ಭಾರತ ಕ್ರಿಕೆಟ್‌ ತಂಡಕ್ಕೆ ನೂತನ ಕೋಚ್‌?


Team Udayavani, Mar 21, 2019, 12:35 AM IST

ban21031911medn.jpg

ಮುಂಬೈ: ಭಾರತ ಕ್ರಿಕೆಟ್‌ ತಂಡದ ತರಬೇತುದಾರರಾಗಿ ಯಶಸ್ಸು ಹಾಗೂ ವೈಫ‌ಲ್ಯಗಳನ್ನು ಸರಿಸಮನಾಗಿ ಕಂಡಿರುವ ರವಿಶಾಸ್ತ್ರಿ, ತರಬೇತುದಾರನ ಸ್ಥಾನದಿಂದ ಹೊರಹೋಗಲಿದ್ದಾರ? ಹೀಗೊಂದು ಅನುಮಾನ ಮೂಡಿದೆ. 

ಈ ವರ್ಷ ಜುಲೈ 14ರಷ್ಟೊತ್ತಿಗೆ ಏಕದಿನ ವಿಶ್ವಕಪ್‌ ಮುಗಿಯಲಿದೆ. ಅಲ್ಲಿಗೆ ರವಿಶಾಸ್ತ್ರಿ ಅವಧಿ ಮುಗಿಯಲಿದೆ. ಶಾಸ್ತ್ರಿಯವರನ್ನೇ ಮತ್ತೆ ಭಾರತ ಕ್ರಿಕೆಟ್‌ ತಂಡದ ತರಬೇತುದಾರನಾಗಿ ಮುಂದುವರಿಸುವ ಬದಲು, ಹುದ್ದೆಗೆ ಮತ್ತೆ ಅರ್ಜಿಗಳನ್ನು ಆಹ್ವಾನಿಸುವ ಸುಳಿವನ್ನು ಬಿಸಿಸಿಐ ನೀಡಿದ್ದು ಎಲ್ಲ ಊಹಾಪೋಹಗಳಿಗೆ ಕಾರಣ.

ಭಾರತ ಕ್ರಿಕೆಟ್‌ ತಂಡದ ತರಬೇತುದಾರನಾಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದು, ಭಾರೀ ವಿವಾದದ ನಡುವೆ. ಅಷ್ಟೆಲ್ಲ ವಿವಾದ ಎಬ್ಬಿಸಿ ಸ್ಥಾನ ಪಡೆದ ಅವರು ಉತ್ತಮ ಸಾಧನೆ ಮಾಡಿದ್ದಾರೆ ಎನ್ನಲು ಅಡ್ಡಿಯಿಲ್ಲ. ಅವರ ಅವಧಿಯಲ್ಲಿ ಇಂಗ್ಲೆಂಡ್‌ನ‌ಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತಿದ್ದು, ದ.ಆಫ್ರಿಕಾದಲ್ಲೂ ಟೆಸ್ಟ್‌ ಸರಣಿ ಕಳೆದುಕೊಂಡಿದ್ದು ಕಹಿ ನೆನಪು. ಆದರೆ ದ.ಆಫ್ರಿಕಾ ಟಿ20 ಹಾಗೂ ಏಕದಿನ ಸರಣಿಯಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದ್ದು ಎಲ್ಲ ಬೇಸರವನ್ನು ಮರೆಸಿತು. ಇತ್ತೀಚೆಗಷ್ಟೇ ಆಸ್ಟ್ರೇಲಿಯಕ್ಕೆ ತೆರಳಿದ್ದ ಭಾರತ ತಂಡ ಅಲ್ಲಿ ಟೆಸ್ಟ್‌ ಹಾಗೂ ಏಕದಿನ ಎರಡೂ ಸರಣಿಗಳನ್ನು ಐತಿಹಾಸಿಕವಾಗಿ ಗೆದ್ದುಕೊಂಡಿತ್ತು. ಹಿಂದಿನ ಯಾವ ಭಾರತೀಯ ತಂಡಗಳೂ ಈ ಸಾಧನೆ ಮಾಡಿಲ್ಲ. ಬೆನ್ನಿಗೇ ನ್ಯೂಜಿಲೆಂಡ್‌ಗೆ ತೆರಳಿದ್ದ ಭಾರತ ಅಲ್ಲಿ ಐತಿಹಾಸಿಕವಾಗಿ ಏಕದಿನ ಸರಣಿ ಗೆದ್ದುಕೊಂಡಿತ್ತು. ಅದರ ಬೆನ್ನಲ್ಲೇ ತನ್ನ ನೆಲದಲ್ಲೇ ಆಸ್ಟ್ರೇಲಿಯ ವಿರುದ್ಧ ಭಾರತ ಏಕದಿನ, ಟಿ20 ಎರಡೂ ಸರಣಿಗಳನ್ನು ಕಳೆದುಕೊಂಡಿತು. ಇದು ಶಾಸ್ತ್ರಿ ತರಬೇತುದಾರನ ಸಾಮರ್ಥ್ಯದ ಜೊತೆಗೆ, ಕೊಹ್ಲಿ ನಾಯಕತ್ವದ ಸಾಮರ್ಥ್ಯದ ಮೇಲೂ ಅನುಮಾನ ಮೂಡಿಸಿದ ಸರಣಿ.

