ಜಪಾನ್‌ಗೆ ಬಂತು ಒಲಿಂಪಿಕ್ಸ್‌ ಜ್ಯೋತಿ

ವಿಶೇಷ ವಿಮಾನದಲ್ಲಿ ಆಗಮನ ; ನೀರಸ ಸಮಾರಂಭ

Team Udayavani, Mar 21, 2020, 6:00 AM IST

ಜಪಾನ್‌ಗೆ ಬಂತು ಒಲಿಂಪಿಕ್ಸ್‌ ಜ್ಯೋತಿ

ಹಿಗಶಿಮತ್ಸುಶಿಮ (ಜಪಾನ್‌): ಒಲಿಂಪಿಕ್ಸ್‌ ಜ್ಯೋತಿ ಶುಕ್ರವಾರ ಜಪಾನ್‌ಗೆ ಆಗಮಿಸಿತು. ಭಾರೀ ಸಂಭ್ರಮದಲ್ಲಿ ನಡೆಯಬೇಕಿದ್ದ ಜ್ಯೋತಿಯನ್ನು ಸ್ವಾಗತಿಸುವ ಕಾರ್ಯಕ್ರಮ ಕೋವಿಡ್‌ 19  ವೈರಸ್‌ ಹಾವಳಿಯಿಂದಾಗಿ ಬಹಳ ನೀರಸವಾಗಿ ಸಾಗಿತು.
ಒಲಿಂಪಿಕ್ಸ್‌ ಜ್ಯೋತಿಯಿದ್ದ ವಿಶೇಷ ವಿಮಾನ ಮಿಯಗಿ ಪ್ರಾಂತ್ಯದ ಮತ್ಸುಶಿಮ ವಾಯುನೆಲೆಯಲ್ಲಿ ಬಂದಿಳಿಯಿತು. 2011ರಲ್ಲಿ ಭೂಕಂಪ, ಸುನಾಮಿ ಮತ್ತು ಅಣು ಸ್ಥಾವರ ಸ್ಫೋಟದಿಂದ ನಲುಗಿದ ಫ‌ುಕುಶಿಮದ ಪರಿಹಾರ ಕಾರ್ಯಾಚರಣೆಯ ನೆಲೆಯಾಗಿ ಮತ್ಸುಶಿಮ ಕಾರ್ಯಾಚರಿಸಿತ್ತು. ಫ‌ುಕುಶಿಮ ಈಗ ಮರಳಿ ಎದ್ದು ನಿಂತಿರುವುದನ್ನು ಜಗತ್ತಿಗೆ ತೋರಿಸಿಕೊಡುವ ಸಲುವಾಗಿ ಜಪಾನ್‌ ಒಲಿಂಪಿಕ್ಸ್‌ ಜ್ಯೋತಿಯ ರಿಲೆಯನ್ನು ಇಲ್ಲಿಂದಲೇ ಪ್ರಾರಂಭಿಸಲಿದೆ. ಹೀಗಾಗಿ ಇದನ್ನು “ರಿಕವರಿ ಒಲಿಂಪಿಕ್ಸ್‌’ ಎಂದು ಜಪಾನ್‌ ಬಣ್ಣಿಸುತ್ತಿದೆ.

ಚೆರ್ರಿ ಬ್ಲಾಸಮ್‌ ವಿನ್ಯಾಸ
ಜಪಾನಿನ ಮಾಜಿ ಒಲಿಂಪಿಯನ್‌ರಾದ ಸಾವೊರಿ ಯೋಶಿದ ಮತ್ತು ತಡಹಿರೊ ನೊಮುರ ವಿಮಾನದಿಂದ ಜ್ಯೋತಿಯನ್ನು ಸ್ವೀಕರಿಸಿ ಅಗ್ಗಿಷ್ಟಿಕೆಯತ್ತ ಒಯ್ದರು. ಜಪಾನ್‌ನಲ್ಲಿ ರಿಲೇಗೆ ಒಯ್ಯುವ ಒಲಿಂಪಿಕ್ಸ್‌ ಜ್ಯೋತಿಯನ್ನು ದೇಶದ ರಾಷ್ಟ್ರೀಯ ಪುಷ್ಪವಾದ “ಚೆರ್ರಿ ಬ್ಲಾಸಮ್‌’ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಜ್ಯೋತಿಯನ್ನು ಸ್ವಾಗತಿಸಲು ಆಯ್ದ ಕೆಲವು ಗಣ್ಯರು ಮಾತ್ರ ಉಪಸ್ಥಿತರಿದ್ದರು.

