26 ವರ್ಷದ ಕ್ರಿಕೆಟಿಗರ ಪಡೆಗಿಂತ ಧೋನಿ ಶ್ರೇಷ್ಠ: ರವಿಶಾಸ್ತ್ರೀ


Team Udayavani, Dec 26, 2017, 7:35 AM IST

Ravi-Dhoni.jpg

ಹೊಸದಿಲ್ಲಿ: 26 ವರ್ಷದ ಕ್ರಿಕೆಟಿಗರ ಪಡೆಗಿಂತ 36ರ ಹರೆಯದ ಧೋನಿಯೇ ಬಲಿಷ್ಠ,. ಸದ್ಯದ ಮಟ್ಟಿಗೆ ಭಾರತೀಯ ಏಕದಿನ ತಂಡದಲ್ಲಿ ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಕ್ರಿಕೆಟಿಗ ಲಭ್ಯವಿಲ್ಲ ಎಂದು ರಾಷ್ಟ್ರೀಯ ಕೋಚ್‌ ರವಿಶಾಸ್ತ್ರೀ ಹೇಳಿದ್ದಾರೆ. ಮಾಜಿ ನಾಯಕನಲ್ಲಿ ಏನಾದರೂ ತಪ್ಪು ಗಳನ್ನು ಹುಡುಕುವ ಮೊದಲು ಟೀಕಾಕಾರರು ತಮ್ಮ 36ರ ಹರೆಯದಲ್ಲಿ ಹೇಗಿರಬಹುದೆಂದು ಅಲೋಚಿಸುವುದು ಒಳ್ಳೆಯದು ಎಂದು ಶಾಸ್ತ್ರೀ ಹೇಳುವ ಮೂಲಕ ಧೋನಿ ಅವರ ಸಾಮರ್ಥ್ಯವನ್ನು ಸಮರ್ಥಿಸಿಕೊಂಡಿದ್ದಾರೆ. 

ಶ್ರೀಲಂಕಾ ವಿರುದ್ಧ ನಡೆದ ಏಕದಿನ ಮತ್ತು ಟ್ವೆಂಟಿ20 ಸರಣಿಯಲ್ಲಿ ವಿಕೆಟ್‌ಕೀಪರ್‌ ತಥಾ ಬ್ಯಾಟ್ಸ್‌ಮನ್‌ ಧೋನಿ ಅವರ ಆಲ್‌ರೌಂಡ್‌ ನಿರ್ವಹಣೆಯು ಟೀಕಾಕಾರರ ಬಾಯಿ ಮುಚ್ಚಿ ಸಲು ಯಶಸ್ವಿಯಾಗಿದೆ. ವಿಕೆಟ್‌ ಹಿಂದುಗಡೆ ಧೋನಿ ಅವರ ಅದ್ಭುತ ನಿರ್ವಹಣೆಯನ್ನು ಗಮನಿಸಿಯೇ ರಾಷ್ಟ್ರೀಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್‌ ಕೂಡ 2019ರ ವಿಶ್ವಕಪ್‌ತನಕ ಧೋನಿ ಅವರು ವಿಕೆಟ್‌ಕೀಪರ್‌ ಆಗಿ ಮುಂದುವರಿಯಲಿದ್ದಾರೆಂದು ಹೇಳಿದ್ದಾರೆ.

ನಾವು ಮೂರ್ಖರಲ್ಲ. ಕ್ರಿಕೆಟನ್ನು ಕಳೆದ 20-40 ವರ್ಷಗಳಿಂದ ವೀಕ್ಷಿಸುತ್ತ ಬಂದಿದ್ದೇನೆ. ಭಾರತ ತಂಡದ ಪರ ವಿರಾಟ್‌ ಕೊಹ್ಲಿ ಕಳೆದೊಂದು ದಶಕದಿಂದ ಆಡುತ್ತಿದ್ದಾರೆ. ನಮಗೆ ತಿಳಿದಿದೆ, ಈ ಪ್ರಾಯದಲ್ಲಿ ಕೆಲವು ಆಟಗಾರರು ತಾವು ಕ್ರಿಕೆಟ್‌ ಆಡಿರುವುದನ್ನು ಮರೆತಿರಬಹುದು. ಆದರೆ ಧೋನಿ ಹಾಗಲ್ಲ. ಅವರು ಈಗ ಕೂಡ 26ರ ಹರೆಯದ ಕ್ರಿಕೆಟಿಗರನ್ನು ಕೂಡ ಸೋಲಿಸುವಷ್ಟು ಸಮರ್ಥರಿದ್ದಾರೆ ಎಂದು ಶಾಸಿŒ  ನುಡಿದರು. 

