ಧವನ್ ಪಡೆಗೆ ಮತ್ತೊಂದು ಆಘಾತ: ಮತ್ತೋರ್ವ ಆಟಗಾರ ತಂಡದಿಂದ ಹೊರಕ್ಕೆ!
Team Udayavani, Jul 29, 2021, 3:23 PM IST
ಕೊಲಂಬೋ: ಕೋವಿಡ್ ಕಾರಣದಿಂದ ಸರಿಯಾದ ಆಟಗಾರರಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಶಿಖರ್ ಧವನ್ ಪಡೆಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ. ಎರಡನೇ ಟಿ20 ಪಂದ್ಯದಲ್ಲಿ ಗಾಯಗೊಂಡಿದ್ದ ನವದೀಪ್ ಸೈನಿ ಮೂರನೇ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಭಾರತ ಮತ್ತು ಲಂಕಾ ನಡುವಿನ ಅಂತಿಮ ಟಿ 20 ಪಂದ್ಯ ಇಂದು (ಗುರುವಾರ) ನಡೆಯಲಿದೆ. ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆಲುವು ಸಾಧಿಸಿತ್ತು. ಸರಣಿ ಸಮಬಲವಾಗಿದ್ದು, ಇಂದು ಫೈನಲ್ ರೀತಿಯಂತೆ ಪಂದ್ಯ ನಡೆಯಲಿದೆ.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು
ಎರಡನೇ ಟಿ 20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ನವದೀಪ್ ಸೈನಿ ಗಾಯಗೊಂಡಿದ್ದರು. ಎಕ್ಸ್ಟಾ ಕವರ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸೈನಿ ಚೆಂಡಿಗಾಗಿ ಹಾರಿದರು. ಈ ವೇಳೆ ರಭಸವಾಗಿ ನೆಲಕ್ಕೆ ಬಿದ್ದ ಕಾರಣ ಗಾಯಗೊಂಡಿದ್ದರು.
Get well soon Navdeep Saini!!#SLvsIND pic.twitter.com/o2rgXfD7rT
— eSports Hub (@sportsworld1231) July 28, 2021
ಮೊದಲೇ ಆಟಗಾರರ ಅಲಭ್ಯತೆಯಿಂದ ಸಂಕಷ್ಟ ಅನುಭವಿಸುತ್ತಿರುವ ಧವನ್ ಗೆ ಇದು ಮತ್ತಷ್ಟು ತಲೆನೋವು ತಂದಿದೆ. ಒಂದು ವೇಳೆ ಸೈನಿ ಫಿಟ್ ಇಲ್ಲದೇ ಇದ್ದರೆ ನೆಟ್ ಬೌಲರ್ ಆಗಿ ಲಂಕಾಗೆ ತೆರಳಿರುವ ಅರ್ಶ್ ದೀಪ್ ಸಿಂಗ್ ಅಥವಾ ಸಂದೀಪ್ ವಾರಿಯರ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್