ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ :ಸೆಮಿಯಲ್ಲಿ ಎಡವಿದ ಸಿಂಧು
Team Udayavani, Apr 14, 2019, 9:37 AM IST
ಸಿಂಗಾಪುರ: “ಸಿಂಗಾಪುರ್ ಓಪನ್ ಕೂಟ’ದಲ್ಲಿ ಭಾರತದ ಕೊನೆಯ ಭರವಸೆಯಾಗಿದ್ದ ಪಿ.ವಿ. ಸಿಂಧು ಸೆಮಿಫೈನಲ್ನಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ನಲ್ಲಿ ಸಿಂಧು ವಿಶ್ವದ 3ನೇ ರ್ಯಾಂಕಿನ, ಜಪಾನಿನ ನೊಜೊಮಿ ಒಕುಹಾರಾ ವಿರುದ್ಧ ಯಾವುದೇ ಪೈಪೋಟಿ ನೀಡದೆ 7-21, 11-21 ಗೇಮ್ಗಳಿಂದ ಪರಾಭವಗೊಂಡರು.
ಸಿಂಧು ಅನೇಕ ತಪ್ಪುಗಳನ್ನು ಮಾಡುತ್ತ ಹೋದುದರಿಂದ ಗೆಲುವಿನ ಸಮೀಪವೂ ಸುಳಿಯಲಿಲ್ಲ. ಆದರೆ ಇನ್ಫಾರ್ಮ್ ಆಟಗಾರ್ತಿ ಒಕುಹಾರಾ ಸಂಪೂರ್ಣ ಹಿಡಿತ ಸಾಧಿಸಿ ಕೊಂಡರು. ಅವರನ್ನು ಕಟ್ಟಿಹಾಕುವಲ್ಲಿ ಸಿಂಧು ಅವರಲ್ಲಿ ಆತ್ಮವಿಶ್ವಾಸ ಮತ್ತು ತಾಳ್ಮೆಯ ಕೊರತೆ ಎದ್ದುಕಂಡಿತು.
ಮೊದಲ ಗೇಮ್ನಲ್ಲಿ 1-3 ಹಿನ್ನಡೆಯಲ್ಲಿದ್ದ ಸಿಂಧು ಅಂಕವನ್ನು 4-4 ಸಮಬಲಕ್ಕೆ ತಂದರು. ಅನಂತರ ಒಕುಹಾರ 6 ನೇರ ಅಂಕಗಳನ್ನು ಗೆದ್ದು 11-5ರಿಂದ ಮುನ್ನಡೆ ಸಾಧಿಸಿದರು. ಸಿಂಧು ಈ ವೇಳೆ ಹಲವು ತಪ್ಪುಗಳೆಸಗಿದ ಕಾರಣ ಭಾರೀ ಅಂತರದಿಂದ ಸೋತರು. ದ್ವಿತೀಯ ಗೇಮ್ನ ಆರಂಭದಲ್ಲಿ ಸಿಂಧು ಸ್ವಲ್ಪ ಪೈಪೋಟಿ ನೀಡಿದರೂ ಲಾಭವೇನೂ ಆಗಲಿಲ್ಲ.
ಒಕುಹಾರಾ ವಿರುದ್ಧ ಕಳೆದ ಎರಡು ಪಂದ್ಯಗಳನ್ನು ಜಯಿಸಿದ್ದ ಸಿಂಧು 7-6 ದಾಖಲೆ ಹೊಂದಿದ್ದಾರೆ. 2017 “ವಿಶ್ವ ಚಾಂಪಿಯನ್ಶಿಪ್’ ಫೈನಲ್ನಲ್ಲಿ ಇವರಿಬ್ಬರ ನಡುವೆ ಭಾರೀ ಪೈಪೋಟಿ ನಡೆದಿತ್ತು. 110 ನಿಮಿಷಗಳ ಕಾಲ ನಡೆದ ಈ ಪಂದ್ಯ ಬ್ಯಾಡ್ಮಿಂಟನ್ ಇತಿಹಾಸದ ಅದ್ಭುತ ವನಿತಾ ಸಿಂಗಲ್ಸ್ ಪಂದ್ಯ ಎಂದು ದಾಖಲಾಗಿತ್ತು. ವಿಶ್ವ ಚಾಂಪಿಯನ್ಶಿಪ್ ಫೈನಲ್ ಅನಂತರ ಸಿಂಧು-ಒಕುಹಾರ 6 ಬಾರಿ ಮುಖಾಮುಖೀಯಾಗಿದ್ದು, ಸಿಂಧು 4 ಬಾರಿ ಗೆಲುವು ದಾಖಲಿಸಿದ್ದಾರೆ.
ತೈ ಜು ಯಿಂಗ್ ಎದುರಾಳಿ
ಫೈನಲ್ನಲ್ಲಿ ಒಕುಹಾರಾ ವಿಶ್ವದ ನಂ.1ಆಟಗಾರ್ತಿ, ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮಿಫೈನಲ್ನಲ್ಲಿ ಅವರು ಜಪಾನಿನ ಅಕಾನೆ ಯಮಾಗುಚಿ ಅವರನ್ನು 15-21, 24-22, 21-19 ಗೇಮ್ಗಳಿಂದ ಸೋಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