ಮತ್ತೆ ಅರ್ಜಿ ಕರೆದಿದ್ದೇಕೆ?: ರವಿಶಾಸ್ತ್ರಿ ಜೊತೆಗೆ ನಾಯಕ ಕೊಹ್ಲಿ ಸಂಬಂಧ ಚೆನ್ನಾಗಿಯೇ ಇದೆ. ತಂಡದ ಪ್ರದರ್ಶನವೂ ಉತ್ತಮವಾಗಿಯೇ ಇದೆ. ಭಾರತ ಪ್ರಸ್ತುತ ಏಕದಿನ ವಿಶ್ವಕಪ್‌ ಗೆಲ್ಲುವ ಮೆಚ್ಚಿನ ತಂಡವೂ ಹೌದು. ಇಷ್ಟೆಲ್ಲ ಇದ್ದರೂ ನೂತನ ತರಬೇತುದಾರನ ಆಯ್ಕೆಗೆ ಅರ್ಜಿ ಕರೆಯುವ ಸಂಭಾವ್ಯತೆ ಬಂದಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ. ರವಿಶಾಸ್ತ್ರಿಯೊಂದಿಗೆ ಇನ್ನೊಮ್ಮೆ ಮಾತುಕಥೆ ನಡೆಸಿ ಅವರನ್ನೇ ಮುಂದುವರಿಸುವ ಆಸಕ್ತಿ ಬಿಸಿಸಿಐಗಿಲ್ಲವೇ? ಅಥವಾ ರವಿಶಾಸ್ತ್ರಿಗೇ ಈ ಹುದ್ದೆಯಲ್ಲಿ ಮುಂದುವರಿಯುವ ಆಸಕ್ತಿಯಿಲ್ಲವೇ ಎಂಬ ಅನುಮಾನಗಳೂ ಮೂಡಿವೆ. ಅರ್ಜಿ ಕರೆಯುವ ಪ್ರಕ್ರಿಯೆಯನ್ನು ಕೇವಲ ಶಿಷ್ಟಾಚಾರವಾಗಿ ಬಿಸಿಸಿಐ ಪಾಲಿಸುತ್ತಿದೆಯೇ? ಇಲ್ಲಿ ಅಂತಿಮವಾಗಿ ರವಿಶಾಸ್ತ್ರಿಯೇ ಆಯ್ಕೆಯಾಗಲಿದ್ದಾರೆಯೇ ಎಂಬ ಕುತೂಹಲವೂ ಇದೆ.

