ಭುವಿ, ಸಹಾಗೆ ಚಿಕಿತ್ಸೆ ನೀಡಲು ವಿಫಲ; ಎನ್ಸಿಎನಲ್ಲಿ ವೈದ್ಯಕೀಯ ಮಂಡಳಿ ಸ್ಥಾಪನೆ
Team Udayavani, Jan 3, 2020, 3:33 PM IST
ನವದೆಹಲಿ: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿನ ಸುಧಾರಣೆಗೆ ಬಿಸಿಸಿಐ ಬಲವಾದ ಹೆಜ್ಜೆಯಿಟ್ಟಿದೆ.
ವೇಗಿ ಭುವನೇಶ್ವರ್ ಕುಮಾರ್, ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ವಿಫಲವಾಗಿರುವ ಆರೋಪ ಎದುರಿಸುತ್ತಿರುವ ಎನ್ ಸಿಎಗೆ,ಪ್ರತ್ಯೇಕ ವೈದ್ಯಕೀಯ ಮಂಡಳಿಯನ್ನು ಒದಗಿಸಲು ಬಿಸಿಸಿಐ ನಿರ್ಧರಿಸಿದೆ. ಮುಂದಿನ 18 ತಿಂಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮುಗಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ.
ಎನ್ಸಿಎನಲ್ಲಿ ಸೂಕ್ತ ವೈದ್ಯಕೀಯ ಮಂಡಳಿ ನೆಲೆಗೊಳಿಸಲು, ಬಿಸಿಸಿಐ ಇಂಗ್ಲೆಂಡ್ನ ಲಂಡನ್ ಮೂಲದ ಫೋರ್ಟಿಯಸ್ ಆಸ್ಪತ್ರೆಯನ್ನು ಸಂಪರ್ಕಿಸಲು ತೀರ್ಮಾನಿಸಿದೆ. ಇದರ ಜೊತೆಗೆ ವೇಗದ ಬೌಲಿಂಗ್ ಮುಖ್ಯ ತರಬೇತುದಾರ, ಪೌಷ್ಟಿಕ ಆಹಾರವನ್ನು ನಿರ್ಧರಿಸಲು ಒಬ್ಬ ಮುಖ್ಯಸ್ಥ, ಎನ್ಸಿಎ ವಿಚಾರಗಳನ್ನು ಸಾಮಾಜಿಕ ತಾಣಗಳಿಗೆ ತಲುಪಿಸಲು ಒಬ್ಬ ಮುಖ್ಯಸ್ಥರನ್ನು ನೇಮಿಸಲಾಗುವುದು ತಿಳಿಸಲಾಗಿದೆ.
ಎನ್ ಸಿಎನಲ್ಲಿ ದೋಷವಿದೆ ಎಂಬ ಎಲ್ಲ ವರದಿ, ಟೀಕೆಗಳ ಹೊರತಾ ಗಿಯೂ ಸೌರವ್ ಗಂಗೂಲಿ, ಎನ್ಸಿಎಗೆ ತೆರಳಿಯೇ ಬಿಸಿಸಿಐ ಗುತ್ತಿಗೆ ಹೊಂದಿರುವ ಭಾರತೀಯ ಕ್ರಿಕೆಟಿಗರು ಚಿಕಿತ್ಸೆಗೊಳಗಾಗಬೇಕು ತಿಳಿಸಿದ್ದಾರೆ. ಇದಕ್ಕೂ ಮುನ್ನ ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಜೊತೆ ವಿವರವಾಗಿ ಚರ್ಚಿಸಿದ್ದಾರೆ.
ವಿವಾದವೇನು?
ವೇಗಿ ಭುವನೇಶ್ವರ್ ಕುಮಾರ್ಗೆ ತೊಡೆಸಂದಿಯಲ್ಲಿ ಹರ್ನಿಯಾ ಇದ್ದಿದ್ದನ್ನು ಪತ್ತೆಹಚ್ಚಲು ಎನ್ಸಿಎ ವೈದ್ಯರು ವಿಫಲರಾಗಿದ್ದರು. ಅವರು ಸುಧಾರಿಸಿ ಕೊಂಡಿದ್ದಾರೆಂದು ವೈದ್ಯರು ಘೋಷಿಸಿದ ನಂತರ, ಭುವನೇಶ್ವರ್ ಮತ್ತೆ ಬೌಲಿಂಗ್ ಆರಂಭಿಸಿ ಎರಡೇ ಪಂದ್ಯಕ್ಕೆ ಗಾಯಗೊಂಡು ವಿಶ್ರಾಂತಿಗೆ ತೆರಳಿದ್ದಾರೆ. ಇದರಿಂದ ಎನ್ಸಿಎ ಭಾರೀ ಟೀಕೆಗೊಳಪಟ್ಟಿತ್ತು.
ಅದಕ್ಕೂ ಮುನ್ನ ವಿಕೆಟ್ ಕೀಪರ್ ವೃದ್ಧಿಮಾನ್ ಸುಧಾರಣೆ ಮಾಡುವಲ್ಲೂ ವಿಫಲವಾಗಿತ್ತು. ಇದರಿಂದ ಹೆದರಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರೀತ್ ಬುಮ್ರಾ ತಾವು ಎನ್ಸಿಎನಲ್ಲಿ ಚಿಕಿತ್ಸೆಗೊಳಗಾಗಲು ನಿರಾಕರಿಸಿದರು. ಲಂಡನ್ ವೈದ್ಯರಿಂದ ಖಾಸಗಿಯಾಗಿ ಚಿಕಿತ್ಸೆ ಪಡೆದರು. ಇದರಿಂದ ಎನ್ಸಿಎ ಸಿಬ್ಬಂದಿ ಮುಜುಗರಕ್ಕೊಳಗಾದರು.
ಈ ಸಂದರ್ಭದಲ್ಲಿ ಬುಮ್ರಾರನ್ನು ಅಂತಿಮಪರೀಕ್ಷೆಗೊಳಪಡಿಸಿ ಪ್ರಮಾಣಪತ್ರ ನೀಡಲು, ಈಗಷ್ಟೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿರುವ ರಾಹುಲ್ ದ್ರಾವಿಡ್ ಕೂಡ ನಿರಾಕರಿಸಿದರು. ಇವೆಲ್ಲ ಘಟನೆಗಳ ಪರಿಣಾಮ ವೈದ್ಯಕೀಯ ನೇಮಕ ಮಾಡಲು ಬಿಸಿಸಿಐ ನಿರ್ಧರಿಸುವಲ್ಲಿ ಮುಕ್ತಾಯವಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!