35
ಡಿ ಕಾಕ್‌ ಔಟಾಗದೆ 78
ಸೂರ್ಯಕುಮಾರ್‌ ಬಿ ಚಕ್ರವರ್ತಿ 10
ಹಾರ್ದಿಕ್‌ ಔಟಾಗದೆ 21

ಇತರ 5
ಒಟ್ಟು( 16.5 ಓವರ್‌ಗಳಲ್ಲಿ 2 ವಿಕೆಟಿಗೆ) 149
ವಿಕೆಟ್‌ ಪತನ: 1-94, 2-111.

ಬೌಲಿಂಗ್‌:
ಕ್ರಿಸ್‌ ಗ್ರೀನ್‌ 2.5-0-24-0
ಪ್ಯಾಟ್‌ ಕಮಿನ್ಸ್‌ 3-0-28-0
ಪ್ರಸಿದ್ಧ ಕೃಷ್ಣ 2-0-30-0
ರಸೆಲ್‌ 2-0-15-0
ವರುಣ್‌ ಚಕ್ರವರ್ತಿ 4-0-23-1
ಶಿವಂ ಮಾವಿ 3-0-24-1

ಟಾಪ್ ನ್ಯೂಸ್

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.