ಕುಂಬ್ಳೆ-ರವಿಶಾಸ್ತ್ರಿಆಯ್ಕೆ ಜಟಾಪಟಿ
2014ರಿಂದ 2016ರವರೆಗೆ ರವಿಶಾಸ್ತ್ರಿ ಭಾರತ ತಂಡದ ನಿರ್ದೇಶಕರಾಗಿದ್ದರು. ಆ ಅವಧಿಯಲ್ಲಿಯೂ ಭಾರತ ತಂಡದ್ದು, ಸರಾಸರಿ ಪ್ರದರ್ಶನ. ಮುಂದೆ ಬಿಸಿಸಿಐ ಅರ್ಜಿ ಆಹ್ವಾನಿಸಿದಾಗ, ಅನಿಲ್‌ ಕುಂಬ್ಳೆ ದಿಢೀರೆಂದು ರವಿಶಾಸ್ತ್ರಿಯನ್ನು ಹಿಂದಿಕ್ಕಿ 2016ರಲ್ಲಿ ತರಬೇತುದಾರನಾಗಿ ಆಯ್ಕೆಯಾದರು. ಆಗ ಗಂಗೂಲಿ-ರವಿಶಾಸ್ತ್ರಿ ನಡುವೆ ಭಾರೀ ವಿವಾದ ಸಂಭವಿಸಿತ್ತು. ಕುಂಬ್ಳೆ 2017ರ ಜುಲೈನಲ್ಲಿ ಹುದ್ದೆಗೆ ತಾವೇ ರಾಜೀನಾಮೆ ನೀಡಿದರು. ಸಲಹಾ ಸಮಿತಿ ಕುಂಬ್ಳೆಯೇ ಮುಂದುವರಿಯಲು ಬಯಸಿದರೂ, ನಾಯಕ ಕೊಹ್ಲಿಗೆ ನನ್ನ ಕಾರ್ಯಾಚರಣೆ ಶೈಲಿ ಇಷ್ಟವಾಗದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕುಂಬ್ಳೆ ತಿಳಿಸಿದ್ದರು. 

ಕುಂಬ್ಳೆ ಅವಧಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನವನ್ನೇ ನೀಡಿತ್ತು. 2017ರಲ್ಲಿ ಮತ್ತೆ ಅರ್ಜಿ ಕರೆದಾಗ ಇಡೀ ದಿನ ಹೆಚ್ಚು ಕಡಿಮೆ ಮಧ್ಯರಾತ್ರಿವರೆಗೆ ಭಾರೀ ಗೊಂದಲ ನಡೆದು, ಕಡೆಗೆ ರವಿಶಾಸ್ತ್ರಿ ಮತ್ತೂಮ್ಮೆ ತರಬೇತುದಾರನಾಗಿ ಆಯ್ಕೆಯಾಗಿದ್ದು ಖಚಿತವಾಯಿತು. ಈ ಗೊಂದಲಗಳಿಗೆ ರವಿಶಾಸ್ತ್ರಿ ಮತ್ತು ಸಲಹಾ ಸಮಿತಿ ಸದಸ್ಯ ಸೌರವ್‌ ಗಂಗೂಲಿ ನಡುವಿನ ಭಿನ್ನಮತವೇ ಕಾರಣವೆಂದು ಹೇಳಲಾಗಿತ್ತು.

