ನಾಯರ್‌ ಶತಕ; ಜಯದ ಕನಸಲ್ಲಿ ಕರ್ನಾಟಕ


Team Udayavani, Oct 27, 2017, 8:23 AM IST

27-7.jpg

ಶಿವಮೊಗ್ಗ: ಕರುಣ್‌ ನಾಯರ್‌ ಬಾರಿಸಿದ ಅಮೋಘ ಶತಕ, ಸ್ಟುವರ್ಟ್‌ ಬಿನ್ನಿ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ರಣಜಿ ಪಂದ್ಯದ 3ನೇ ದಿನದಾಟದಲ್ಲಿ ಕರ್ನಾಟಕ ದ್ವಿತೀಯ ಸರದಿಯಲ್ಲಿ 332 ರನ್‌ ಗಳಿಸಿ ಚೇತೋಹಾರಿ ಪ್ರದರ್ಶನವಿತ್ತಿದೆ. ಹೈದರಾಬಾದ್‌ಗೆ 380 ರನ್‌ ಗೆಲುವಿನ ಗುರಿ ನೀಡಿದ್ದು, 92 ರನ್ನಿಗೆ 2 ಪ್ರವಾಸಿಗರ 2 ವಿಕೆಟ್‌ ಬಿದ್ದಿದೆ. 

ಶುಕ್ರವಾರ ಪಂದ್ಯದ ಅಂತಿಮ ದಿನವಾಗಿದ್ದು, ಉಳಿದ 8 ವಿಕೆಟ್‌ ನೆರವಿನಿಂದ ಇನ್ನೂ 288 ರನ್‌ ಗಳಿಸಬೇಕಾದ ಒತ್ತಡ ಹೈದರಾಬಾದ್‌ ಮೇಲಿದೆ. ಎರಡೂ ಪಂದ್ಯ ರದ್ದಾದ್ದರಿಂದ ಅಂಬಾಟಿ ರಾಯುಡು ಪಡೆಗೆ ಸ್ಪಷ್ಟ ಗೆಲು ವೊಂದು ತುರ್ತಾಗಿ ಬೇಕಿದೆ. ಆದರೆ ಶ್ರೇಯಸ್‌ ಗೋಪಾಲ್‌-ಕೃಷ್ಣಪ್ಪ ಗೌತಮ್‌ ಜೋಡಿಯ ಸ್ಪಿನ್‌ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಅಷ್ಟು ಸುಲಭವಲ್ಲ ಎಂಬುದು ಸದ್ಯದ ಲೆಕ್ಕಾಚಾರ. ಉರುಳಿದ ಎರಡೂ ವಿಕೆಟ್‌ಗಳು ಇವರ ಬುಟ್ಟಿಗೇ ಬಿದ್ದಿವೆ. ಅಲ್ಲದೇ ಕರ್ನಾಟಕದ ದ್ವಿತೀಯ ಸರದಿಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದ ಹೈದರಾಬಾದ್‌ನ ಮೆಹಿª ಹಸನ್‌ (88ಕ್ಕೆ 5) ಮತ್ತು ಆಕಾಶ್‌ ಭಂಡಾರಿ (64ಕ್ಕೆ 3) ಇಬ್ಬರೂ ಸ್ಪಿನ್ನರ್‌ಗಳೆಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಕೊನೆಯ ದಿನ “ಸ್ಪಿನ್‌ ಅಟ್ಯಾಕ್‌’ ಆದರೆ ಕರ್ನಾಟಕದ ಸತತ 2ನೇ ಗೆಲುವನ್ನು ನಿರೀಕ್ಷಿಸಲಡ್ಡಿಯಿಲ್ಲ.

ಹೈದರಾಬಾದ್‌ ಈಗಾಗಲೇ ಆರಂಭಕಾರ ಅಕ್ಷತ್‌ ರೆಡ್ಡಿ (15) ಮತ್ತು ಕೀಪರ್‌ ಕೆ. ಸುಮಂತ್‌ (9) ವಿಕೆಟ್‌ ಕಳೆದುಕೊಂಡಿದೆ. ಸುಮಂತ್‌ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ವಾಧಿಕ 68 ರನ್‌ ಹೊಡೆದಿದ್ದರು. ಮತ್ತೂಬ್ಬ ಆರಂಭಕಾರ ತನ್ಮಯ್‌ ಅಗರ್ವಾಲ್‌ 43 ರನ್‌ ಹಾಗೂ ನಾಯಕ ಅಂಬಾಟಿ ರಾಯುಡು 18 ರನ್‌ ಗಳಿಸಿ ಆಡುತ್ತಿದ್ದಾರೆ. ಇವರಿಬ್ಬರು 3ನೇ ವಿಕೆಟಿಗೆ ಈಗಾಗಲೇ 42 ರನ್‌ ಒಟ್ಟುಗೂಡಿಸಿದ್ದಾರೆ. ಈ ಜೋಡಿಯನ್ನು ಬೇಗನೇ ಬೇರ್ಪಡಿಸಿದರೆ ಕರ್ನಾಟಕ ನಿರಾತಂಕ ಓಟ ಬೆಳೆಸಬಹುದು.

