ಟಿ20 ಸರಣಿ ಮೇಲೆ ಭಾರತದ ಕಣ್ಣು


Team Udayavani, Feb 18, 2022, 6:40 AM IST

ಟಿ20 ಸರಣಿ ಮೇಲೆ ಭಾರತದ ಕಣ್ಣು

ಕೋಲ್ಕತಾ: ಭಾರತಕ್ಕೆ ಪ್ರವಾಸ ಬಂದಂದಿನಿಂದ ಬರೀ ಸೋಲನ್ನೇ ಹೊತ್ತುಕೊಂಡಿರುವ ವೆಸ್ಟ್‌ ಇಂಡೀಸ್‌, ಶುಕ್ರವಾರ ಮತ್ತೂಂದು ಸರಣಿ ಸೋಲಿನ ಮುಖಭಂಗದಿಂದ ಪಾರಾಗಬೇಕಾದ ಚಿಂತೆಯಲ್ಲಿದೆ. ಟೀಮ್‌ ಇಂಡಿಯಾ ವಿರುದ್ಧದ ದ್ವಿತೀಯ ಟಿ20 ಮುಖಾಮುಖೀ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆಯಲಿದ್ದು, ಶತಪ್ರಯತ್ನ ಮಾಡಿಯಾದರೂ ಗೆಲ್ಲುವ ಯೋಜನೆ ಪೊಲಾರ್ಡ್‌ ಪಡೆಯದ್ದು. ಇನ್ನೊಂದೆಡೆ ರೋಹಿತ್‌ ಬಳಗ ಎರಡೇ ಪಂದ್ಯಗಳಲ್ಲಿ ಸರಣಿ ಜಯಭೇರಿ ಮೊಳಗಿಸಲು ತುದಿಗಾಲಲ್ಲಿ ನಿಂತಿದೆ.

ಇಂಗ್ಲೆಂಡ್‌ ಎದುರಿನ ತವರಿನ ಟಿ20 ಸರಣಿಯನ್ನು 3-2ರಿಂದ ಗೆದ್ದ ಸ್ಫೂರ್ತಿಯಲ್ಲಿದ್ದ, ಎರಡು ಬಾರಿಯ ಟಿ20 ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡೀತು ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ಮೊದಲ ಮುಖಾಮುಖೀಯನ್ನು 6 ವಿಕೆಟ್‌ಗಳಿಂದ ಕಳೆದುಕೊಂಡಿತು. ಬಲಾಡ್ಯ ತಂಡವನ್ನು ಹೊಂದಿದ್ದೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಂಡೀಸ್‌ ಎಡವಿದೆ. ಪಂದ್ಯಗಳೆಲ್ಲವೂ ಏಕಪಕ್ಷೀಯವಾಗಿ ಸಾಗಿವೆ. ಹೀಗಾಗಿ ಭಾರತವೇ ಮತ್ತೆ ನೆಚ್ಚಿನ ತಂಡವೆಂಬುದರಲ್ಲಿ ಅನುಮಾನವಿಲ್ಲ. ಶುಕ್ರವಾರವೂ ಭಾರತ ಗೆದ್ದರೆ ರೋಹಿತ್‌ ಶರ್ಮ ನಾಯಕತ್ವದಲ್ಲಿ ಸತತ 3ನೇ ಸರಣಿ ಒಲಿದಂತಾಗುತ್ತದೆ.

6 ಮಂದಿ ಬೌಲರ್ :

ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ ಸೇರಿದಂತೆ 6 ಮಂದಿ ಬೌಲರ್‌ಗಳ ಕಾಂಬಿನೇಶನ್‌ನಿಂದಾಗಿ ಇನ್‌ಫಾರ್ಮ್ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಹೊರಗುಳಿಯುವಂತಾಗಿದೆ. ಭಾರತದ ಮಿಡ್ಲ್ ಆರ್ಡರ್‌ ಗಟ್ಟಿಗೊಳ್ಳಬೇಕಾದರೆ ಶ್ರೇಯಸ್‌ ಸೇರ್ಪಡೆ ಅಗತ್ಯವೆನಿಸುತ್ತದೆ.

ಪೇಸ್‌ ಬೌಲರ್‌ ದೀಪಕ್‌ ಚಹರ್‌ ಮೊದಲ ಪಂದ್ಯ ವೇಳೆ ಕೈಗೆ ಏಟು ಮಾಡಿಕೊಂಡಿದ್ದು, ಆಡು ವುದು ಖಾತ್ರಿಯಾಗಿಲ್ಲ. ಆಗ ಸಿರಾಜ್‌ ಅಥವಾ ಆವೇಶ್‌ ಖಾನ್‌ ಅವಕಾಶ ಪಡೆಯಬಹುದು. ಸ್ಪಿನ್‌ ವಿಭಾಗದಲ್ಲಿ ಚೊಚ್ಚಲ ಪಂದ್ಯವಾಡಿದ ರವಿ ಬಿಷ್ಣೋಯಿ ಉತ್ತಮ ನಿಯಂತ್ರಣ ಸಾಧಿಸಿದ್ದಾರೆ. ಚಹಲ್‌ ತುಸು ದುಬಾರಿಯಾಗಿದ್ದಾರೆ. ಮೂರನೇ ಆಯ್ಕೆಯಾಗಿರುವವರು ಕುಲದೀಪ್‌ ಯಾದವ್‌.