ನೂತನ ತರಬೇತುದಾರನ ಆಯ್ಕೆ ಪ್ರಕ್ರಿಯೆ ಹೇಗೆ?
ಭಾರತ ಕ್ರಿಕೆಟ್‌ ತಂಡದ ಮಾಜಿ ದಂತಕಥೆಗಳಾದ ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌, ಬಿಸಿಸಿಐನ ಉನ್ನತ ಸಲಹಾ ಸಮಿತಿ ಸದಸ್ಯರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತರಬೇತುದಾರರ ಆಯ್ಕೆ ವೇಳೆ ಬಿಸಿಸಿಐ ಈ ಮೂವರನ್ನೇ ಸಂಪರ್ಕಿಸಿತ್ತು. ಈ ಬಾರಿಯೂ ಬಿಸಿಸಿಐ ಆಡಳಿತಾಧಿಕಾರಿಗಳು ಇದೇ ಪರಂಪರೆಯನ್ನು ಮುಂದುವರಿಸುವ ನಿರೀಕ್ಷೆಯಿದೆ. ಈ ಮೂವರು ಸಂಭಾವ್ಯರ ಅರ್ಜಿ ಪರಿಶೀಲಿಸಿ, ಅಂತಿಮ ಹಂತಕ್ಕೆ ಬಂದವರ ಸಂದರ್ಶನ ನಡೆಸಿ, ನೂತನ ತರಬೇತುದಾರನನ್ನು ಆಯ್ಕೆ ಮಾಡಲಿದ್ದಾರೆ. ಸದ್ಯ ತರಬೇತುದಾರರಾಗಿರುವ ರವಿಶಾಸ್ತ್ರಿ ಅಂತಿಮ ಹಂತದ ಸಂದರ್ಶನಕ್ಕೆ ನೇರ ಪ್ರವೇಶ ಪಡೆಯಲಿದ್ದಾರೆ. ಅವರು ಇನ್ನಿತರ ಆಕಾಂಕ್ಷಿಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಹುದ್ದೆಗೆ ತರಬೇತುದಾರನ ಆಯ್ಕೆ ಮಾಡುವುದು ಭಾರೀ ಗೊಂದಲ ಮೂಡಿಸಿದೆ.

ಮುಂದಿನ ತರಬೇತುದಾರ ಯಾರಾಗಬಹುದು?
ಒಂದು ವೇಳೆ ತರಬೇತುದಾರನ ಹುದ್ದೆಗೆ ಅರ್ಜಿ ಕರೆದಿದ್ದೇ ಹೌದಾದರೆ, ನೂತನ ತರಬೇತುದಾರ ಯಾರಾಗಬಹುದು ಎಂಬ ಪ್ರಶ್ನೆ ಮೂಡಿದೆ. ರವಿಶಾಸ್ತ್ರಿ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಶೇ.90ರಷ್ಟು ಇದೆ. ಒಂದು ವೇಳೆ ಈ ಸ್ಥಾನಕ್ಕೆ ಬಲವಾದ ಹೆಸರುಗಳು ಸ್ಪರ್ಧೆ ನಡೆಸಿದರೆ, ಯಾರು ಆಯ್ಕೆಯಾಗುತ್ತಾರೆ ಎನ್ನುವುದು ಪ್ರಶ್ನೆ. ಸದ್ಯ ಭಾರತ ಎ ತಂಡ, 19 ವಯೋಮಿತಿಯೊಳಗಿನ ತಂಡಕ್ಕೆ ತರಬೇತುದಾರರಾಗಿ ಅತ್ಯಂತ ಯಶಸ್ವಿ ಪ್ರದರ್ಶನ ನೀಡಿರುವ ರಾಹುಲ್‌ ದ್ರಾವಿಡ್‌ ಈ ಹುದ್ದೆಗೆ ಅರ್ಜಿ ಸಲ್ಲಿಸಿದರೆ, ಅವರು ಆಯ್ಕೆಯಾಗುವುದು ಶೇ.100ರಷ್ಟು ಖಚಿತ. ಕಿರಿಯರ ತಂಡದ ತರಬೇತುದಾರರಾಗಿ ಅವರು ಪ್ರಭಾವೀ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂಬ ಹೆಗ್ಗಳಿಕೆಯೂ ಅವರಿಗಿದು. ಆದರೆ ಸ್ವತಃ ದ್ರಾವಿಡ್‌ಗೆ ಈ ಹುದ್ದೆಯಲ್ಲಿ ಆಸಕ್ತಿಯಿಲ್ಲ ಎನ್ನಲಾಗಿದೆ.

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.