ಕರುಣ್‌ ನಾಯರ್‌ ಶತಕದಾಟ
ಟೀಮ್‌ ಇಂಡಿಯಾ ಡ್ನೂಟಿ ಮುಗಿಸಿ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ರಂಜನೀಯ ಶತಕದ ಮೂಲಕ ಕರ್ನಾಟಕಕ್ಕೆ ಆಸರೆಯಾದರು. ಇವರಿಗೆ ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ಉತ್ತಮ ಬೆಂಬಲವಿತ್ತರು. ನಾಯರ್‌ 134 ರನ್‌ ಬಾರಿಸಿದರೆ, ಬಿನ್ನಿ 72 ರನ್‌ ಕೊಡುಗೆ ಸಲ್ಲಿಸಿದರು. ಇವರಿಬ್ಬರ 5ನೇ ವಿಕೆಟ್‌ ಜತೆಯಾಟದಲ್ಲಿ 160 ರನ್‌ ಒಟ್ಟುಗೂಡಿದ್ದರಿಂದ ಕರ್ನಾಟಕ ಸ್ಪಷ್ಟ ಮೇಲುಗೈ ಸಾಧಿಸುವಂತಾಯಿತು.

229 ಎಸೆತಗಳನ್ನು ನಿಭಾಯಿಸಿದ ಕರುಣ್‌ ನಾಯರ್‌ 17 ಬೌಂಡರಿ ನೆರವಿನಿಂದ 134 ರನ್‌ ಬಾರಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಯರ್‌ ಹೊಡೆದ 11ನೇ ಶತಕ. 37 ರನ್ನಿನಿಂದ ಅವರು ಬ್ಯಾಟಿಂಗ್‌ ಮುಂದುವರಿಸಿದ್ದರು. 26 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಬಿನ್ನಿ 144 ಎಸೆತಗಳಿಂದ 72 ರನ್ನುಗಳ ಅಮೂಲ್ಯ ಇನ್ನಿಂಗ್ಸ್‌ ಕಟ್ಟಿದರು. ಇದರಲ್ಲಿ 8 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ಇವರಿಬ್ಬರು ತಂಡದ ಮೊತ್ತವನ್ನು 57ರಿಂದ 217ರ ತನಕ ವಿಸ್ತರಿಸಿದರು. ನಾಯರ್‌ ಕೊನೆಯವರಾಗಿ ಪೆವಿಲಿಯನ್‌ ಸೇರಿಕೊಂಡರು. ಸಿ.ಎಂ. ಗೌತಮ್‌ 21, ವಿನಯ್‌ ಕುಮಾರ್‌ 14, ಎಸ್‌. ಅರವಿಂದ್‌ 10 ರನ್‌ ಮಾಡಿ ಔಟಾದರು. ಕರ್ನಾಟಕ 4ಕ್ಕೆ 127 ರನ್‌ ಗಳಿಸಿದಲ್ಲಿಂದ ಗುರುವಾರದ ಆಟ ಮುಂದುವರಿಸಿತ್ತು.

ನಾಯರ್‌-ಬಿನ್ನಿ ಹೊರತುಪಡಿಸಿದರೆ ಕರ್ನಾಟಕದ ಸರದಿಯಲ್ಲಿ ನಾಲ್ವರು ಖಾತೆ ಯನ್ನೇ ತೆರೆಯದಿದ್ದುದನ್ನು “ದೊಡ್ಡ ಸುದ್ದಿ’ ಎನ್ನಲಡ್ಡಿಯಿಲ್ಲ. ಇವರೆಂದರೆ ಮಾಯಾಂಕ್‌ ಅಗರ್ವಾಲ್‌, ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌ ಮತ್ತು ಅಭಿಮನ್ಯು ಮಿಥುನ್‌. ಇವರಲ್ಲಿ ಅಗರ್ವಾಲ್‌ ಅವರದು ಎರಡೂ ಇನ್ನಿಂಗ್ಸ್‌ಗಳಲ್ಲಿ ಶೂನ್ಯ ಸಂಪಾದನೆ!

ಸಂಕ್ಷಿಪ್ತ ಸ್ಕೋರ್‌: 
ಕರ್ನಾಟಕ-183 ಮತ್ತು 332 
(ನಾಯರ್‌ 134, ಬಿನ್ನಿ 72, ಸಮರ್ಥ್ 29, ರಾಹುಲ್‌ 23, ಸಿ.ಎಂ. ಗೌತಮ್‌ 21, ಮೆಹಿª ಹಸನ್‌ 88ಕ್ಕೆ 5, ಆಕಾಶ್‌ ಭಂಡಾರಿ 64ಕ್ಕೆ 3). ಹೈದರಾಬಾದ್‌-136 ಮತ್ತು 2 ವಿಕೆಟಿಗೆ 92 (ತನ್ಮಯ್‌ ಅಗರ್ವಾಲ್‌ ಬ್ಯಾಟಿಂಗ್‌ 43, ರಾಯುಡು ಬ್ಯಾಟಿಂಗ್‌ 18, ಗೌತಮ್‌ 32ಕ್ಕೆ 1, ಶ್ರೇಯಸ್‌ 21ಕ್ಕೆ 1).

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.