ಈ ಮಕ್ಕಳಿಗೆ ಹೋಲಿಸಿದರೆ ನನ್ನ ದುಃಖ ಏನೂ ಅಲ್ಲ: ಗಂಭೀರ್
Team Udayavani, Apr 29, 2018, 6:30 AM IST
ಹೊಸದಿಲ್ಲಿ: ಟ್ವೀಟರ್ನಲ್ಲಿ ಭಾವುಕ ಟ್ವೀಟೊಂದನ್ನು ಮಾಡಿರುವ ಗೌತಮ್ ಗಂಭೀರ್ ಅದರಲ್ಲಿ ಪರೋಕ್ಷವಾಗಿ ತನ್ನ ನೋವಿನ ಆಳವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಗಂಭೀರ್ ಸಿಆರ್ಪಿಎಫ್ ಯೋಧರ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದರು. ನಕ್ಸಲರ ದಾಳಿಯಲ್ಲಿ ಮೃತರಾದ ಯೋಧರ ಆ ಮಕ್ಕಳನ್ನು ನೋಡಿದಾಗ ನನ್ನ ದುಃಖ ಅದಕ್ಕಿಂತ ಬಹಳ ಕಡಿಮೆ ಎನಿಸಿತು ಎಂದು ಗಂಭೀರ್ ಹೇಳಿಕೊಂಡಿದ್ದಾರೆ. ಇದು ಟ್ವೀಟರ್ನಲ್ಲಿ ಬಹಳ ಸದ್ದು ಮಾಡುತ್ತಿದೆ.
ಹಿಂದಿನ 6 ಐಪಿಎಲ್ ಆವೃತ್ತಿಯಲ್ಲಿ ಕೋಲ್ಕತಾ ತಂಡವನ್ನು ಮುನ್ನಡೆಸಿದ್ದ ಗಂಭೀರ್ ಅದರಲ್ಲಿ 2 ಬಾರಿ ತಂಡ ಟ್ರೋಫಿ ಎತ್ತಿ ಹಿಡಿಯಲು ಕಾರಣವಾಗಿದ್ದರು. ಆದರೆ ಈ ಬಾರಿ ಡೆಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಅವರು ನಾಯಕತ್ವವನ್ನು ವಹಿಸಿದ್ದರು. ಅವರ ನೇತೃತ್ವದಲ್ಲಿ 6 ಪಂದ್ಯವಾಡಿ 5ರಲ್ಲಿ ಡೆಲ್ಲಿ ಸೋತು ಹೋಗಿತ್ತು. ಪರಿಣಾಮ ಅವರು ನಾಯಕತ್ವ ಬಿಡುವುದರ ಜತೆಗೆ, ತಂಡದಿಂದಲೂ ಹೊರಗುಳಿದರು.
ಸ್ವತಃ ಗಂಭೀರ್ ಕೂಡ ಫಾರ್ಮ್ ಕುಸಿತ ಅನುಭವಿಸಿ ಬಹಳ ನೋವಿನಲ್ಲಿದ್ದಾರೆ. ಇದೇ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಗಂಭೀರ್, ಆ ಮಕ್ಕಳ ಕಣ್ಣಿನಲ್ಲಿ ನೀರಿತ್ತು, ಅವರ ಹೃದಯದಲ್ಲಿ ದುಃಖ ತುಂಬಿಕೊಂಡಿತ್ತು. ಅವರೊಂದಿಗೆ ಮಾತನಾಡಿದಾಗ ನನ್ನ ದುಃಖ ಅದಕ್ಕಿಂತ ಬಹಳ ಕಡಿಮೆ ಎನಿಸಿತು ಎಂದು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