ಒಲಿಂಪಿಕ್‌ ಟೆಸ್ಟ್‌ ಹಾಕಿ ಸರಣಿ: ಭಾರತ ತಂಡಗಳ ಗೆಲುವಿನ ಆರಂಭ


Team Udayavani, Aug 17, 2019, 11:02 PM IST

Hockey

ಟೋಕಿಯೊ: ಒಲಿಂಪಿಕ್‌ ಹಾಕಿ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಗಳೆರಡೂ ಗೆಲುವಿನ ಆರಂಭ ಪಡೆದಿವೆ. ಶನಿವಾರದ ಮುಖಾಮುಖೀಗಳಲ್ಲಿ ಮೊದಲು ವನಿತೆಯರು ಆತಿಥೇಯ ಜಪಾನ್‌ಗೆ 2-1ರಿಂದ ಆಘಾತವಿಕ್ಕಿದರೆ, ಬಳಿಕ ಪುರುಷರು ಮಲೇಶ್ಯ ಮೇಲೆ ಸವಾರಿ ಮಾಡಿ 6-0 ಅಂತರದ ಪ್ರಚಂಡ ಗೆಲುವು ಸಾಧಿಸಿದರು.

ಮಿಂಚಿದ ಗುರ್ಜೀತ್‌ ಕೌರ್‌
ಭಾರತದ ಪೆನಾಲ್ಟಿ ಕಾರ್ನರ್‌ ಸ್ಪೆಷಲಿಸ್ಟ್‌, 23ರ ಹರೆಯದ ಗುರ್ಜೀತ್‌ ಕೌರ್‌ ಎರಡೂ ಗೋಲು ಬಾರಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಆಕ್ರಮಣಕಾರಿಯಾಗಿ ಆಟ ಆರಂಭಿಸಿದ ಭಾರತಕ್ಕೆ ಮೊದಲ 10 ನಿಮಿಷದಲ್ಲೇ ಗೋಲು ಗಳಿಕೆಯ ಕೆಲವು ಅವಕಾಶ ಲಭಿಸಿತ್ತು. 9ನೇ ನಿಮಿಷದಲ್ಲಿ ಗುರ್ಜೀತ್‌ ಕೌರ್‌ ಖಾತೆ ತೆರೆಯುವ ಮೂಲಕ ಮುನ್ನಡೆ ಒದಗಿಸಿದರು. ಈ ಗೋಲು ಪೆನಾಲ್ಟಿ ಕಾರ್ನರ್‌ ಮೂಲಕ ಬಂತು.

ಜಪಾನ್‌ ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾದ್ದರಿಂದ 16ನೇ ನಿಮಿಷದಲ್ಲೇ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಯಿತು. ಅಕಿ ಮಿತ್ಸುಹಶಿ ಫೀಲ್ಡ್‌ಗೋಲ್‌ ಮೂಲಕ ಭಾರತದ ಮೇಲೆರಗಿದರು.

ಮಧ್ಯಾಂತರದ ವೇಳೆ ಪಂದ್ಯ 1-1 ಸಮಬಲದಲ್ಲಿತ್ತು. 3ನೇ ಕ್ವಾರ್ಟರ್‌ನಲ್ಲಿ ಭಾರತವೇ ಮೇಲುಗೈ ಸಾಧಿಸುತ್ತ ಹೋಯಿತು. ಪರಿಣಾಮ, 35ನೇ ನಿಮಿಷದಲ್ಲಿ ಗುರ್ಜೀತ್‌ ಬಾರಿಸಿದ ಗೋಲು. ಅವರು ಮತ್ತೂಂದು ಜಬರ್ದಸ್ತ್ ಪೆನಾಲ್ಟಿ ಕಾರ್ನರ್‌ ಹೊಡೆತದ ಮೂಲಕ ಭಾರತಕ್ಕೆ ಮುನ್ನಡೆ ತಂದಿತ್ತರು. ಈ ಮುನ್ನಡೆ ಕೊನೆಯ ತನಕ ಉಳಿದುಕೊಂಡಿತು.

16 ಆಟಗಾರ್ತಿಯರು
ಒಲಿಂಪಿಕ್‌ ಗೇಮ್‌ ನಿಯಮಾವಳಿಯಂತೆ ಎರಡೂ ತಂಡಗಳು 16 ಆಟಗಾರರನ್ನು ಕಣಕ್ಕಿಳಿಸಿದವು. ಬದಲಿ ಆಟಗಾರರಾಗಿ ಅವಕಾಶ ಪಡೆದರು. ಜಪಾನಿನ ಅಕಿ ಮಿತ್ಸುಹಶಿ ಬದಲಿ ಆಟಗಾರ್ತಿಯಾಗಿಯೇ ಬಂದು ಗೋಲು ಹೊಡೆದಿದ್ದರು.

ಇದೇ ಕೂಟದ ಪುರುಷರ ವಿಭಾಗದ ಪಂದ್ಯದಲ್ಲೂ ಭಾರತ ಗೆಲುವಿನ ಆರಂಭ ಮಾಡಿದೆ. ಮಲೇಶ್ಯವನ್ನು 6-0 ಗೋಲುಗಳಿಂದ ಮಣಿಸಿ ಮೆರೆದಾಡಿದೆ.

ಆರಂಭದ ನಿಮಿಷದಲ್ಲೇ ಮಲೇಶ್ಯ ಮೇಲೆ ಮುನ್ನುಗ್ಗಿ ಹೋದ ಭಾರತ, ಸಿಕ್ಕಿದ ಅವಕಾಶಗಳನ್ನೆಲ್ಲ ಬಳಸಿಕೊಂಡಿದ್ದರೆ ಇನ್ನೂ ಏಳೆಂಟು ಗೋಲುಗಳನ್ನು ಬಾರಿಸಬಹುದಿತ್ತು.

ಭಾರತದ ಪರ ಗುರ್ಜಿಂದರ್‌ ಸಿಂಗ್‌ 8ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಗುರುಸಾಹಿಬ್‌ಜೀತ್‌ ಸಿಂಗ್‌ (18ನೇ, 56ನೇ ನಿಮಿಷ) ಮತ್ತು ನಾಯಕ ಮನ್‌ದೀಪ್‌ ಸಿಂಗ್‌ (33ನೇ, 46ನೇ ನಿಮಿಷ) ತಲಾ 2 ಗೋಲು ಹೊಡೆದರು. ಕೊನೆಯ ಗೋಲನ್ನು ಎಸ್‌.ವಿ. ಸುನೀಲ್‌ ಸಿಡಿಸಿದರು (60ನೇ ನಿಮಿಷ).ಭಾರತ ರವಿವಾರ ನ್ಯೂಜಿಲ್ಯಾಂಡನ್ನು ಎದುರಿಸಲಿದೆ.

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.