ಉದ್ದೀಪನ ವಿಷಯ: ನಾಡಾ v/s ಬಿಸಿಸಿಐ ವಾಕ್ಸಮರ
Team Udayavani, May 29, 2017, 3:15 PM IST
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ರಾಷ್ಟ್ರೀಯ ಉದ್ದೀಪನ ನಿಗ್ರಹ ತನಿಖಾ ಸಂಸ್ಥೆ (ನಾಡಾ) ನಡುವೆ ಪರಸ್ಪರ ಮಾತಿನ ಚಕಮಕಿ, ಆರೋಪ ಪ್ರತ್ಯಾರೋಪ ನಡೆದ ಘಟನೆ ಸಂಭವಿಸಿದೆ.
ನಾಡಾದ ಪ್ರಧಾನ ನಿರ್ದೇಶಕ ನವಿನ್ ಅಗರ್ವಾಲ್ ಬಹಿರಂಗವಾಗಿ ಬಿಸಿಸಿಐ ಅನ್ನು ತರಾಟೆಗೆ ತೆಗೆದುಕೊಂಡಿದ್ದು ಬಿಸಿಸಿಐ ಅನ್ನು ಕೆರಳಿಸಿದೆ.
ಬಿಸಿಸಿಐ ಉದ್ದೀಪನ ಪರೀಕ್ಷೆ ಮೇಲ್ವಿಚಾರಣೆ ಸರಿಯಾಗಿ ಮಾಡುತ್ತಿಲ್ಲ. ನಡೆಸಿದರೂ ಅದು ಪಾರದರ್ಶಕವಾಗಿ ಇಲ್ಲ
ಎಂದು ಅಗರ್ವಾಲ್ ಆರೋಪಿಸಿದ್ದರು. ಈ ಹೇಳಿಕೆಯನ್ನು ಬಿಸಿಸಿಐ ಪ್ರಧಾನ ಮ್ಯಾನೇಜರ್ ರತ್ನಾಕರ ಶೆಟ್ಟಿ ತಳ್ಳಿ
ಹಾಕಿದ್ದಾರೆ. ಉದ್ದೀಪನಕ್ಕೆ ಸಂಬಂಧಪಟ್ಟಂತೆ ಬಿಸಿಸಿಐ ಕ್ರಮ ತೆಗೆದುಕೊಂಡಿದೆ. ನಾವು ನಿರ್ಲಕ್ಷಿಸಿದ್ದೇವೆ ಎಂದು ನಾಡಾ
ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದಿದ್ದಾರೆ.