
ಅರ್ಷದೀಪ್ ರನ್ನು ದೂಷಿಸುತ್ತಿಲ್ಲ, ಆದರೆ ನೋ ಬಾಲ್ ಹಾಕುವುದು ಅಪರಾಧ: ಹಾರ್ದಿಕ್
Team Udayavani, Jan 6, 2023, 11:31 AM IST

ಪುಣೆ: ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಶಿಸ್ತಿಲ್ಲದ ಬೌಲಿಂಗ್ ಕಾರಣದಿಂದ ಹಾರ್ದಿಕ್ ಬಳಗವು ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ಪಂದ್ಯಕ್ಕೆ ಸೋಲಿಗೆ ಪ್ರಮುಖ ಕಾರಣವಾದ ನೋ ಬಾಲ್ ಬಗ್ಗೆ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ.
ಪುಣೆ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದ ವೇಗಿ ಅರ್ಶದೀಪ್ ಸಿಂಗ್ ದುಬಾರಿಯಾದರು. ಕುಸಾಲ್ ಮೆಂಡಿಸ್ಗೆ ನೋ ಬಾಲ್ ಗಳ ಹ್ಯಾಟ್ರಿಕ್ ಸೇರಿದಂತೆ ಪಂದ್ಯದಲ್ಲಿ ಐದು ನೋ ಬಾಲ್ಗಳನ್ನು ಬೌಲ್ ಮಾಡಿದರು. ಶಿವಂ ಮಾವಿ ಮತ್ತು ಉಮ್ರಾನ್ ಮಲಿಕ್ ತಲಾ ಒಂದು ನೋಬಾಲ್ ಬೌಲಿಂಗ್ ಮಾಡುವ ಮೂಲಕ ಭಾರತವು ಪಂದ್ಯದಲ್ಲಿ ಒಟ್ಟು 12 ಹೆಚ್ಚುವರಿ ರನ್ಗಳನ್ನು ಸೋರಿಕೆ ಮಾಡಿತು.
23ರ ಹರೆಯದ ಅರ್ಷದೀಪ್ ಈಗ ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ನೋ ಬಾಲ್ ಗಳನ್ನು ಎಸೆದ ಕೆಟ್ಟ ದಾಖಲೆ ಪುಸ್ತಕಕ್ಕೆ ಸೇರಿದ್ದಾರೆ.
ಇದನ್ನೂ ಓದಿ:ಕನ್ನಡ ಕುಲಕೋಟಿಗೆ ಕೈಮುಗಿದು ಹಣೆಮಣಿದ ಮೇರು ಸಾಹಿತಿ ಪ್ರೊ.ದೊಡ್ಡ ರಂಗೇಗೌಡ
ಪಂದ್ಯದ ಬಳಿಕ ಮಾತಾಡಿದ ನಾಯಕ ಹಾರ್ದಿಕ್ ಪಾಂಡ್ಯ, ‘ಈ ಹಿಂದೆಯೂ ಅವರು ನೋ ಬಾಲ್ ಗಳನ್ನು ಎಸೆದಿದ್ದರು. ಇದು ದೂಷಿಸುವುದರ ಬಗ್ಗೆ ಅಲ್ಲ, ಆದರೆ ನೋ ಬಾಲ್ ಎಸೆಯುವುದು ಅಪರಾಧ’ ಎಂದರು.
“ಬೌಲಿಂಗ್ ಮತ್ತು ಬ್ಯಾಟಿಂಗ್ – ಎರಡೂ ಪವರ್ ಪ್ಲೇಯಲ್ಲಿ ನಮಗೆ ಹಾನಿಯಾಯಿತು. ನಾವು ಈ ಮಟ್ಟದಲ್ಲಿ ಮಾಡಬಾರದಂತಹ ಮೂಲಭೂತ ತಪ್ಪುಗಳನ್ನು ಮಾಡಿದ್ದೇವೆ. ನೀವು ಕೆಟ್ಟ ದಿನವನ್ನು ಹೊಂದಬಹುದು ಆದರೆ ಬೇಸಿಕ್ ವಿಚಾರಗಳಿಂದ ದೂರ ಹೋಗಬಾರದು” ಎಂದು ಪಾಂಡ್ಯ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
ಹೊಸ ಸೇರ್ಪಡೆ

ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು: ಡಿ.ಕೆ.ಶಿವಕುಮಾರ್

ದ.ಕ ಜಿಲ್ಲೆಯ ಯಾವ ಮೂಲೆಗೂ ನೀರಿನ ಸಮಸ್ಯೆ ಆಗದಂತೆ ನೋಡುತ್ತೇವೆ: ಜಿಲ್ಲಾಧಿಕಾರಿ

Cardiologist: ಸಾವಿರಾರು ಹೃದಯ ಸಂಬಂಧಿ ಸರ್ಜರಿ ಮಾಡಿದ್ದ ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ

Shivamogga: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರು

ಜೀವಂತವಾಗಿದ್ದರೂ ದಾಖಲೆಯಲ್ಲಿ ʼಮೃತ ವ್ಯಕ್ತಿʼ: ಎಡವಟ್ಟಿನಿಂದ ವೃದ್ಧಾಪ್ಯ ವೇತನವೇ ಗೋತಾ.!