ಕಂಚು ಗೆದ್ದರೂ ಕ್ಷಮೆಯಾಚಿಸಿದ ಪೂಜಾಗೆ ಪ್ರಧಾನಿ ಮೋದಿ ಸಾಂತ್ವನ
ಪದಕ ಸಂಭ್ರಮಾಚರಣೆಯನ್ನು ಕೇಳುತ್ತಿದೆ, ಕ್ಷಮೆಯನ್ನಲ್ಲ...
Team Udayavani, Aug 7, 2022, 10:00 PM IST
ಹೊಸದಿಲ್ಲಿ: ಭಾರತೀಯ ಕ್ರೀಡಾಪಟುಗಳನ್ನು ಉತ್ತೇಜಿಸುವುದರಲ್ಲಿ ಅತೀ ಹೆಚ್ಚು ಆಸಕ್ತಿವಹಿಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದರೆ ತಪ್ಪಾಗುವುದಿಲ್ಲ. ಸ್ಪರ್ಧಿಗಳು ತರಬೇತಿ ನಡೆಸಲು ಆರ್ಥಿಕ ನೆರವು ನೀಡುವುದು, ಹೊರಡುವ ಮುಂಚೆ ಒಮ್ಮೆ ಎಲ್ಲರೊಂದಿಗೆ ಸಂವಾದ ಮಾಡುವುದು, ಕೂಟ ಮುಗಿದ ಮೇಲೆ ಮತ್ತೂಮ್ಮೆ ಸಂವಾದ ಮಾಡುವುದನ್ನು ಮೋದಿ ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಕಾಮನ್ವೆಲ್ತ್ನಲ್ಲಿ ಅವರು ದುಃಖತಪ್ತ ಸ್ಪರ್ಧಿಗೆ ಸಾಂತ್ವನ ಹೇಳಿಯೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶನಿವಾರ ಪೂಜಾ ಗೆಹ್ಲೋ ಟ್ 50 ಕೆ.ಜಿ. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದರು. ಚಿನ್ನ ತಪ್ಪಿಸಿಕೊಂಡ ಬೇಸರದಲ್ಲಿ ಅವರು ಕ್ಷಮೆ ಕೇಳಿದರು.
“ನಾನಿಲ್ಲಿ ರಾಷ್ಟ್ರಗೀತೆ ಕೇಳಿಸಬೇಕೆಂಬ ಆಸೆಯಿಟ್ಟುಕೊಂಡಿದ್ದೆ. ಅದು ಸಾಧ್ಯವಾಗಲಿಲ್ಲ. ನನ್ನ ಸಹ ಆಟಗಾರರಲ್ಲಿ ಕ್ಷಮೆ ಕೇಳುತ್ತೇನೆ. ತಪ್ಪುಗಳಿಂದ ಕಲಿಯುತ್ತೇನೆ’ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಪೂಜಾ ನಿಮ್ಮ ಪದಕ ಸಂಭ್ರಮಾಚರಣೆಯನ್ನು ಕೇಳುತ್ತಿದೆ, ಕ್ಷಮೆಯನ್ನಲ್ಲ.ನಿಮ್ಮ ಜೀವನ ನಮಗೆ ಸ್ಫೂರ್ತಿ, ನಿಮ್ಮ ಯಶಸ್ಸು ನಮಗೆ ಆನಂದ ನೀಡಿದೆ. ಮಹತ್ತಾದುದನ್ನು ಸಾಧಿಸಲು ನೀವು ಸಜ್ಜಾಗಿದ್ದೀರಿ, ಹೀಗೆಯೇ ಮಿಂಚುತ್ತ ಇರಿ ಎಂದಿದ್ದಾರೆ. ಅವರ ಈ ಸಾಂತ್ವನದ ಟ್ವೀಟ್ ಭಾರತೀಯ ಕ್ರೀಡಾವಲಯದಲ್ಲಿ ಸಂಚಲನ ಉಂಟು ಮಾಡಿದೆ.
Pooja, your medal calls for celebrations, not an apology. Your life journey motivates us, your success gladdens us. You are destined for great things ahead…keep shining! ⭐️ https://t.co/qQ4pldn1Ff
— Narendra Modi (@narendramodi) August 7, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್