ಕೊಹ್ಲಿ ಬ್ಯಾಟಿಂಗ್‌ ಚಿಂತೆ :

ಸದ್ಯ ಭಾರತದ ದೊಡ್ಡ ಸಮಸ್ಯೆಯೆಂದರೆ ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ ಫಾರ್ಮ್. ವಿಂಡೀಸ್‌ ಎದುರಿನ 4 ಪಂದ್ಯಗಳಲ್ಲಿ ಅವರ ಗಳಿಕೆ 8, 18, 0 ಮತ್ತು 17 ರನ್‌ ಮಾತ್ರ. ಒಂದೆಡೆ ಕೊಹ್ಲಿ ಸತತ ವೈಫ‌ಲ್ಯ ಕಾಣುತ್ತ ಹೋಗುವುದು, ಇನ್ನೊಂದೆಡೆ ಉಜ್ವಲ

ಫಾರ್ಮ್ನಲ್ಲಿರುವ ಋತುರಾಜ್‌ ಗಾಯಕ್ವಾಡ್‌ ಅವರಂಥವರನ್ನು ಕಡೆಗಣಿಸುತ್ತಲೇ ಇರುವುದು ಅಭಿಮಾನಿಗಳಿಗೆ ಕಿರಿಕಿರಿ ಉಂಟುಮಾಡಿರುವುದು ಸುಳ್ಳಲ್ಲ.

ಮೊದಲ ಪಂದ್ಯದಲ್ಲಿ ರೋಹಿತ್‌ ಶರ್ಮ ಜತೆ ಇನ್ನಿಂಗ್ಸ್‌ ಆರಂಭಿಸಿದ, ಐಪಿಎಲ್‌ನ 15.25 ಕೋಟಿ ರೂ.ಗಳ ಒಡೆಯ ಇಶಾನ್‌ ಕಿಶನ್‌ ತೀರಾ ಸಾಮಾನ್ಯ ಆಟಗಾರನಂತೆ ಕಂಡುಬಂದರು. ಭಾರತ ಪವರ್‌ ಪ್ಲೇ ಅವಧಿಯಲ್ಲಿ ಗಳಿಸಿದ 58 ರನ್ನುಗಳಲ್ಲಿ ರೋಹಿತ್‌ ಅವರದೇ ಸಿಂಹಪಾಲಾಗಿತ್ತು. ಶುಕ್ರವಾರ ಗಾಯಕ್ವಾಡ್‌ಗೆ ಒಂದು ಅವಕಾಶ ಕೊಟ್ಟು ನೋಡಬಾರದೇಕೆ ಎಂಬುದು ಎಲ್ಲರ ಪ್ರಶ್ನೆ. ಹಾಗೆಯೇ ಮಧ್ಯಮ ಕ್ರಮಾಂಕವನ್ನು ಸುಧಾರಿಸಿಕೊಳ್ಳಬೇಕಾದುದು ಭಾರತದ ಪಾಲಿನ ತುರ್ತು ಅಗತ್ಯ. ಇಲ್ಲಿ ಕೊಹ್ಲಿ ಸತತ ವೈಫ‌ಲ್ಯ ಅನುಭವಿಸುತ್ತಿರುವಾಗ ಮತ್ತೆ ಮತ್ತೆ ರಿಷಭ್‌ ಪಂತ್‌ಗೆ ಭಡ್ತಿ ಕೊಡುವ ಬಗ್ಗೆ ಆಕ್ಷೇಪಗಳಿವೆ. ಪಂತ್‌ ಕೂಡ ಅಗ್ಗಕ್ಕೆ ಔಟಾಗುವುದರಿಂದ ಮಿಡ್ಲ್ ಆರ್ಡರ್‌ನಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಮೊದಲ ಪಂದ್ಯದಲ್ಲೇನೋ ಸೂರ್ಯಕುಮಾರ್‌ ಯಾದವ್‌-ವೆಂಕಟೇಶ್‌ ಅಯ್ಯರ್‌ ಪರಿಸ್ಥಿತಿಯನ್ನು ನಿಭಾಯಿಸಿದರು.

ಹೋಲ್ಡರ್‌ ಕಣಕ್ಕೆ? :

ಮೊದಲ ಪಂದ್ಯದಲ್ಲಿ ವಿಂಡೀಸ್‌ ಬ್ಯಾಟಿಂಗ್‌ ಸರದಿಯಲ್ಲಿ ಸಿಡಿದು ನಿಂತದ್ದು ನಿಕೋಲಸ್‌ ಪೂರಣ್‌ ಮಾತ್ರ. ಇವರಂತೆ ಮತ್ತೋರ್ವ ಬ್ಯಾಟರ್‌ ಮುನ್ನುಗ್ಗಿ ಬಾರಿಸಿದ್ದರೆ ವಿಂಡೀಸ್‌ ಬೃಹತ್‌ ಮೊತ್ತ ಪೇರಿಸಬಹುದಿತ್ತು. ಆದರೂ ಪೂರಣ್‌-ಪೊಲಾರ್ಡ್‌ ಪರಾಕ್ರಮದಿಂದ ವಿಂಡೀಸ್‌ ಅಂತಿಮ 5 ಓವರ್‌ಗಳಲ್ಲಿ 61 ರನ್‌ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಭಾರತದ ಡೆತ್‌ ಓವರ್‌ ಬೌಲಿಂಗ್‌ಗೆ ಇದೊಂದು ಹಿನ್ನಡೆ. ದ್ವಿತೀಯ ಪಂದ್ಯದಲ್ಲಿ ಜೇಸನ್‌ ಹೋಲ್ಡರ್‌ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಆಗ ವೆಸ್ಟ್‌ ಇಂಡೀಸ್‌ ಹೆಚ್ಚು ಬಲಿಷ್ಠವಾಗಿ ಗೋಚರಿಸುವುದರಲ್ಲಿ ಅನುಮಾನವಿಲ್ಲ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.