ಸ್ಥಳೀಯ 200 ಮಕ್ಕಳು ಒಲಿಂಪಿಕ್ಸ್‌ ಜ್ಯೋತಿಯನ್ನು ಸ್ವಾಗತಿಸುವ ಅದ್ದೂರಿ ಕಾರ್ಯಕ್ರಮದ ರೂಪುರೇಷೆಯನ್ನು ಜಪಾನ್‌ ಒಲಿಂಪಿಕ್ಸ್‌ ಸಂಘಟಕರು ಸಿದ್ಧಪಡಿಸಿದ್ದರು. ಆದರೆ ಕೊರೊನಾದಿಂದಾಗಿ ಈ ಕಾರ್ಯಕ್ರಮ ರದ್ದಾಯಿತು.

ಒಲಿಂಪಿಕ್ಸ್‌ ಮುಖ್ಯ ಸಂಘಟಕ ಯೊಶಿರೊ ಮೋರಿಯ ಪುಟ್ಟ ಭಾಷಣದ ಬಳಿಕ ಒಲಿಂಪಿಕ್ಸ್‌ ಜ್ಯೋತಿಯಿಂದ ಅಗ್ಗಿಷ್ಟಿಕೆಯನ್ನು ಬೆಳಗಿಸಲಾಯಿತು.

ರಿಲೇ ವೀಕ್ಷಣೆಗೆ ಅವಕಾಶ
ಮಾ. 26ರಿಂದ ಜಪಾನ್‌ನಲ್ಲಿ ಒಲಿಂಪಿಕ್ಸ್‌ ಜ್ಯೋತಿಯ ರಿಲೇ ಪ್ರಾರಂಭವಾಗಲಿದೆ. ಒಲಿಂಪಿಕ್ಸ್‌ ಕೂಟದ ಪೂರ್ವದಲ್ಲಿ ನಡೆಯುವ ಅತೀ ದೊಡ್ಡ ಮತ್ತು ಅತ್ಯಂತ ಮುಖ್ಯವಾಗಿರುವ ಕಾರ್ಯಕ್ರಮ ಜ್ಯೋತಿಯ ರಿಲೇ. ಇದನ್ನು ಯಾವ ಕಾರಣಕ್ಕೂ ರದ್ದುಪಡಿಸುವುದಿಲ್ಲ ಎಂದು ಜಪಾನ್‌ ಹೇಳಿದೆ.

ರಿಲೇಯನ್ನು ನೋಡಲು ಜನರಿಗೆ ಅವಕಾಶ ಇದೆ. ಆದರೆ ಇದೇ ವೇಳೆ ಜನರು ಗುಂಪುಗೂಡಬಾರದು ಎಂದು ಜಪಾನ್‌ ಸರಕಾರ ವಿನಂತಿಸಿಕೊಂಡಿದೆ. ಒಂದು ವೇಳೆ ಜನಜಂಗುಳಿ ವಿಪರೀತವಾದರೆ ಕಾರ್ಯಕ್ರಮವನ್ನು ಬದಲಾಯಿಸುವ ಸಾಧ್ಯತೆಯೂ ಇದೆ ಎಂದು ಒಲಿಂಪಿಕ್ಸ್‌ ಸಂಘಟಕರು ಎಚ್ಚರಿಕೆ ನೀಡಿದ್ದಾರೆ.

ರಿಲೇಯಲ್ಲಿ ಭಾಗವಹಿಸುವವರ ದೇಹದ ತಾಪಮಾನವನ್ನು ದಿನವೂ ಅಳೆಯಲಾಗುವುದು. ಜು. 24ರಂದು ಒಲಿಂಪಿಕ್ಸ್‌ ಪ್ರಾರಂಭವಾಗುವ ಮೊದಲು 121 ದಿನ ಒಲಿಂಪಿಕ್ಸ್‌ ಜ್ಯೋತಿಯ ರಿಲೇ ನಡೆಯಲಿದೆ. ಅಂತಿಮವಾಗಿ ಜ್ಯೋತಿ ಒಲಿಂಪಿಕ್ಸ್‌ ತಾಣವಾದ ಟೋಕಿಯೊಗೆ ಆಗಮಿಸುತ್ತದೆ.

ಟಾಪ್ ನ್ಯೂಸ್

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.