ಬಲಿಷ್ಠ ಆಸೀಸ್‌ ವಿರುದ್ಧ ಡ್ರಾ ಸಾಧಿಸಿದ ವನಿತೆಯರು

ಒಲಿಂಪಿಕ್‌ ಟೆಸ್ಟ್‌ ಹಾಕಿ ಸರಣಿ

Team Udayavani, Aug 19, 2019, 5:55 AM IST

PTI8_17_2019_000031B

ಟೋಕಿಯೊ: ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ಎರಡು ಸಲ ಹಿನ್ನಡೆಯಿಂದ ಪಾರಾದ ಭಾರತದ ವನಿತೆಯರು, ಒಲಿಂಪಿಕ್‌ ಟೆಸ್ಟ್‌ ಹಾಕಿ ಸರಣಿಯ ರವಿವಾರದ ಪಂದ್ಯವನ್ನು 2-2 ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೌಂಡ್‌ ರಾಬಿನ್‌ ಲೀಗ್‌ ಮುಖಾಮುಖೀಯ ಮೊದಲ ಪಂದ್ಯದಲ್ಲಿ ಆತಿಥೇಯ ಜಪಾನ್‌ಗೆ 2-1 ಅಂತರದ ಸೋಲುಣಿಸಿದ ಉತ್ಸಾಹದಲ್ಲಿದ್ದ ಭಾರತ, ರವಿವಾರ ಆಸ್ಟ್ರೇಲಿಯ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿತು. ಭಾರೀ ಹೋರಾಟ ನಡೆಸಿ ಸೋಲಿನಿಂದ ಪಾರಾಯಿತು.

ಭಾರತದ ಪರ ವಂದನಾ ಕಟಾರಿಯಾ (36ನೇ ನಿಮಿಷ), ಗುರ್ಜೀತ್‌ ಕೌರ್‌ (59ನೇ ನಿಮಿಷ) ಗೋಲು ಬಾರಿಸಿದರು. ಆಸ್ಟ್ರೇಲಿಯ 14ನೇ ನಿಮಿಷದಲ್ಲೇ ಖಾತೆ ತೆರೆಯಿತು. ಕ್ಯಾಟಿÉನ್‌ ನಾಬ್ಸ್ ಅವರಿಂದ ಈ ಗೋಲು ದಾಖಲಾಯಿತು. ಇನ್ನೊಂದು ಗೋಲನ್ನು ಗ್ರೇಸ್‌ ಸ್ಟುವರ್ಟ್‌ 43ನೇ ನಿಮಿಷದಲ್ಲಿ ಬಾರಿಸಿದರು.

ಇತ್ತಂಡಗಳ ಆಕ್ರಮಣಕಾರಿ ಆಟ
ವಿಶ್ವದ 10ನೇ ರ್‍ಯಾಂಕಿಂಗ್‌ ತಂಡವಾಗಿರುವ ಭಾರತ, ಕಾಂಗರೂಗಳ ಆಕ್ರಮಣಕಾರಿ ಶೈಲಿಗೆ ತಕ್ಕಂತೆ ಬಿರುಸಿನ ಆಟಕ್ಕೆ ಇಳಿದಿತ್ತು. ಆದರೆ 14ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್‌ ಪಡೆದ ಆಸೀಸ್‌ ಇದನ್ನು ಗೋಲಾಗಿಸುವಲ್ಲಿ ಯಶಸ್ವಿಯಾಯಿತು. ಇದರಿಂದ ಸ್ಫೂರ್ತಿ ಪಡೆದ ವಿಶ್ವದ ನಂ.2 ತಂಡವಾಗಿರುವ ಆಸೀಸ್‌ ವಿರಾಮದ ತನಕ ಹಿಡಿತ ಸಾಧಿಸಿತು.

3ನೇ ಕ್ವಾರ್ಟರ್‌ನಲ್ಲೂ ಆಸೀಸ್‌ ಆಟ ಆಕ್ರಮಣಕಾರಿಯಾಗಿಯೇ ಇತ್ತು. ಆದರೆ 36ನೇ ನಿಮಿಷದಲ್ಲಿ ವಂದನಾ ಬಾರಿಸಿದ ಗೋಲು ಪಂದ್ಯವನ್ನು ಸಮಬಲಕ್ಕೆ ತಂದಿತು. ಇದೇ ಕ್ವಾರ್ಟರ್‌ನಲ್ಲಿ ಆಸೀಸ್‌ ಮತ್ತೆ ಭಾರತವನ್ನು ಓವರ್‌ಟೇಕ್‌ ಮಾಡಿತು.

ಸೋಲಿನಿಂದ ಭಾರತ ಪಾರು
ಇನ್ನೇನು ಆಸ್ಟ್ರೇಲಿಯ ಈ ಪಂದ್ಯವನ್ನು 2-1ರಿಂದ ತನ್ನದಾಗಿಸಿಕೊಳ್ಳಲಿದೆ ಎನ್ನುವಾಗಲೇ, ಅಂತಿಮ ನಿಮಿಷದಲ್ಲಿ ಡ್ರ್ಯಾಗ್‌ ಫ್ಲಿಕರ್‌ ಗುರ್ಜೀತ್‌ ಕೌರ್‌ ಆಪತಾºಂಧವರಂತೆ ಬಂದು ಭಾರತವನ್ನು ಬಚಾಯಿಸಿದರು.ಭಾರತ ಮಂಗಳವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಚೀನವನ್ನು ಎದುರಿಸಲಿದೆ.

ಪುರುಷರಿಗೆ ಸೋಲು
ರವಿವಾರ ನಡೆದ ಪುರುಷರ ಪಂದ್ಯದಲ್ಲಿ ಭಾರತ 1-2 ಅಂತರದಿಂದ ನ್ಯೂಜಿಲ್ಯಾಂಡಿಗೆ ಶರಣಾಯಿತು. ಪಂದ್ಯದ 2ನೇ ನಿಮಿಷದಲ್ಲೇ ಹರ್ಮನ್‌ಪ್ರೀತ್‌ ಸಿಂಗ್‌ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿ ಮೇಲುಗೈ ಒದಗಿಸಿದ್ದರು. ಇದನ್ನು 46ನೇ ನಿಮಿಷದ ತನಕ ಉಳಿಸಿಕೊಂಡ ಭಾರತ, ಬಳಿಕ ಲಯ ಕಳೆದುಕೊಂಡಿತು. 47ನೇ ನಿಮಿಷದಲ್ಲಿ ಜೇಕಬ್‌ ಸ್ಮಿತ್‌ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಆಗ ಪಂದ್ಯ ಡ್ರಾ ಆಗುವ ಸಾಧ್ಯತೆ ಇತ್ತು. ಆದರೆ ಕಟ್ಟಕಡೆಯ ನಿಮಿಷದಲ್ಲಿ ಸ್ಯಾಮ್‌ ಲೇನ್‌ ಗೋಲೊಂದನ್ನು ಬಾರಿಸಿ ಕಿವೀಸ್‌ ಗೆಲುವನ್ನು ಸಾರಿದರು.

ಭಾರತ ಮೊದಲ ಪಂದ್ಯದಲ್ಲಿ ಮಲೇಶ್ಯವನ್ನು 6-0 ಅಂತರದಿಂದ ಮಣಿಸಿತ್ತು. ಮಂಗಳವಾರ ಆತಿಥೇಯ ಜಪಾನ್‌ ವಿರುದ್ಧ ಆಡಲಿದೆ.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.