ಕನ್ನಡಿಯಲ್ಲಿ ನೋಡಿಕೊಂಡು 36ರ ಹರೆಯದಲ್ಲಿ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಿ. ವೇಗವಾಗಿ ಎರಡು ರನ್‌ ಗಳಿಸಲು ಸಾಧ್ಯವಿದೆಯಾ. ಆದರೆ ನೀವು ಎರಡು ರನ್‌ ಪೂರ್ತಿಗೊಳಿಸುವಷ್ಟರಲ್ಲಿ ಧೋನಿ ಮೂರು ರನ್‌ ಓಡಿರಬಹುದು. ಅಂತಹ ದೈಹಿಕ ಕ್ಷಮತೆಯನ್ನು ಧೋನಿ ಹೊಂದಿದ್ದಾರೆ. ಭಾರತಕ್ಕೆ ಎರಡು ವಿಶ್ವಕಪ್‌ ಗೆಲ್ಲಿಸಿಕೊಟ್ಟ ಅವರನ್ನು ಇವತ್ತಿನ ತನಕ ಏಕದಿನ ತಂಡದಿಂದ ಬದಲಿಸಲು ಬೇಕಾದ ಸಮರ್ಥ ವಿಕೆಟ್‌ ಕೀಪರ್‌ ಭಾರತಕ್ಕೆ ಲಭಿಸಿಲ್ಲ ಎಂದು ಶಾಸ್ತ್ರೀ ವಿವರಿಸಿದರು.

37ನೇ ಗೆಲುವು
ಶ್ರೀಲಂಕಾ ವಿರುದ್ಧದ ಟ್ವೆಂಟಿ20 ಸರಣಿಯನ್ನು ಕ್ಲೀನ್‌ಸಿÌàಪ್‌ಗೆçಯುವ ಮೂಲಕ ಭಾರತೀಯ ಈ ವರ್ಷ ಆಡಿದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 37ನೇ ಗೆಲುವು ದಾಖಲಿಸಿದೆ. ಇದೊಂದು ತಂಡ ಪ್ರಯತ್ನವಾಗಿದೆ. ವೈಯಕ್ತಿಕ ಸಾಧನೆಯಲ್ಲ. ತಂಡದ ಎಲ್ಲ ಆಟಗಾರರ ಪ್ರಯತ್ನದಿಂದಾಗಿ ಭಾರತ ಈ ಸಾಧನೆ ಮಾಡುವಂತಾಗಿದೆ. “ಐ’ ಎಂಬ ಪದವನ್ನು ಹೊರಗೆ ಬಿಸಾಡಬೇಕಾಗಿದೆ. ನಮ್ಮದು ಯಾವಾಗಲೂ “ವಿ’. ತಂಡ ಸಂಸ್ಕೃತಿಯನ್ನು ಪಾಲಿಸದಿದ್ದರೆ ಅಂತಹ ವ್ಯಕ್ತಿಗಳು ಮನೆಗೆ ತೆರಳಬಹುದು. ಅವರು ಎಂತಹ ದೊಡ್ಡ ವ್ಯಕ್ತಿಗಳೇ ಇರಬಹುದು. ಇದುವೇ ನಮ್ಮ ಈ ತಂಡದ ಯಶಸ್ಸಿನ ಗುಟ್ಟು ಎಂದು ರವಿಶಾಸ್ತ್ರೀ ತಿಳಿಸಿದರು.

ಟೆಸ್ಟ್‌  ಸರಣಿ ಜಯ ತಂಡದ ಗುರಿ
ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಮೊದಲ ಬಾರಿ ಟೆಸ್ಟ್‌ ಸರಣಿ ಗೆಲ್ಲುವ ಗುರಿಯನ್ನು ಭಾರತ ಇಟ್ಟುಕೊಂಡಿದೆ. ಜ. 5ರಿಂದ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಇದಕ್ಕಾಗಿ ಭಾರತೀಯ ತಂಡ ಡಿ. 27ರಂದು ಜೊಹಾನ್ಸ್‌ಬರ್ಗ್‌ಗೆ ತೆರಳಲಿದೆ.

ನಮಗೆ ಎಲ್ಲ ಎದುರಾಳಿಗಳು ಒಂದೇ. ಎದುರಾಳಿ ತಂಡವನ್ನು ಗೌರವಿಸಬೇಕಾಗಿದೆ ಮತ್ತು ಪ್ರತಿ ಯೊಂದು ಪಂದ್ಯವನ್ನೂ ತವರಿನ ಪಂದ್ಯದಂತೆ ಪರಿಗಣಿಸಲಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ನಾವು ಟೆಸ್ಟ್‌ ಸರಣಿ ಜಯಿಸಿಲ್ಲ. ಆದರೆ ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದೇವೆ ಎಂದು ರವಿಶಾಸ್ತ್ರೀ ಹೇಳಿದರು. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.